ಪುತ್ರಿಗೆ ಗಂಡನಿಂದ ಕಿರುಕುಳ ಹಿನ್ನೆಲೆ ತಂದೆ ಮಾಡಿದ್ದೇನು? ಮೆರವಣಿಗೆ ಮಾಡಿ ಪಟಾಕಿ ಸಿಡಿಸಿ ಮಗಳನ್ನ ಕರೆತಂದ ಅಪ್ಪ..

ಮದುವೆಯಾದ ಹೆಣ್ಣುಮಕ್ಕಳು ಬಂದು ತವರು ನನೆಯಲ್ಲಿದ್ರೆ ಸಾಕು ಕೆಟ್ಟಿ ಬಂದು ತವರು ಸೇರಿದಳು ಆಗೇ ಹೀಗೆ ಅಂತ ಮಾತಾನಾಡೋರು ಒಂದೆಡೆ ಆದ್ರೆ ಹೆಣ್ಮಕ್ಳು ಏನೇ ಕಷ್ಟ ಬಂದ್ರು ತವರು ಮನೆಗೆ ಬರಬಾರದು ಇದ್ರು ಅಲ್ಲೇ ಹೋದ್ರು ಅಂದ್ರೆ ಸತ್ತರು ಗಂಡನ ಮನೆಯಲ್ಲೇ ಅನ್ನೋರ ಮಧ್ಯೆ ನಿಜಕ್ಕೂ ಹೆಣ್ಣು ಮಕ್ಕಳ ಜೀವನ ಮೂರಾಬಟ್ಟಿಯಾಗಿ ಬಿಡುತ್ತೆ. ಹೌದು ಗಂಡನ ಮನೆಯಲ್ಲಿ ಇರುವಂತಹ ಕಷ್ಟವನ್ನು ತವರು ಮನೆಗೆ ಹೇಳಿಕೊಳ್ಳದೆ ಎಷ್ಟೋ ಜನ ಹೆಣ್ಣು ಮಕ್ಕಳು ಸಾಯುವವರೆಗೂ ಕಷ್ಟ ಪಡೋದುಂಟು, ಇನ್ನೊಂದೆಡೆ ತನ್ನ ಮಕ್ಕಳು ಕಷ್ಟವನ ಹೇಳಿಕೊಂಡ್ರು ಕೂಡ ಇಲ್ಲ ಮಗಳೇ ಎಲ್ಲವು ಸರಿ ಹೋಗುತ್ತೆ. ನೀನೆ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡು ಹೋಗು ಅಂತ ಹೇಳು ತಂದೆ ತಾಯಿ ಕೂಡ ಇದ್ದಾರೆ ಈ ಮಧ್ಯೆ ಆ ಹೆಣ್ಣು ಮಗಳಿಗೆ ಏನ್ ಬೇಕಾದ್ರೂ ಆಗಬಹುದು ದುಃಖ ನೋವನ್ನು ಸಹಿಸಲಾರದೆ ಆ ಹೆಣ್ಣು ಮಗಳು ಯಾವ ನಿರ್ಧಾರಕ ಆದ್ರೂ ಬರಬಹುದು.

WhatsApp Group Join Now
Telegram Group Join Now

ಹೀಗಾಗಿ ಈ ತಂದೆ ಮಾಡಿರ್ತಕ್ಕಂತ ಕೆಲಸ ನಿಜಕ್ಕೂ ಕೂಡ ಗ್ರೇಟ್ ಅನ್ಬಹುದು. ಅದ್ದೂರಿಯಾಗಿ ಮಗಳ ಮದುವೆಯನ್ನು ಮಾಡಿಕೊಟ್ಟ ತಂದೆಗೆ ಶಾಕ್ ಎದುರಾಗಿತ್ತು. ತನ್ನ ಅಳಿಯ ದನ ಪಿಶಾಚಿ ಅನ್ನೋದು ಗೊತ್ತಾಗಿದೆ. ಹೀಗಾಗಿ ಮಗಳು ಸಾಕಷ್ಟು ಪ್ರಯತ್ನವನ್ನ ಪಡ್ತಾಳೆ ಅಮ್ಮನಿಗೆಲ್ಲೇ ಉಳಿದುಕೊಳ್ಳಬೇಕು ಅಂತ ಆದರೆ ಅದು ಅಸಾಧ್ಯವಾಯಿತು ಪ್ರತಿನಿತ್ಯ ಒಂದೇ ಒಂದು ಕಿರುಕುಳ ಧನ ಪಿಶಾಚಿ ಆದ ಗಂಡ ಹಾಗು ಅತ್ತೆ ಮಾವ ಎಲ್ಲರೂ ಸೇರಿಕೊಂಡು ವರದಕ್ಷಿಣೆ ತರುವಂತೆ ಒತ್ತಾಯ ಹೀಗಾಗಿ ಇನ್ನೊಂದು ಹೆಣ್ಣು ಮಗಳು ತಂದೆಗೆ ಎಲ್ಲವನ್ನ ಹೇಳಿಕೊಳ್ಳುತ್ತಾಳೆ ಆಗ ತಂದೆ ಮಾಡಿದ್ದೇನು ಅಂತ ಗೊತ್ತಾ ನಿಜಕ್ಕೂ ಕೂಡ ಅದು ತುಂಬಾನೇ ಇಂಟರೆಸ್ಟಿಂಗ್ ಅಂತ ಹೇಳಬಹುದು.

ಹೌದು ಯಾವಾಗ ತನ್ನ ಮಗಳಿಗೆ ಗಂಡನ ಮನೆಯಲ್ಲಿ ಇನ್ನಿಲ್ಲದ ಕಷ್ಟ ಆಗ್ತಾ ಇದೆ ಅಂತ ತಿಳಿದಂತಹ ತಂದೆ ಒಂದು ಉಪಾಯವನ್ನು ಮಾಡ್ತಾರೆ. ಮಗಳನ್ನ ಹಾಗೆ ಅಲ್ಲಿಂದ ಕರೆದುಕೊಂಡು ಬರಬಾರದು ಅವರಿಗೆ ಅವಮಾನ ಆಗಬೇಕು, ಕಾನೂನಿನ ಪ್ರಕಾರ ಹೋರಾಟ ಮಾಡೋದು ನಂತರದ ದಿನಗಳಲ್ಲಿ ಇದ್ದೇ ಇರುತ್ತೆ. ಆದರೆ ಮಗಳನ್ನು ಕರೆತರುವುದು ಅಲ್ಲಿ ಎಲ್ಲರಿಗೂ ಗೊತ್ತಾಗಬೇಕು ಅಂತ ಡಿಸೈಡ್ ಮಾಡಿ ಮಗಳನ್ನು ಪಟಾಕಿ ಸಿಡಿಸಿ ಅವಳಿಗೆ ಆರತಿ ಎತ್ತಿ ಅವಳನ್ನ ಸ್ವಾಗತ ಮಾಡ್ತಾ ತಮಟೆ ಹೊಡೆದು ವಾದ್ಯಗಳೊಂದಿಗೆ ಒಂದಷ್ಟು ಜನರ ಮಧ್ಯೆ ಮಗಳನ್ನು ಭರ್ಜರಿ ಸ್ಟೆಪ್ಸ್ ಆಗ್ತಾ ಕರ್ಕೊಂಡ್ ಬಂದಿದ್ದಾರೆ. ಇದು ಕೇಳೋಕೆ ವಿಚಿತ್ರ ಆದ್ರೂ ಕೂಡ ಈ ಒಂದು ಘಟನೆ ನಿಜಕ್ಕೂ ಒಂದಷ್ಟು ಜನರಿಗೆ ಮಾದರಿ ಅನ್ಬಹುದು.

ಹೌದು ಮಗಳು ಯಾವುದನ್ನು ಹೇಳಿಕೊಳ್ಳೋದು ಬೇಡ ತಂದೆ ತಾಯಿ ಚೆನ್ನಾಗಿರಲಿ ಅಂತ ಗಂಡನ ಮನೆಯಲ್ಲಿ ಸಾಕಷ್ಟು ಕಷ್ಟ ಪಟ್ಟಿದ್ದಾಳೆ. ಎಲ್ಲವನ್ನು ಕೂಡ ಬಚ್ಚಿಟ್ಟಿದ್ದಾಳೆ. ಆದ್ರೆ ಗಂಡನಿಗೆ ಈ ಹಿಂದೆಯೇ ಎರಡು ಮದುವೆಯಾಗಿದ್ದು ಇದೇ ರೀತಿ ಆ ಇಬ್ಬರು ಹೆಣ್ಣು ಮಕ್ಕಳಿಗೂ ಕಷ್ಟವನ್ನು ಕೊಟ್ಟು ಹಣವನ್ನ ಪೀಕಿ ಆನಂತರ ಅವರಿಬ್ಬರನ್ನ ಮನೆಯಿಂದ ಓಡಿಸಿ ತನ್ನನ್ನ ಮೂರನೇ ಮದುವೆಯಾಗಿರೋದು ಯಾವಾಗ ಗೊತ್ತಾಯ್ತು ಆ ಹೆಣ್ಣು ಮಗಳಿಗೆ ಸಹಿಸಿಕೊಳ್ಳಕಾಗುವುದಿಲ್ಲ. ಹಿಗಾಗಿ ತಂದೆಗೆ ಕರೆ ಮಾಡಿ ಎಲ್ಲವನ್ನು ಹೇಳಿಕೊಳ್ಳುತ್ತಾಳೆ ಆಗ ತಂದೆ ಮಾಡಿದ್ದು ಈ ಕೆಲಸವನ್ನು.

ಗಂಡನ ಮನೆಯಿಂಡ ತವರು ಮನೆಗೆ ಅದ್ದೂರಿಯಾಗಿ ಕರೆತಂದ ಅಪ್ಪ

ಸ್ನೇಹಿತರೆ ಈ ಒಂದು ಘಟನೆ ನಡೆದಿರುವುದು ಜಾರ್ಖಂಡ್ ನಲ್ಲಿ. ತಂದೆ ಪ್ರೇಮ್ ಗುಪ್ತ, ತನ್ನ ಮಗಳು ಸಾಕ್ಷಿ ಗುಪ್ತಳನ್ನ ರಾಂಚಿಯ ಸರ್ವೇಶ್ವರನಗರದ ಸಚಿನ್ ಗೆ ಕೊಟ್ಟು ಮದುವೆ ಮಾಡುತ್ತಾರೆ. ಇನ್ನು ಸಚಿನ್ ಜಾರ್ಖಂಡ್ ನ ಎಲೆಕ್ಟ್ರಿಸಿಟಿ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ನಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಹೀಗಾಗಿ ಸರ್ಕಾರಿ ಕೆಲಸ ಒಳ್ಳೆಯ ಸಂಬಳ ಅಂತ ಯೋಚಿಸಿ ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡುತ್ತಾರೆ. ಇನ್ನು ಮದುವೆಯಾದ ಮೊದಲ ಸಾಕ್ಷಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಆದರೆ ನಂತರದ ದಿನಗಳಲ್ಲಿ ಸಾಕಷ್ಟು ಕಿರುಕುಳವನ್ನು ಕೊಡಲು ಶುರು ಮಾಡ್ತಾರೆ. ಕೊನೆಗೆ ಸಾಕ್ಷಿ ಗುಪ್ತಳನ್ನ ಮನೆಯಿಂದ ಕೂಡ ಹೊರಗೆ ಹಾಕುತ್ತಾರೆ. ಆಗ ಸಾಕ್ಷಿ ಕೂಡ ಗಟ್ಟಿಗಿತ್ತಿ ಆದ್ದರಿಂದ ಇಲ್ಲ, ಇದು ನನ್ನ ಮನೆ ನಾನು ಯಾಕೆ ಹೋಗಬೇಕು ಅಂತ ಹೇಳಿ ಆ ಮನೆಯಲ್ಲಿ ಉಳಿದುಕೊಳ್ಳಲು ಸಾಕಷ್ಟು ಪ್ರಯತ್ನವನ್ನ ಪಡ್ತಾರೆ. ಆದ್ರೆ ನಂತರದ ದಿನದಲ್ಲಿ ಗಂಡನಿಗೆ ಎರಡು ಮದುವೆಯಾಗಿದ್ದು ಆತ ಆ ಹೆಣ್ಣು ಮಕ್ಕಳಿಗೂ ಇದೇ ರೀತಿಯ ಕಿರುಕುಳ ಕೊಟ್ಟಿದ್ದು ತನಗೆ ಕೂಡ ವರದಕ್ಷಿಣೆ ತರುವಂತೆ ಕಿರುಕುಳ ಕೊಡುತ್ತಿರುವುದು ಇದೆಲ್ಲವನ್ನು ಕೂಡ ಸಹಿಸಲು ಸಾಧ್ಯವಾಗುವುದಿಲ್ಲ.

ಕೊನೆಗೆ ಇಲ್ಲಿ ಇರಲು ಆಗುವುದೇ ಇಲ್ಲ ಅಂತ ನಿರ್ಧಾರ ಮಾಡಿದ ಸಾಕ್ಷಿ ಗುಪ್ತ ತನ್ನ ತಂದೆಗೆ ಕರೆ ಮಾಡಿ ಪ್ರತಿಯೊಂದು ಹೇಳಿದಾಗ ತನ್ನ ತಂದೆ ಬಂದು ಮಕ್ಕಳನ್ನು ಬಾಂಡ್ ಬಜ ಬಾರಿಸೋದ್ರ ಜೊತೆಗೆ ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತ ಮಾಡಿ ತನ್ನ ತವರು ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಿಜಕ್ಕೂ ಕೂಡ ಇದು ಒಂದು ರೀತಿಯ ಮಾದರಿ ಕೆಲಸ ಅಂತ ಹೇಳಬಹುದು ಎಷ್ಟೋ ಜನ ಹೆಣ್ಣು ಮಕ್ಕಳು ತಮಗೆ ಆಗ್ತಿರೋ ನೋವು ಕಷ್ಟವನ್ನು ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗ್ತಾರೆ. ಇಂತಹ ಸಂದರ್ಭದಲ್ಲಿ ತಂದೆ ತಾಯಿ ಸ್ವಲ್ಪ ಯೋಚಿಸಿ ಏನಾಗ್ಬಿಡುತ್ತೆ ನನ್ ಮನೆನಲ್ಲಿ ನನ್ನ ಮಗಳು ಇರಬಹುದು ಅಲ್ವಾ ಅಂತ ನಿರ್ಧಾರ ಮಾಡಿದ್ರೆ ಅಂತ ಹೆಣ್ಣು ಮಕ್ಕಳ ಪ್ರಾಣ ಉಳಿ ಬಹುದಲ್ವಾ ಇದರ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಇದನ್ನೂ ಓದಿ: ಇಂದಿನಿಂದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಅವಕಾಶ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram