ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿದರೂ ಉಳಿಯಲಿಲ್ಲ ನಟಿ ಮಾನ್ವಿತಾ ತಾಯಿ! ಅನಾಥೆ ಆದ ಮಾನ್ವಿತಾ

ಕೆಂಡಸಂಪಿಗೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಮಂಗಳೂರು ಹುಡುಗಿ ಮಾನ್ವಿತಾ ಕಾಮತ್. ಬಹಳ ಕ್ಯೂಟ್ ಹಾಗೂ ಹಾಗಯೇ ಅಷ್ಟೇ ಸಹಜವಾಗಿ ಮನೋಜ್ಞವಾಗಿ ನಟನೆ ಮಾಡುವ ನ್ಯಾಚುರಲ್ ಬ್ಯುಟಿ. ಕೆಂಡ ಸಂಪಿಗೆ ನಂತರ ಬಹಳ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಅದ್ಭುತ ನಟಿ. ಮೊದಲಿಗೆ ಆರ್‌ ಜೆ ಆಗಿ ರೇಡಿಯೊ ಮಿರ್ಚಿ ಯಲ್ಲಿ ವೃತ್ತಿ ಆರಂಭಿಸಿದ್ದ ಮಾನ್ವಿತಾ ನಂತರ ಕೆಂಡಸಂಪಿಗೆ’ ಚಿತ್ರಕ್ಕೆ ಆಡಿಶನ್ ನೀಡಿ ಆಯ್ಕೆ ಆದರು. ಕೆಂಡಸಂಪಿಗೆ’ ನಂತರ ಚೌಕ ಚಿತ್ರ ದಲ್ಲಿ ನಟಿಸಿದ್ದರು ಆದ್ರೂ ಇವ್ರ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್‌ ಕೊಟ್ಟಿದ್ದು ‘ಟಗರು’ ಚಿತ್ರ. ನಂತರ ತಾರಕಾಸುರ’ ಚಿತ್ರದಲ್ಲಿ ‘ಮುತ್ತಮ್ಮ’ ಪಾತ್ರದಲ್ಲಿ ಕಾಣಿಸಿಕೊಂಡರು. ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರದಲ್ಲಿ ವಸಿಷ್ಠಗೆ ಜೋಡಿಯಾಗಿ ನಟಿಸಿದ್ದಾರೆ. ಇಷ್ಟೆಲ್ಲ ಯಶಸ್ಸಿನ ಉತ್ತುಂಗದಲ್ಲಿರುವ ನಟಿಗೆ ಇದೀಗ ದೊಡ್ಡ ಅಘಾತವಾಗಿದೆ.

WhatsApp Group Join Now
Telegram Group Join Now

ಹೌದು ನಟಿ ಮಾನ್ವಿತಾ ಅವ್ರ ತಾಯಿ ಕಿಡ್ನಿ ವೈಫಲ್ಯ ದಿಂದ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಇನ್ನು ಮಾನ್ವಿತಾ ಕಾಮತ್ ತಾಯಿ ಸುಜಾತಾ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಕಾದ ಮಾಡಿಸಲಾಗಿತ್ತು. ಜೊತೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಸುಜಾತಾ ಅವ್ರಿಗೆ ಚಿಕಿತ್ಸೆ ಕೂಡ ನೀಡಲಾಗುತ್ತಿತ್ತು. ಬಹಳ ದಿನ ಗಳಿಂದ ಮಾನ್ವಿತಾ ತಾಯಿ ಸುಜಾತಾ ಕಾಮತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದಾರೆ. ವಿಷಯ ತಿಳಿದ ಮಾನ್ವಿತಾ ಅವ್ರ ಅಭಿಮಾನಿಗಳು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರುತ್ತಿದ್ದು ಮಾನ್ವಿತಾಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಆದ್ರೂ ಕೂಡ ಮಾತೃ ವಿಯೋಗ ಹೆಣ್ಣುಮಕ್ಕಳಿಗೆ ಬಹಳ ದೊಡ್ಡ ನೋವನ್ನ ಉಂಟುಮಾಡುತ್ತದೆ, ಹೀಗಾಗಿ ಮಾನ್ವಿತಾ ಇದೀಗ ದುಃಖದ ಮಡುವಿನಲ್ಲಿದ್ದಾರೆ.

ಕಿಡ್ನಿ ವೈಫಲ್ಯ, ಲಕ್ಷ ಲಕ್ಷ ಖರ್ಚು ಆದ್ರೂ ಬದುಕಲಿಲ್ಲ ಅಮ್ಮ!

ಇನ್ನು ಮಾನ್ವಿತಾ ಕಾಮತ್ ಅವ್ರ ತಾಯಿ ಸುಜಾತಾ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿದ್ದರು. ಹೀಗಾಗಿ ಮಾನ್ವಿತ ತಾಯಿ ಯನ್ನ ಉಳಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಿ ತಾಯಿಗೆ ಕಿಡ್ನಿ ಕಸಿ ಕೂಡ ಮಾಡಿಸಿದ್ರು. ಪೆಟ್ಟಿನ ಮೇಲೆ ಮತ್ತೊಂದು ಪೆಟ್ಟು ಎಂಬಂತೆ ಮಾನ್ವಿತಾ ಅವ್ರ ತಾಯಿಗೆ ಎರಡು ಬಾರಿ ಹೃದಯಾಘಾತ ಆಗಿತ್ತು. ಹೀಗಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆ ಯಲ್ಲಿ ಸುಜಾತಾ ಅವ್ರನ್ನ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ರು. ಕಳೆದ ಒಂದು ತಿಂಗಳಿಂದ ಅವರು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಸಾವಿನ ಹೊಸ್ತಿಲಲ್ಲಿದ್ದ ತಾಯಿ ಯನ್ನು ಉಳಿಸಿಕೊಳ್ಳಲು ಮಾನ್ವಿತಾ ಅವ್ರು ಲಕ್ಷ ಲಕ್ಷ ಖರ್ಚು ಮಾಡಿದ್ದರು. ಮತ್ತಷ್ಟು ಹಣ ಹೊಂದಿಸಲು ಬಹಳ ಕಷ್ಟ ಕೂಡ ಪಟ್ಟಿದ್ರು ಆದರು ಕೂಡ ಯಾವುದು ಪ್ರಯೋಜನಕ್ಕೆ ಬರಲಿಲ್ಲ ಎಲ್ಲವು ವಿಫಲವಾಯ್ತು.. ಇಂದು ಮಾನ್ವಿತಾ ಅವ್ರ  ತಾಯಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿಯೇಬಿಟ್ರು.

ಇದನ್ನೂ ಓದಿ: ದೇಹ ಮಾತ್ರ ಇತ್ತು ಮುಖ ಗುರುತೇ ಸಿಗಲಿಲ್ಲ ನಟಿ ಸೌಂದರ್ಯ ಸಾವಿನ ಬಗ್ಗೆ ಪ್ರೇಮಾ ಭಾವುಕ ಮಾತು.!

ಸೋನು ಸೂದ್ ಅವ್ರ ಸಹಾಯ ಅಮ್ಮನನ್ನ ಎಷ್ಟು ಕಾಪಾಡಿತ್ತು!

ಈ ಹಿಂದೆ ನಟಿ ಮಾನ್ವಿತಾ ಒಂದು ಟ್ವೀಟ್ ಮಾಡಿ ಅಮ್ಮನ ಚಿಕಿತ್ಸೆಗೆ ಸಹಾಯ ಮಾಡಿದ ಸೋನು ಸೂದ್ ಅವ್ರಿಗೆ ಧನ್ಯವಾದಗಳು ಅಂತ ತಿಳಿಸಿದ್ರು.. ಹೌದು ಮೊದಲಿಗೆ ಸುಜಾತಾ ಕಾಮತ್ ಅವ್ರಿಗೆ ಅನಾರೋಗ್ಯ ಉಂಟಾದಾಗ ಸೋನು ಸೂದ್ ಕಡೆ ಯಿಂದ ಸಹಾಯ ಸಿಕ್ಕಿತ್ತಂತೆ. ಇದನ್ನ ಸ್ವತಃ ಮಾನ್ವಿತ ಅವ್ರೆ ಟ್ವಿಟ್ ಮಾಡಿ ಅಭಿಮಾನಿಗಳೊಟ್ಟಿಗೆ ಹೊಂಚಿಕೊಂಡಿದ್ರು. ಹೌದು ಈ ಬಗ್ಗೆ ಟ್ವೀಟ್ ಮಾಡಿದ್ದ ಮಾನ್ವಿತಾ ಕಾಮತ್, ‘ಈಗತಾನೇ ಸೋನು ಸೂದ್ ಅವರ ಜತೆ ಮಾತನಾಡಿದೆ. ನನ್ನ ತಾಯಿಗೆ ಅವರು ಮಾಡಿದ ಸಹಾಯಕ್ಕೆ ಧನ್ಯವಾದ ಹೇಳಿದೆ. ನೀವು ನಿಜವಾದ ಹೀರೋ ಸರ್. ಎಲ್ಲದಕ್ಕೂ ಧನ್ಯವಾದ. ನಮ್ಮ ಸಂಕಷ್ಟ ದಲ್ಲಿ ಏಂಜಲ್ ರೀತಿ ಬಂದಿರಿ. ನಿಮ್ಮಿಂದಾಗಿ ನನ್ನ ತಾಯಿ ಇಂದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಮಾನ್ವಿತಾ ಬರೆದುಕೊಂಡಿದ್ದರು. ಇದನ್ನ ನೋಡಿದ ಅಭಿಮಾನಿಗಳು ಕೂಡ ತುಂಬಾ ಖುಷಿಪಟ್ಟು ನಟಿಗೆ ಧೈರ್ಯ ತುಂಬಿದ್ರು. ಆದ್ರೆ ಆ ಹರಕೆಗಳು ಇಂದು ಕೈ ಹಿಡಿಯಲಿಲ್ಲ ನಟಿ ಮಾನ್ವಿತ ತಾಯಿ ಸುಜಾತ ನಿಧನರಾಗಿದ್ದಾರೆ.

ಸದ್ಯ ಮಾನ್ವಿತಾ ಹರೀಶ್ ಕನ್ನಡ ಚಿತ್ರ ಗಳಲ್ಲಿ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಹೊಸ ಬಗೆಯ ಪಾತ್ರ ಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಆದರೆ ಅವ್ರ ತಾಯಿ ಸುಜಾತ ಅವ್ರ ಅಗಲಿಕೆ ಮಾನ್ವಿತಾ ಅವ್ರಿಗೆ ದೊಡ್ಡ ಹೊಡೆತವಾಗಿದ್ದು, ತಾಯಿಯ ಸಾವಿನ ದುಃಖದಿಂದ ನಟಿ ಮಾನ್ವಿತ ಹೊರಗೆ ಬಂದು ಮತ್ತೆ ನಟನೆಗೆ ಬರಲು ಬಹಳ ದಿನಗಳ ಕಾಲಬೇಕಾಗಬಹುದು. ಆದಷ್ಟು ಬೇಗ ನಟಿ ಮಾನ್ವಿತಾ ಅವ್ರು ತಾಯಿ ಅಗಲಿಕೆ ನೋವಿನಿಂದ ಹೊರಬಂದು ಮತ್ತೆ ಚಿತ್ರರಂಗದಲ್ಲಿ ತಮ್ಮನ್ನ ತಾಯಿ ತೊಡಗಿಸಿಕೊಂಡು ಸ್ಟಾರ್ ನಟಿಯಾಗಿ ಬೆಳೆಯಲಿ.. ಕನ್ನಡ ಉದಯೋಣ್ಮುಖ ಪ್ರತಿಭೆ ದೊಡ್ಡದಾಗಿ ಬೆಳೆಯಲಿ. ನಟಿ ಮಾನ್ವಿತಾ ಅವ್ರಿಗೆ ತಾಯಿ ಸಾವಿನ ನೋವಿನಿಂದ ಹೊರಬರುವ ಶಕ್ತಿಯನ್ನ ಆ ದೇವರು ನೋಡಲಿ. ಮಾನ್ವಿತಾ ಮತ್ತು ಕುಟುಂಬಕ್ಕೆ ದುಃಖ ಮರೆಯುವ ಶಕ್ತಿಯನ್ನ ಆ ಭಗವಂತ ಕರುಣಿಸಲಿ ಹಾಗೂ ಸುಜಾತ ಅವ್ರ ಆತ್ಮಕ್ಕೆ ಶಾಂತಿ ಸಿಗುವಂತಾಗಲಿ.

ಇದನ್ನೂ ಓದಿ: ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟ ನಟಿ ಕವಿತಾ ಗೌಡ.! ಮದುವೆ ಸುಂದರ ಕ್ಷಣಗಳು