ವಿದೇಶಕ್ಕೆ ಹೋಗಿ ದುಡಿಯಬೇಕು ಅನ್ನೋ ಮೊದಲು ಯೋಚಿಸಿ; ವಿದೇಶದಿಂದ ವಾಪಸ್ ಬಂದ ಯುವಕರು ಹೇಳಿದ್ದೇನು ಗೊತ್ತಾ?

ವಿದೇಶಕ್ಕೆ ಹೋಗಬೇಕು ದುಡಿಯಬೇಕು, ಜೀವನ ಬದಲಾವಣೆ ಆಗಬೇಕು, ಕೆಲವೊಂದಷ್ಟು ಆಸೆ ಕನಸ್ಸುಗಳನ್ನ ಕಟ್ಟಿಕೊಂಡು ವಿದೇಶಕ್ಕೆ ಹೋಗುವ ಯುವಕರು ಅಲ್ಲಿಗೆ ಹೋಗುವ ಮುನ್ನ ತಾವು ತೆಗೆದುಕೊಂಡ ನಿರ್ಧಾರ ಎಷ್ಟು ಸರಿ, ಅದರಲ್ಲೂ ಏಜೇಂಟ್ ಮೂಲಕ ವಿದೇಶಕ್ಕೆ ಹೋಗಿ ದುಡಿಯುತ್ತೇನೆ ಅಂದುಕೊಳ್ಳೋರು ಮಾತ್ರ ಸಾವಿರ ಸಾಲ ಯೋಚಿಸಿದ್ರೂ ಕೂಡ ಅದು ಕಡಿಮೇನೆ. ಹೌದು ಹೀಗೆ ಹೋಗಿ ಮೋಸ ಹೋಗಿ ಹಣದ ಜೊತೆಗೆ ಕೆಲವೊಮ್ಮೆ ಸಾಯೋವರೆಗೂ ವನವಾಸ ಅನುಭವಿಸುವ ಸ್ಥಿತಿಗೆ ತಲುಪುವ ಸನ್ನಿವೇಶ ಬಂದ್ರು ಆಶ್ಚರ್ಯ ಪಡುವಂತಿಲ್ಲ. ಈಗ ಇಂತದ್ದೇ ಒಂದು ಸನ್ನಿವೇಶ ನಮ್ಮ ರಾಜ್ಯದ ಯುವಕರಿಗೆ ಎದುರಾಗಿತ್ತು.

WhatsApp Group Join Now
Telegram Group Join Now

ಹೌದು ಕುವೈತ್‌ನಲ್ಲಿ ತರಕಾರಿ ಪ್ಯಾಕಿಂಗ್ ಉದ್ಯಮದಲ್ಲಿ ತಿಂಗಳಿಗೆ 32,000 ರೂಪಾಯಿ ವೇತನದ ಉದ್ಯೋಗ ನೀಡುವ ಭರವಸೆಯನ್ನು ಆರು ತಿಂಗಳ ಹಿಂದೆ ಏಜೆಂಟ್ ನೀಡಿದ್ದರು. ಅದಕ್ಕಾಗಿ ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ಮೊತ್ತ ಮತ್ತು ಕಮಿಷನ್ ಎಂದು ಒಂದು ಲಕ್ಷ ರೂ. ಪಡೆದಿದ್ದ ಏಜೇಂಟ್ ಅಂದುಕೊಂಡಂತೆ ಯುವಕರನ್ನ ಕುವೈತ್ ಗೆ ಕಳುಹಿಸಿದ್ದಾನೆ. ಆದ್ರೆ ಅಲ್ಲಿ ಸಿಕ್ಕಾಪಟ್ಟೆ ಉದ್ಯೋಗವೆ ಬೇರೆ ಯುವಕರು ಅನುಭವಿಸಿದ ನರಕ ಯಾತನೆ ಇದ್ಯಲ್ಲ ಅದು ಖಂಡಿತಾ ಹೇಳ ತೀರದು. 

ಹೌದು ಎಜೇಂಟ್ ಮಾತು ನಂಬಿ ಕುವೈತ್ ಗೆ ಹೋದ ಯುವಕರಿಗೆ ದೊಡ್ಡ ಶಾಕ್ ಕಾದಿತ್ತು. ಈ ಯುವಕರು ಕುವೈತ್‌ಗೆ ತೆರಳಿದ ಬಳಿಕ ತರಕಾರಿ ಪ್ಯಾಕಿಂಗ್ ಕೆಲಸದ ಬದಲು ಒಂಟೆ ಸಾಕಣೆ ಕೆಲಸಕ್ಕೆ ಒತ್ತಾಯಿದ್ದಾರೆ. ಅಷ್ಟೇ ಅಲ್ಲದೆ ನಮಗೆ ಸಂಬಳವನ್ನು ಕೂಡ ಕೊಡ್ದೆ ಬಹಳ ಹಿನಾಯವಾಗಿ ಯುವಕರನ್ನ ನಡೆಸಿಕೊಂಡಿದ್ದಾರೆ. ಸಾಲದಕ್ಕೆ ಅವಮಾನ ಮಾಡೋದ್ರಲ್ಲಿ ಜೊತೆಗೆ , ಯುವಕರಿಗೆ ದೈಹಿಕ ಹಲ್ಲೆ ಮಾಡಿ ಊಟವನ್ನು ನೀಡದೆ ಹಸಿವಿನಿಂದ ನರಳುವಂತೆ ಮಾಡಿದ್ದರ ಜತೆಗೆ ಚಿತ್ರಹಿಂಸೆ ನೀಡದ್ದಾರಂತೆ.

ಇದನ್ನೂ ಓದಿ: ಆಭರಣ ಪ್ರಿಯರಿಗೆ ಗುಡ್ ನ್ಯೂಸ್! ಇಳಿಕೆಯಾದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿ 1,750 ರೂಪಾಯಿ ಇಳಿಕೆ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಹಣದಾಸೆಗೆ ಬಲಿಯಾಗುತ್ತೀರಾ ಹುಷಾರ್!

ಇನ್ನು ಯುವಕರು ತಮ್ಮ ಮೇಲಾದ ದೌರ್ಜನ್ಯದ ವಿರುದ್ಧ ದೂರು ನೀಡಲು ಪ್ರಯತ್ನಿಸಿದಾಗ, ಇಬ್ಬರ ಮೇಲು ಮತ್ತಷ್ಟು ಹಲ್ಲೆ ಮಾಡಲಾಗಿದ್ಯಂತೆ. ಮನೆಗಳಿಗೆ ಕರೆ ಮಾಡಲು ಕೂಡ ಅವಕಾಶ ಮಾಡಿಕೊಡದೆ ಬಹಳ ಹೀನಾಯವಾಗಿ ನಡೆಸಿಕೊಂಡಿದ್ರು ಅಂತ ನೊಂದ ಯುವಕರು ಅಳಲನ್ನ ತೋಡಿಕೊಂಡಿದ್ದಾರೆ. ಸದ್ಯ ಮಧ್ಯವರ್ತಿಯೊಬ್ಬರ ನೆರವಿನಿಂದ ಉದ್ಯೋಗ ಅರಸಿ ಕುವೈತ್​ಗೆ ತೆರಳಿ ವಂಚನೆಗೆ ಒಳಗಾಗಿದ್ದ ಕರ್ನಾಟಕದ ಆ ಇಬ್ಬರು ಯುವಕರನ್ನು ವಿದೇಶಾಂಗ ಸಚಿವಾಲಯ ರಕ್ಷಿಸಿದೆ.

ಇನ್ನು ಇಬ್ಬರು ಯುವಕರು ಬಬಲೇಶ್ವರ ತಾಲೂಕಿನ ವಿಜಯಪುರದ ಸಂಗಾಪುರ ಗ್ರಾಮದವಾರಾಗಿದ್ದು, 21ವರ್ಷದ ಸಚಿನ್ ಜಂಗಮಶೆಟ್ಟಿ ಮತ್ತು 22ವರ್ಷದ ವಿಶಾಲ್ ಸೆಲಾರ್ ವಂಚನೆಗೆ ಒಳಗಾದ ಯುವಕರಾಗಿದ್ದು, ಸದ್ಯ ವಿದೇಶಾಂಗ ಇಲಾಖೆಯಿಂದ ರಕ್ಷಿಸಲ್ಪಟ್ಟಿದ್ದು, ಹೆತ್ತವರನ್ನ ನೋಡಿ ಕಣ್ಣೀರಿಟ್ಟು, ತಮ್ಮಗಾದ ವಂಚನೆ ನೋವಿನ ಬಗ್ಗೆ ಎಲ್ಲವನು ಕೂಡ ಬಿಚ್ಚಿತ್ತಿದ್ದಾರೆ. ಇನ್ನು ಈಗಾಗ್ಲೇ ಗೊತ್ತಿರುವಂತೆ ಮುಂಬೈ ಮೂಲದ ಏಜೆಂಟ್‌ ಒಬ್ಬರು ಹೆಚ್ಚಿನ ಸಂಬಳದ ಕೆಲಸ ಒದಗಿಸುವ ಭರವಸೆ ನೀಡಿ ಒಂದು ಲಕ್ಷ ರೂ. ಪಡೆದು ವಂಚಿಸಿದ್ದಾಗಿ ಯುವಕರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

ಅಲ್ದೇ ವಿಚಾರ ಗಮನಕ್ಕೆ ಬಂದ ನಂತರ ಯುವಕರ ಕುಟುಂಬಸ್ಥರು ಬಿಜೆಪಿ ಮುಖಂಡ ಉಮೇಶ ಕೋಳಕೋರ ಅವರಿಗೆ ಮನವಿ ಸಲ್ಲಿಸಿದ್ದು, ಸಂಸದ ರಮೇಶ ಜಿಗಜಿಣಗಿ ನೆರವಿನೊಂದಿಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿ ನಾಲ್ಕು ದಿನಗಳ ಹಿಂದೆ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಭಾರತಕ್ಕೆ ಮರಳುವಂತೆ ಮಾಡಲಾಗಿದೆ. ಇನ್ನು ಈಗಾಗ್ಲೇ ಮುಂಬೈ ಮೂಲದ ಏಜೆನ್ಸಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಯುವಕರು ಹೇಳಿದ್ದಾರೆ. ಇನ್ನು ಪೊಲೀಸರು ಸಹ ಬೇರೆ ದೇಶಗಳಲ್ಲಿನ ಇಂತಹ ಆಫರ್‌ಗಳಿಗೆ ಬಲಿಯಾಗಬೇಡಿ ಅಂತ ರಾಜ್ಯದ ಯುವಕರಿಗೆ ಕಿವಿಮಾತನ್ನ ಹೇಳಿದ್ದು, ಇನ್ನಾದರೂ ಯುವ ಜನಾಂಗ ಎಚ್ಚೆತ್ತುಕೊಂಡು ಮುಂದುವರೆಯುತ್ತಾರ ಕಾದು ನೋಡಬೇಕಿದೆ.

ಇದನ್ನೂ ಓದಿ: ಮೋಡ ಬಿತ್ತನೆಯಿಂದಾಗಿ ಹಾವೇರಿ ಜಿಲ್ಲೆಯಲ್ಲಿ ಮಳೆ; ಶಾಸಕ ಪ್ರಕಾಶ್ ಕೋಳಿವಾಡರಿಂದ ಮೋಡ ಬಿತ್ತನೆ ಸಕ್ಸಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram