Lakshmi Daughter Aishwarya: ಸಿನಿಮಾ ಅವಕಾಶವಿಲ್ದೆ ಬದುಕು ನಡೆಸಲು ಸೋಪು ಮಾರ್ತಿದ್ದ ನಟಿ ಲಕ್ಷ್ಮಿ ಮಗಳಿಗೆ ಕಾಮುಕರ ಕಾಟ

ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲ ಪಂಚ ಭಾಷೆಗಳಲ್ಲಿ ನಟಿಸಿ ಬಹುಭಾಷಾ ತಾರೆಯಾಗಿ ಮೆರೆದ ನಟಿ ಲಕ್ಷ್ಮಿ ಅವರ ಸೌಂದರ್ಯಕ್ಕೆ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ. ಅಷ್ಟು ಅದ್ಭುತ ಕಲಾವಿದೆ, ಅವರ ನಟನೆಯಿಂದಲೇ ಎಲ್ಲರ ಮನಸ್ಸು ಗೆದ್ದು ಇಂದಿಗು ಕೂಡ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ತಮ್ಮ ಅಸ್ತಿತ್ವ ಉಳಿಸಿಕೊಂಡು ದೊಡ್ಡ ನಟಿಯಾಗಿಯೇ ಬೆಳೆದಿದ್ದರೆ. ಈಗಲೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನು ಇವ್ರು ಚಿತ್ರರಂಗ ದಲ್ಲಿ ಬಹಳ ಸಕ್ರಿಯರಾಗಿ ವೈವಾಹಿಕ ಜೀವನದಲ್ಲಿ ಕೆಲವೊಂದು ಕಹಿ ಘಟನೆಗಳನ್ನ ಅನುಭವಿಸಿದರು ಕೂಡ ಹೇಗೋ ಎಲ್ಲವನ್ನ ನಿಭಾಯಿಸಿಕೊಂಡು ನೆಮ್ಮದಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಈಗಲೂ ಕೂಡ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಆದರೆ ಲಕ್ಷ್ಮಿ ಅವರ ಮೊದಲ ಪತಿ ಭಾಸ್ಕರ ಅವರ ಮಗಳು ಐಶ್ವರ್ಯ ಭಾಸ್ಕರನ್ ಅವ್ರ ಇಂದಿನ ಜೀವನ ನೋಡಿದ್ರೆ ಖಂಡಿತವಾಗಿಯೂ ತುಂಬಾ ನೋವಾಗುತ್ತೆ ಅಷ್ಟರ ಮಟ್ಟಿಗೆ ಅವ್ರ ಜೀವನದಲ್ಲಿ ಬಿರುಗಾಳಿಯೇ ಬೀಸುತ್ತಿದೆ ಅಂದ್ರೆ ತಪಾಗಲ್ಲ.

WhatsApp Group Join Now
Telegram Group Join Now

ಹೌದು ಲಕ್ಷ್ಮಿ ಅವ್ರು ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಅಂದ್ರೆ 1969 ರಲ್ಲಿ ಭಾಸ್ಕರನ್ ಅವ್ರನ್ನ ಮದುವೆಯಾಗ್ತಾರೆ ಆರಂಭದಲ್ಲಿ ಚೆನ್ನಾಗಿದ್ದ ಸಂಸಾರ ಅನಂತರ ಸೂತ್ರವಿಲ್ಲದ ಗಾಳಿಪಟದಂತಾಗಿ ಜೂಲಿ ಲಕ್ಷ್ಮಿ ಅವ್ರು 1974ರಲ್ಲಿ ಭಾಸ್ಕರನ್ ಅವರಿಂದ ದೂರವಾಗಿ ಬಿಡುತ್ತಾರೆ. ಆದರೆ ಅಷ್ಟರಲ್ಲಿ ಲಕ್ಷ್ಮಿ ಅವ್ರಿಗೆ ಹೆಣ್ಣು ಮಗು ಇರುತ್ತೆ. ಅದು ಬೇರೆ ಯಾರು ಇಲ್ಲ ಇವತ್ತು ನಾನು ನಿಮಗೆ ಯಾರ್ ಬಗ್ಗೆ ಹೇಳ್ತಿದೀನೋ ಅದೇ ಐಶ್ವರ್ಯ ಭಾಸ್ಕರನ್ ಅವ್ರ ಜನನವಾಗಿರುತ್ತೆ. ಲಕ್ಷ್ಮಿ ಅವ್ರು ಪತಿಯಿಂದ ದೂರವಾದ್ರೂ ಮಗಳ ವಿಷಯ ದಲ್ಲಿ ಯಾವುದಕ್ಕೂ ಕಡಿಮೆ ಮಾಡದೆ ತಾವು ಎರಡನೇ ಮದುವೆಯಾದ್ರೂ ಮಗಳನ್ನ ಮಾತ್ರ ಬಹಳ ಮುದ್ದಾಗಿ ಪ್ರೀತಿಯಿಂದ ಸಾಕಿ ಬೆಳೆಸಿರುತ್ತಾರೆ. ಐಶ್ವರ್ಯ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ಅವ್ರು ಕೂಡ ಅದ್ಭುತ ನಟಿಯಾಗಿ ಬೆಳೆದು ನಿಂತಿರುತ್ತಾರೆ. ಆದರೆ ಅದೇನಾಯ್ತೋ ಏನೋ ಗೊತ್ತಿಲ್ಲ ತಾಯಿ ಅಂದ್ರೆ ಲಕ್ಷ್ಮಿ ಅವ್ರ ವಿರೋಧದ ನಡುವೆಯೇ ಐಶ್ವರ್ಯ ಪ್ರೀತಿಸಿದವರನ್ನೇ ಮದುವೆಯಾಗಿ ಬಿಡುತ್ತಾರೆ. ಹೌದು ಅಷ್ಟೆಲ್ಲ ಯಶಸ್ವಿ ಜೀವನವಿದ್ರು ತಾಯಿಯ ಮಾತಿಗೆ ಬೆಲೆ ಕೊಡದೆ ಲಕ್ಷ್ಮಿ ಅವ್ರಿಗೆ ಇಷ್ಟವಿಲ್ಲದೆ ಇದ್ರೂ 1994ರಲ್ಲಿ ತನ್ವಿರ್ ಅಹಮದ್ ಅವ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ.

ಇದನ್ನು ಓದಿ: ಯೂಟ್ಯೂಬರ್ ಚಂದನ್ ಗೌಡಗೆ ಸಿಗ್ತಿದೆ ಅಪಾರ ಜನಬೆಂಬಲ ನೈತಿಕ ಚುನಾವಣೆಗೆ ನಾಂದಿ ಹಾಡ್ತಾರಾ ಕೆ. ಆರ್. ಪೇಟೆ ಜನ

ತಾಯಿಯ ವಿರೋಧದ ನಡುವೆಯು ಮದುವೆ ಆದ್ರೂ..

ಹೌದು ಕನ್ನಡ ಸೇರಿದಂತೆ ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲ ಭಾಷೆಯಲ್ಲಿಯೂ ಕೂಡ ಗುರುತಿಸಿಕೊಂಡು ತಾಯಿ ಲಕ್ಷ್ಮಿ ಅಂತ ತಾವು ಕೂಡ ಸ್ಟಾರ್ ನಟಿಯಾಗಿ ಬೆಳೆಯುತ್ತ ಹೋಗ್ತಾರೆ ನಟಿ ಐಶ್ವರ್ಯ, ಆದ್ರೆ ಅದು ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಪ್ರೀತಿಯಲ್ಲಿ ಬೀಳುತ್ತಾರೆ. ಅಷ್ಟಾಗಿದ್ರು ಪರವಾಗಿಲ್ಲ ತಾಯಿಯ ವಿರೋಧದ ಮಧ್ಯೆಯೇ ಲಕ್ಷ್ಮಿ ಅವ್ರು ಬೇಡ ಅಂದ್ರು ಅವರ ಮಾತಿಗೆ ಬೆಲೆ ಕೊಡದೆ ತಾಯಿ ಯಿಂದ ದೂರವಾಗಿ ತನ್ವಿರ್ ಅಹಮದ್ ಅವ್ರ ಜೊತೆ ಹಸೆಮಣೆ ಏರುತ್ತಾರೆ. ಮದುವೆಯ ನಂತರ ಐಶ್ವರ್ಯ ಅವ್ರಿಗೆ ಅವಕಾಶಗಳು ಕಡಿಮೆಯಾಗುತ್ತೆ ಆದ್ರೆ ಸಂಸಾರದಲ್ಲಿ ಬ್ಯುಸಿ ಇದ್ದ ನಟಿಗೆ ಇದ್ಯಾವುದು ಕೂಡ ಅರಿವಿಗೆ ಬರೋದೇ ಇಲ್ಲ. ನೆಮ್ಮದಿಯಾಗಿ ಜೀವನ ಸಾಗಿಸುವತ್ತ ಒಲುವು ತೊರ್ತಾರೆ. ಆದ್ರೆ ಈ ನಾಟಕದ ಪ್ರೀತಿಯ ನೆಮ್ಮದಿ ಜೀವನ 6ತಿಂಗಳಿಗೆ ಹಲಸಲು ಶುರುವಾಗುತ್ತೆ ಅಂದ್ರೆ ಐಶ್ವರ್ಯ ಹಾಗೂ ತನ್ವಿರ್ ನಡುವೆ ಅದಾಗಲೇ ಭಿನ್ನಾಭಿಪ್ರಾಯಗಳು ಶುರುವಾಗಿಬಿಡುತ್ತವೆ. ಅದಾಗಿಯೂ 3ವರ್ಷಗಳ ಜೊತೆಯಾಗಿಯೇ ಇರುತ್ತಾರೆ ಆದರೆ ಅದೇನಾಗುತ್ತೋ ಏನೋ ಗೊತ್ತಿಲ್ಲ ತನ್ವಿರ್ ಅವರಿಂದ ನಟಿ ಐಶ್ವರ್ಯ ದೂರ ಆಗ್ತಾರೆ ಅಷ್ಟ್ರಲ್ಲಿ ಐಶ್ವರ್ಯ ಅವ್ರಿಗೆ ಅಮ್ಮ ಲಕ್ಷ್ಮಿ ಅವರಂತೆ ಹೆಣ್ಣು ಮಗು ಹುಟ್ಟಿರುತ್ತೆ. ಮಗುವಿನ ಜೊತೆಗೆ ಹೇಗೋ ಬದುಕೋಣ ಕಲಾ ಸರಸ್ವತಿ ನನ್ನೊಟ್ಟಿಗೆ ಇದ್ದಾಳೆ ಅಂತ ಭಾವಿಸಿ ಪತಿ ಯಿಂದ ದೂರವಾದ ನಟಿ ಐಶ್ವರ್ಯ ಅವ್ರ ಬದುಕಿನ ಸವಾಲಿನ ಕ್ಷಣಗಳು ಅಲ್ಲಿಂದ ಶುರುವಾಗುತ್ತೆ.

ಒಂದು ತಪ್ಪು ಜೀವನದ ಹಾದಿಯನ್ನೇ ಬದಲಾಯಿಸಿಬಿಟ್ಟಿತ್ತು.

ಹೌದು ಪತಿ ಯಿಂದ ದೂರವಾದ ನಟಿ ಐಶ್ವರ್ಯ ಅಮ್ಮ ಲಕ್ಷ್ಮಿ ಅವ್ರ ಬಳಿ ಹೋಗ ಬಹುದಿತ್ತು. ಆದ್ರೆ ಐಶ್ವರ್ಯ ಆಗೇ ಮಾಡಿಲ್ಲ ಸ್ವಾಭಿಮಾನದ ಮುಂದೆ ಯಾವುದು ಕಾಣಲೇ ಇಲ್ಲ. ಅಮ್ಮನ ಬಳಿಯೂ ಹೋಗದೆ ಹೇಗಾದ್ರು ಸರಿ ಜೀವನದ ಬಂಡಿ ಸಾಗಿಸಬೇಕು ಅಂತ ನಿರ್ಧಾರ ಮಾಡಿ ಮತ್ತೆ ಅವಕಾಶಗಳನ್ನ ಹುಡುಕಿ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡ್ತಾರೆ ಆದ್ರೆ ಅಷ್ಟ್ರಲ್ಲಿ ಐಶ್ವರ್ಯ ಅವ್ರಿಗೆ ಅವಕಾಶ ಗಳು ಕಡಿಮೆ ಆಗಿರುತ್ತೆ ಆಗೊಂದು ಈಗೊಂದು ಪಾತ್ರ ಗಳಲ್ಲಿ ಅಭಿನಯಿಸಿ ಜೊತೆಗೆ ಪೋಷಕ ಪಾತ್ರಗಳಲ್ಲೂ ನಟಿಸಲು ಶುರು ಮಾಡ್ತಾರೆ ಕಿರುತರೆ ಯಲ್ಲಿಯು ಕೂಡ ನಟಿಸುತ್ತ ಹೇಗೋ ಮಗಳನ್ನ ಯಾರ ಹಂಗಿಲ್ಲದೆ ಬೆಳಸಿ ಮಗಳಿಗೆ ಮದುವೆ ಯನ್ನು ಕೂಡ ಮಾಡಿ ಮುಗಿಸುತ್ತಾರೆ. ಅದಾದ ನಂತರವೂ ಅವರನ್ನ ಸ್ವಾಭಿಮಾನ ಬಿಡೋದಿಲ್ಲ. ಮಗಳಿಗೆ ಮದುವೆ ಮಾಡಿ ಮಗಳಿಂದ ಕೂಡ ದೂರ ಆಗ್ತಾರೆ, ಅವ್ರು ಬಯಸಿದ್ರೆ ಮಗಳ ಜೊತೆಗೆ ನೆಮ್ಮದಿಯಾಗಿ ಇರಬಹುದಿತ್ತು, ಆದ್ರೆ ಅವ್ರು ಆಗೇ ಮಾಡಲಿಲ್ಲ ತನ್ನ ಬದುಕನ್ನ ತಾನೇ ಬದುಕಬೇಕು, ನನ್ನ ಹೊರೆ ನನ್ನದೇ ಅಂತ ಬದುಕಲು ಶುರು ಮಾಡಿದಾಗ ಕಿರುತ್ತಾರೆಯಲ್ಲಿಯೂ ಅವಕಾಶ ಕಡಿಮೆ ಆಗುತ್ತೆ ಆಗಂತ ಐಶ್ವರ್ಯ ಅವ್ರು ಸುಮ್ನೆ ಕೂರಲಿಲ್ಲ. ಸೋಪು ಮಾರಾಟ ಮಾಡಲು ಆರಂಭಿಸುತ್ತಾರೆ.

ಹೋಗೋ ಒಬ್ಬಂಟಿಯಾಗಿ ಮಗಳನ್ನ ಸಾಕಿ ಮಗಳನ್ನ ದಡ ಮುಟ್ಟಿಸಿ ಸ್ವಾಭಿಮಾನದಿಂದ ಬದುಕು ಸಾಗಿಸಲು ಬಯಸಿದ ನಟಿ ಐಶ್ವರ್ಯ ಅವ್ರಿಗೆ ಜೀವನ ಅಷ್ಟು ಸುಲಭವಾಗಲಿಲ್ಲ. ಸೋಪು ಮಾರಿ ಜೀವನ ನಡೆಸ್ತಾ ಜೊತೆಗೆ ಯೌಟ್ಯೂಬ್ ಚಾನಲ್ ಒಂದರಲ್ಲಿ ಕುಕಿಂಗ್ ವಿಡಿಯೋಗಳನ್ನ ಮಾಡಿ ಹೇಗೋ ಬದುಕು ಕಟ್ಟಿಕೊಳ್ಳುತ್ತಾರೆ. ತಾವು ಸ್ಟಾರ್ ನಟಿಯ ಮಗಳು ಅನ್ನೊದನ್ನ ಬಿಟ್ಟು ಮನೆ ಮನೆಗೂ ಹೋಗಿ ಸೋಪ್ ಮಾರಾಟ ಮಾಡ್ತಾರೆ, ಇದರಲ್ಲಿ ಸ್ವಲ್ಪ ಬೆಳವಣಿಗೆ ಆದ್ಮೇಲೆ ತಮ್ಮ ಮೊಬೈಲ್ ನಂಬರ್ ಹಾಕಿ ಸೋಪ್ ಬೇಕಾದವ್ರು ನನಗೆ ಕರೆ ಮಾಡಿ ಅಂತ ಪ್ರಚಾರ ಮಾಡ್ತಾರೆ ಅದು ಕೂಡ ತಮ್ಮ ಹೊಟ್ಟೆ ಪಾಡಿಗಾಗಿ, ಆದರೆ ಇದನ್ನೇ ಬಂಡವಾಲವಾಗಿಸಿಕೊಂಡ ಕೆಲವು ನೀಚ ಮನಸ್ಥಿತಿ ಉಳ್ಳವರು ಐಶ್ವರ್ಯ ಅವ್ರಿಗೆ ತಮ್ಮ ಖಾಸಗಿ ಅಂಗದ ಫೋಟೋಗಳನ್ನ ತೆಗೆದು ವಾಟ್ಸಪ್ ಮಾಡೋದು ಅಶ್ಲೀಲವಾಗಿ ಮಾತನಾಡೋದನ್ನ ಮಾಡ್ತಾ ಪಾಪ ಐಶ್ವರ್ಯ ಅವ್ರ ನೆಮ್ಮದಿ ಯನ್ನ ಕಿತ್ತುಕೊಂಡಿದ್ದಾರೆ. ಮೊಬೈಲ್ ನೋಡಿದ್ರೆ ಎಲ್ಲಿ ಇಂತ ಕೆಟ್ಟ ಫೋಟೋ ಆಗು ಮೆಸೇಜ್ ಗಳನ್ನ ನೋಡಬೇಕಾಗುತ್ತೋ ಅನ್ನೋ ಭಯದಲ್ಲಿ ಐಶ್ವರ್ಯ ಬದುಕು ಸಾಗ್ತಿದೆ. ತಮ್ಮ ಮಗನ ವಯಸ್ಸಿನ ಗಂಡುಮಕ್ಕಳು ತಮ್ಮ ತೀಟೆ ತೀರಿಸಿಕೊಳ್ಳಲು ಈ ರೀತಿ ಕೆಟ್ಟದಾಗಿ ನಡೆದುಕೊಳ್ಳುತ್ತಿರೋದು ನೋಡ್ತಿದ್ರೆ ನಮ್ಮ ಸಮಾಜ ಎಲ್ಲಿಗೆ ಬಂದು ನಿಂತಿದೆ ಅಂತ ಒಂದು ಕ್ಷಣ ಭಯವಾಗ್ತಿದೆ ಸ್ನೇಹಿತರೆ. ಸ್ವತಃ ಇದೆಲ್ಲವನ್ನ ಐಶ್ವರ್ಯ ತಮ್ಮ ಯೂಟ್ಯೂಬ್ ಚಾನಲ್ ನಲ್ಲಿ ವಿಡಿಯೋ ಮಾಡಿ ಹಾಕಿ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ.

ಒಬ್ಬ ಹೆಣ್ಣು ಮಗಳು ಒಬ್ಬಂಟಿಯಾಗಿ ನಿಂತು ಸ್ವಾಭಿಮಾನ ದಿಂದ ಒಳ್ಳೆಯ ಹಾದಿ ಯಲ್ಲಿ ಬದುಕಬೇಕು ಅಂತ ಕಷ್ಟ ಪಡುವಾಗ ಇಂತ ಕೆಲವು ನೀಚರಿಂದ ಒಳ್ಳೆ ಹೆಣ್ಣು ಮಕ್ಕಳ ಜೀವನ ಕೂಡ ಅತಂತ್ರವಾಗಿಬಿಡುತ್ತೆ ಅಲ್ವಾ.

ಇದನ್ನು ಓದಿ: ತಮಾಷೆ ಮಾಡಲು ಹೋಗಿ ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಂಡ