ಕ್ಷೇತ್ರದ ಕೆಲಸ ಬಿಟ್ಟು ಯಾವ್ದೋ ಬಿಗ್ ಬಾಸ್ ಗೆ ಹೋಗಿದ್ದಾರೆ! ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಮಾಜಿ ಸಚಿವ ಸುಧಾಕರ್ ಗುಡುಗು

ಕನ್ನಡ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(Big boss Season 10) ಶುರುವಾಗಿದೆ ಇವತ್ತು ಮೊದಲ ದಿನದ ಆಟ. ಈ ಆಟಕ್ಕೆ ಒಂದು ಅಚ್ಚರಿ ಎಂಬಂತೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿ ಬಹಳ ಕುತೂಹಲ ಮೂಡಿಸಿದೆ. ಹೌದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇದೀಗ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ. ಏನು ಶಾಸಕರ ಎಂಟ್ರಿ ಆಫ್ ರೋಮು ಎಲ್ಲಾ ಕಡೆ ವೈರಲ್ ಆಗ್ತಿದಂತೆ ತರೆವರಿ ಪ್ರಶ್ನೆಗಳು ಶುರು ಆಗ್ತಿದೆ. ಅದರಲ್ಲೂ ಕೆಲವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಕಿಡಿಕಾರ್ತ ಇದ್ದಾರೆ. ಹಾಗಾದ್ರೆ ಚಿಕ್ಕಬಳ್ಳಾಪರು ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ಯಾಕೆ? ಶಾಸಕರಾಗಿ ಅಲ್ಲಿ ಇವರು ಮಾಡೋದೇನಿದೆ? ಬಿಗ್ ಮನೆಗೆ ಪ್ರದೀಪ್ ಈಶ್ವರ್ ಹೋಗಿದ್ಯಾಕೆ? ಬಿಗ್ ಮನೆಯಲ್ಲಿ ಪ್ರದೀಪ್ 100 ದಿನ ಇರ್ತಾರಾ? ದೊಡ್ಮನೆಯಿಂದ ಕೊಡುವ ಹಣವನ್ನ ಪ್ರದೀಪ್ ಈಶ್ವರ್ ಏನ್ ಮಾಡ್ತಾರೆ. ಈ ಎಲ್ಲ ಕುತೂಹಲಗಳು ಈಗಲೇ ಮೂಡಿವೆ. ಕಾರಣ, ಪ್ರದೀಪ್ ಈಶ್ವರ್ ಬಿಗ್ ಮನೆಗೆ ಹೋಗಿ ಎಲ್ಲರಿಗೂ ಆಶ್ವರ್ಯ ಮೂಡಿಸಿದ್ದಾರೆ.

WhatsApp Group Join Now
Telegram Group Join Now

ಇನ್ನು ಮನೆಯ ಇತರ ಸದಸ್ಯರಿಗೂ ಸಖತ್ ಶಾಕ್ ಕೊಟ್ಟಿದ್ದಾರೆ. ಇನ್ಮುಂದೆ ನಾವು ಶಾಸಕರ ಜೊತೆಗೆ ಸ್ಪರ್ಧೆಗಿಳಿಯಬೇಕು ಅನ್ನುವ ಟೆನ್ಷನ್ ಕೂಡ ಶುರು ಆಗಿದೆ. ಇದರೊಟ್ಟಿಗೆ ಬಿಗ್ ಬಾಸ್-10 ಮೊದಲ ದಿನವೇ ಸಂಚಲನ ಮೂಡಿಸಿದೆ. ಹೌದು ಬಿಗ್ ಬಾಸ್ ಮನೆ ಪ್ರವೇಶ ಮಾಡಿರೋ ಶಾಸಕ ಪ್ರದೀಪ್ ಈಶ್ವರ್ ಮನೆಯಲ್ಲಿ 100 ದಿನ ಇರ್ತಾರೆ ಅನ್ನುವ ಸುದ್ದಿ ಇದೆ. ಆದರೆ ಇದನ್ನ ನಂಬೋದು ಕಷ್ಟವೇ ಬಿಡಿ. ಬಿಗ್ ಮನೆಯಲ್ಲಿ 100 ದಿನ ಇರ್ತೇನೆ ಅಂದುಕೊಳ್ಳಬಹುದು. ಅದಕ್ಕಾಗಿ ಸಾಕಷ್ಟು ಟಾಸ್ಕ್‌ಗಳನ್ನೂ ಗೆಲ್ಲಬೇಕಾಗುತ್ತದೆ. ಒಳ್ಳೆ ಪರ್ಫಾಮೆನ್ಸ್ ಅನ್ನು ಕೊಡಬೇಕಾಗುತ್ತದೆ. ಆದ್ರೆ ಪ್ರದೀಪ್ ಈಶ್ವರ್ ಅವರಿಗೆ ಅವರದ್ದೆ ಆದ ಜವಾಬ್ದಾರಿಗಳೂ ಇವೆ. ಗೆಲ್ಲಿಸಿ ಕಳಿಸಿದ ಕ್ಷೇತ್ರದ ಜನರ ಕೆಲಸಗಳೂ ಇವೆ. ಅವುಗಳನ್ನ ಬಿಟ್ಟು ದೊಡ್ಮನೆಯೊಳಗೆ ಹೋಗಿ ಆಟವಾಡುತ್ತ ಹೋದ್ರೆ ಆಗುತ್ತದೆಯೇ? ಇಲ್ಲ ಬಿಡಿ. ಆದರೆ ಪ್ರದೀಪ್ ಅವರ ಬಿಗ್ ಬಾಸ್ ಎಂಟ್ರಿ ನೋಡಿ ಇದೀಗ ಮಾಜಿ ಸಚಿವ ಸುಧಾಕರ್ ಕಿಡಿಕಾರಿದ್ದು, ಶಾಸಕರ ನಡೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಬಿಗ್ ಬಿ ಮನೆಗೆ ಚಾರ್ಲಿ ಯಾಕ್ ಬರಲಿಲ್ಲ ಗೊತ್ತಾ? ಮುಂದಿನ ವಾರ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದು ಇತಿಹಾಸದಲ್ಲೇ ಇಲ್ಲ ಎಂದ ಮಾಜಿ ಸಚಿವ

ಹೌದು ಈಗಾಗಲೇ ಶಾಸಕ ಪ್ರದೀಪ್ ಈಶ್ವರ್(Pradeep Eshwar) ಹಾಗೂ ಮಾಜಿ ಸಚಿವ ಸುಧಾಕರ್ ಅವ್ರಿಗೂ ಆಗಿ ಬರೋದಿಲ್ಲ ಅನ್ನೋದು ಜಗತ್ ಜಾಹೀರಾ. ಒಬ್ರ ಬಗ್ಗೆ ಮತ್ತೊಬ್ಬರು ಮಾತಾಡೋದು ಸಹಜ ಅದ್ರಿಗ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಎಂಟ್ರಿ ಸುಧಾಕರ್ ಅವ್ರ ಬಾಯಿಗೆ ಅವ್ರನ್ನ ಆಹಾರ ಆಗುವಂತೆ ಮಾಡಿದ್ದು ಶಾಸಕರನ್ನ ಕಟುವಾಗಿ ಟೀಕಿಸಿದ್ದಾರೆ. ಹೌದು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಕ್ಟೊಬರ್ 11ರಂದು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ವಿಚಾರವನ್ನು ತಿಳಿಸಲು ಮಾಧ್ಯಮ ಗೋಷ್ಠಿ ನಡೆಸಿದ ಡಾ. ಕೆ. ಸುಧಾಕರ್‌ ಅವರು ಅದರ ನಡುವೆ ಪ್ರದೀಪ್‌ ಈಶ್ವರ್‌ ಬಗ್ಗೆಯೂ ಮಾತನಾಡಿದರು. ಯಾರಾದರೂ ಶಾಸಕರಾಗಿ ಬಿಗ್‌ ಬಾಸ್‌ಗೆ ಹೋಗ್ತಾರಾ? ಇವರು ಚಿಕ್ಕಬಳ್ಳಾಪುರವನ್ನು ನಗೆಪಾಟಲಿಗೆ ಈಡು ಮಾಡಿದ್ದಾರೆ.

ಇಡೀ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಕಲಶಪ್ರಾಯವಾಗಿತ್ತು. ಕ್ಷೇತ್ರದ ಮರ್ಯಾದೆ ಹಾಳು ಮಾಡ್ತಾರೆ ಅಂತ ಬಿಗ್‌ ಬಾಸ್‌ ಸೀಸನ್‌ 10ನಲ್ಲಿ ಭಾಗವಹಿಸಲು ದೊಡ್ಮನೆಗೆ ತೆರಳಿರುವ ಶಾಸಕ ಪ್ರದೀಪ್‌ ಈಶ್ವರ್‌ ಬಗ್ಗೆ ಮಾಜಿ ಶಾಸಕ, ಮಾಜಿ ಸಚಿವ ಡಾ. ಕೆ. ಸುಧಾಕರ್‌ ಅವರು ಆಡಿದ ಮಾತುಗಳು ಫುಲ್ ವೈರಲ್ ಆಗ್ತಿದೆ. ಹೌದು ಪ್ರದೀಪ್‌ ಈಶ್ವರ್‌ ಅವರು ಬಿಗ್‌ ಬಾಸ್‌ಗೆ ಹೋಗಿದ್ದರ ಬಗ್ಗೆ ಮಾತನಾಡಿದ ಅವರು, ಒಬ್ಬ ಶಾಸಕರಾಗಿ ಹೋಗಬಾರದಿತ್ತು ಕ್ಷೇತ್ರದಲ್ಲಿ ಅವರದ್ದೇ ಆದ ಕೆಲ್ಸಗಳಿವೆ ಅದನ್ನ ಬಿಟ್ಟು ಇದೆಲ್ಲಾ ಬೇಕಿತ್ತಾ ಅಂತ ವ್ಯಂಗ್ಯವಾಡಿದ್ದಾರೆ.

ಒಟ್ಟಿನಲ್ಲಿ ಯಾರು ಏನೇ ಅಂದ್ರು ಎಷ್ಟೇ ಟೀಕೆ ಟಿಪ್ಪಣಿ ಮಾಡುದ್ರು ಬಿಗ್ ಬಿ ಮನೆಗೆ ಪ್ರದೀಪ್ ಈಶ್ವರ್ ಎಂಟ್ರಿಕೊಟ್ಟಾಗಿದೆ. ಸದ್ಯಕ್ಕೆ ಅಲ್ಲಿ ಎಷ್ಟು ದಿನ ಇರ್ತಾರೆ ಅನ್ನುವ ಕುತೂಹಲ ಕೂಡ ಇದೆ. ಅಲ್ಲಿ ಕೊಡೊ ಟಾಸ್ಕ್‌ಗಳನ್ನ ಹೇಗೆ ನಿಭಾಯಿಸುತ್ತಾರೆ ಅನ್ನುವ ಕ್ಯೂರಿಯೋಸಿಟಿ ಅದಕ್ಕಿಂತ ಹೆಚ್ಚಾಗಿದೆ. ಯಾಕಂದ್ರೆ ಬಿಗ್ ಬಾಸ್ ಎರಡನೇ ದಿನವೇ ಪ್ರದೀಪ್ ಈಶ್ವರ್ ಎಂಟ್ರಿ ಆಗಿದ್ದು, ಸಂಚಲನ ಸೃಷ್ಟಿ ಆಗಿದೆ ಅಂತಲೂ ಹೇಳಬಹುದು. ಆದರೆ ಎಲ್ಲೋ ಒಂದು ಕಡೆ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಯ ಎಂಟ್ರಿಗೆ ಜನ ಸಾಮಾನ್ಯರ ಆಕ್ರೋಶವೂ ಶುರು ಆಗಿದೆ. ಅಲ್ದೇ ಸರ್ಕಾರಕ್ಕೆ ಜನ ಪ್ರಶ್ನೆಯನ್ನ ಕೂಡ ಕೇಳ್ತಿದ್ದಾರೆ. ಒಬ್ಬ ಶಾಸಕರಾಗಿ ಬಿಗ್ ಬಾಸ್‌ಗೆ ಹೋಗುವುದು ಎಷ್ಟು ಸರಿ ಅನ್ನುವ ಪ್ರಶ್ನೆಗಳ ಸುರಿಮಳೆ ಕೂಡ ಆಗುತ್ತಿದೆ. ಕೆಲವೊಬ್ರು ಟ್ರೋಲ್ ಕೂಡ ಮಾಡ್ತಿದ್ದಾರೆ. ಇನ್ನು ಕೆಲವರು ಇದನ್ನೇ ಬಂಡವಾಳ ಆಗಿಸಿಕೊಳ್ಳುತ್ತಿದ್ದಾರೆ. ಆದ್ರೆ ಬಿಗ್ ಬಾಸ್ ಮನೆ ಶಾಸಕ ಪ್ರದೀಪ್ ಈಶ್ವರ್ ಎಂಟ್ರಿಯ ಹಿಂದಿನ ರಹಸ್ಯ ಏನು ಅನ್ನೋದು ಬಹಿರಂಗವಾದಾಗ್ಲೇ ಎಲ್ಲರ ಪ್ರಶ್ನೆಗೂ ಉತ್ತರ ಸಿಗಲಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಟ್ಟ 17 ಸ್ಪರ್ಧಿಗಳು ಇವರೇ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram