Kiccha Sudeep: ನಿರ್ಮಾಪಕರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ರ ಕಿಚ್ಚ? ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಗಂಭೀರ ಆರೋಪ

Kiccha Sudeep: ನಟ ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಅತ್ಯದ್ಭುತ ಕಲಾವಿದ. ಸಾಕಷ್ಟು ಹಿಟ್ ಚಿತ್ರಗಳನ್ನ ಕೊಟ್ಟಿರುವ ಇವ್ರು ಇಂದಿಗೂ ಕೂಡ ಬಹಳ ಬೇಡಿಕೆಯ ನಾಯಕ ನಟ. ವಿಕ್ರಾಂತ್ ರೋಣ ಸಿನಿಮಾದ ನಂತರ ಯಾವುದೇ ಸಿನಿಮಾಗಳನ್ನ ಅನೌನ್ಸ್ ಮಾಡದ ಕಿಚ್ಚ ಸುದೀಪ್ ಮುಂದಿನ ಚಿತ್ರ ಯಾವುದಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿತ್ತು. ಈ ಮಧ್ಯೆ ಇನ್ನು ಹೆಸರಿಡದ ಕಿಚ್ಚ ಅವ್ರ 46ನೇ ಸಿನಿಮಾ ಕಿಚ್ಚ 46 ಹೆಸರಲ್ಲಿ ಆ ಚಿತ್ರದ ಟೀಸರ್ ಬಿಡುಗಡೆಯಗಿತ್ತು, ಅದ್ರಲ್ಲಿನ ಕಿಚ್ಚ ಅವ್ರ ಲುಕ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ನು ಟೀಸರ್ ಬಿಡುಗಡಯಾದ ಬೆನ್ನಲೇ ಕಿಚ್ಚ ಸುದೀಪ್ ಅವ್ರಿಗೆ ದೊಡ್ಡ ವಿವಾದ ಒಂದು ಅಂಟಿಕೊಂಡಿದೆ. ಹೌದು ನಟ ಕಿಚ್ಚ ಸುದೀಪ್ ಅವರು ಸಿನಿಮಾ ಮಾಡಿಕೊಡ್ತೀನಿ ಅಂತ ಹಣ ತಗೊಂಡು ಸಿನಿಮಾ ಮಾಡಿಕೊಟ್ಟಿಲ್ಲ, 8 ವರ್ಷದಿಂದ ಅವರು ನಮ್ಮನ್ನು ಸತಾಯಿಸುತ್ತಿದ್ದಾರೆ ಅಂತ ನಿರ್ಮಾಪಕ ಎಂ.ಎನ್ ಕುಮಾರ್ ಆರೋಪ ಮಾಡ್ತಿದ್ದಾರೆ. ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ. ನಾನು ಅವರಿಗೆ ಅಡ್ವಾನ್ಸ್ ಹಣ ನೀಡಿದ್ದೇನೆ, ಯಾವಾಗ ಕೇಳಿದ್ರೂ ನಾಳೆ ಅಂತಾರೆ, ಏನು ಮಾಡಬೇಕು” ಅಂತ ನಿರ್ಮಾಪಕ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

WhatsApp Group Join Now
Telegram Group Join Now

ನಾನು ಕೆಸಿಎನ್ ಮೂವೀಸ್‌ನಿಂದ ಬಂದವನು. ನಾನು ಸುದೀಪ್ ಅವರ ಜೊತೆ ರಂಗ ಎಸ್‌ಎಸ್‌ಎಲ್‌ಸಿ, ಮಾಣಿಕ್ಯ, ಮುಕುಂದ ಮುರಾರಿ, ಕಾಶಿ ಫ್ರಂ ವಿಲೇಜ್ ಮುಂತಾದ ಸಿನಿಮಾ ಮಾಡಿದ್ದೇನೆ. ಸ್ವಾತಿ ಮುತ್ತು, ವಿಷ್ಣುವರ್ಧನ ಸೇರಿ ಕೆಲ ಸಿನಿಮಾಗಳ ವಿತರಣೆ ಕೂಡ ಮಾಡಿದ್ದೇನೆ. ಆದ್ರೆ ಆನಂತರ ಕಳೆದ 8 ವರ್ಷಗಳಿಂದ ನಾನು ನಿಮ್ಮ ಸಿನಿಮಾ ಮಾಡುತ್ತೇನೆ ಅಂತ ಹೇಳಿಕೊಂಡು ಬರುತ್ತಲೇ ಇದ್ದಾರೆ. ನಾವು ಸುದೀಪ್ ಅವರ ಮ್ಯಾನೇಜರ್ ಬಳಿ ಕಾಂಟ್ಯಾಕ್ಟ್ ಮಾಡಿದಾಗಲೂ ಸಿನಿಮಾ ಮಾಡ್ತೀವಿ ಅಂತಲೇ ಹೇಳುತ್ತಿದ್ದಾರೆ. ಅಲ್ದೇ ವಿಕ್ರಾಂತ್ ರೋಣ ಸಿನಿಮಾ ಆದಮೇಲೆ ನಮ್ಮ ಸಿನಿಮಾ ಮಾಡಿಕೊಡ್ತೀನಿ ಅಂತ ಹೇಳಿದ್ದರು. ಜೊತೆಗೆ ನಂದಕಿಶೋರ್ ಅವರಿಗೆ ಹಣ ಕೊಡಿ, ಅವರು ಕಥೆ ಮಾಡಲಿ ಅಂತ ಸುದೀಪ್ ಹೇಳಿದಂತೆ ನಾವು ಮಾಡಿದ್ದೇವೆ. ಈಗ ಸುದೀಪ್ ಅವರು ಬೇರೆ ಸಿನಿಮಾ ಮಾಡಲು ಹೊರಟಿದ್ದಾರೆ ಅಂತ ಕುಮಾರ್ ಆರೋಪ ಮಾಡ್ತಿದ್ದಾರೆ.

ಇದನ್ನೂ ಓದಿ: ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್! ಅಪ್ಪು-ಕಿಚ್ಚ ಆಗ ಬೆಸ್ಟ್ ಪ್ರೆಂಡ್ಸ್ ಈಗ ಸಾನ್ವಿ-ಧೃತಿ ಕ್ಲೋಸ್ ಪ್ರೆಂಡ್ಸ್

8 ವರ್ಷದ ಹಿಂದೆ ಹಣ ಪಡೆದು ಈಗ ಕೈಗೆ ಸಿಗ್ತಿಲ್ಲ

ಹೌದು ನಾನು ಈ ಹಿಂದೆ ಕೊರೊನಾ ಸಮಯದಲ್ಲಿ 3 ವರ್ಷ ಸಿನಿಮಾ ಮಾಡೋಕೆ ಆಗಲಿಲ್ಲ. ಆದರೆ ಕೋಟಿಗೊಬ್ಬ, ಪೈಲ್ವಾನ್‌ ಸಿನಿಮಾ ನಂತರ ನಮ್ಮ ಜೊತೆ ಸುದೀಪ್(Kiccha Sudeep) ಸಿನಿಮಾ ಮಾಡಬೇಕಿತ್ತು. ಈಗ ಸುದೀಪ್ ಅವರು ಮದ್ರಾಸ್‌ನಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ, ನಾವು ಈಗ ಏನು ಮಾಡಬೇಕು. ರಂಗ ಎಸ್‌ಎಸ್‌ಎಲ್‌ಸಿ ಸಮಯದಲ್ಲಿ ನಾನು ಸುದೀಪ್ ಅವರಿಗೆ ಹಣ ಕೊಡಬೇಕು ಅಂತ ಇರಲಿಲ್ಲ. ಸುದೀಪ್ ಅವರ ಮನೆ ಮುಂದೆ ನಿರ್ಮಾಪಕರೊಬ್ಬರು ಬಂದು ನಿಂತಿದ್ದರು. ಅವರಿಗೆ ಸುದೀಪ್ ಹಣ ಕೊಡಬೇಕಿತ್ತು. ಆಗ ನಾನು ಹಣ ಕೊಟ್ಟಿದ್ದೆ. ಇದು ಜಾಕ್ ಮಂಜು ಅವರಿಗೆ ಗೊತ್ತು ಅವರನ್ನು ಕೇಳಿದ್ರೆ ನಿರ್ಮಾಪಕರು ಯಾರು ಅಂತ ಹೇಳುತ್ತಾರೆ ಎಂದಿದ್ದಾರೆ. ಜೊತೆಗೆ ಸುದೀಪ್ ಅವರ ಅಡುಗೆ ಮನೆ ರಿಪೇರಿಗೆ ನಾನು 10 ಲಕ್ಷ ರೂಪಾಯಿ ಕೊಟ್ಟಿದ್ದೇನೆ. ಅವರ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ಫೋಟೋ ಇದೆ, ಅದರ ಮೇಲೆ ಆಣೆ ಮಾಡಿ ದುಡ್ಡು ಯಾರತ್ರ ತಗೊಂಡ್ರು ಅಂತ ಹೇಳಲಿ ಅಂತ ಕುಮಾರ್ ಸವಾಲು ಹಾಕಿದ್ದಾರೆ. ಅಲ್ದೇ ಚಲನಚಿತ್ರಮಂಡಳಿ ಅವರು ಈ ಸಮಸ್ಯೆಯನ್ನು ಬಗೆಹರಿಸಬೇಕು, ಇದು ಬಗೆಹರಿದಿಲ್ಲ ಅಂದರೆ ಎಲ್ಲಿ ಧರಣಿ ಮಾಡಬೇಕು ಅಂತ ಗೊತ್ತಿಲ್ಲ, ನಾನು ಚಲನಚಿತ್ರಮಂಡಳಿಯ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನ್ನ ಜೊತೆ ಸುದೀಪ್ ಅವರು ಸಿನಿಮಾ ಮಾಡಿದರೂ ಪರವಾಗಿಲ್ಲ, ಮಾಡದಿದ್ದರೂ ಪರವಾಗಿಲ್ಲ, ಇದು ಬಗೆಹರಿಯಬೇಕು ಇಲ್ಲ ನನ್ನ ಹಣ ನಂಗೆ ವಾಪಾಸ್ ಕೊಡಬೇಕು ಅಂತ ಕುಮಾರ್ ಹೇಳಿದ್ದಾರೆ.

ಮುತ್ತತ್ತಿ ಸತ್ಯರಾಜ್ ಟೈಟಲ್ ಇಟ್ಟಿದ ಸುದೀಪ್

ಇನ್ನು ನಮ್ಮ ಸಿನಿಮಾಗೆ ಸುದೀಪ್ ಅವರೇ ಮುತ್ತತ್ತಿ ಸತ್ಯರಾಜ್ ಅಂತ ಟೈಟಲ್ ಇಡಿಸಿದ್ದಾರೆ. ನಿಜಕ್ಕೂ ಆ ಟೈಟಲ್ ಬೇರೆಯವರ ಬಳಿ ಇತ್ತು, ಅದನ್ನು ನಾನೇ ಫೈಟ್ ಮಾಡಿ ತಗೊಂಡೆ. ಸುದೀಪ್ ಅವರು ಹೈದರಾಬಾದ್‌ನಿಂದ ರೈಟರ್ ಕರೆಸಿ ಅಂತ ಹೇಳಿದ್ರು ಅದರಂತೆ ನಾವು ಕರೆಸಿದ್ರೆ 1 ವಾರ ಆದರೂ ಅವರನ್ನು ಭೇಟಿ ಮಾಡೋದಿಲ್ಲ” ಅಂತ ಕುಮಾರ್ ಆರೋಪ ಮಾಡಿದ್ದಾರೆ. ಜೊತೆಗೆ ನಾನು 45 ಸಿನಿಮಾಗಳ ನಿರ್ಮಾಣ ಮಾಡಿದ್ದೇನೆ , 200 ಸಿನಿಮಾ ವಿತರಣೆ ಮಾಡಿದ್ದೇನೆ. ನನ್ನಂತವರಿಗೆ ಈ ರೀತಿ ಸಮಸ್ಯೆ ಆದರೆ ಹೊಸಬರ ಕಥೆ ಏನು? ನಮ್ಮ ಚಿತ್ರರಂಗದಲ್ಲಿ ಹೀಗೆ ಆದರೆ ಏನು ಕಥೆ? ಸಿನಿಮಾ ರಂಗ ಬಾಯಿಮಾತಿನಲ್ಲಿ ನಡೆಯುತ್ತದೆ. ನಮ್ಮಿಂದ ಸುದೀಪ್ ಅವರು ಫುಲ್ ಸೆಟಲ್‌ಮೆಂಟ್ ಮಾಡಿದ್ದಾರೆ. ಸುದೀಪ್ ನನ್ನಿಂದ ಕೆಲ ಜನರಿಗೆ ಹಣ ಕೊಡಿಸಿದ್ದಾರೆ.

ಹೀರೋ ಮೇಲಿನ ನಂಬಿಕೆಯಿಂದ ನಾವು ಹಣ ನೀಡುತ್ತೇವೆ. ಆದರೆ ಹೀಗೆ ಮಾಡಿದ್ರೆ ಏನು ಕಥೆ ಅಂತ ಕುಮಾರ್ ಆರೋಪ ಮಾಡ್ತಿದ್ದಾರೆ. ಅಲ್ದೇ ನಾವು ಎಷ್ಟೇ ಬಾರಿ ಕಿಚ್ಚ ಸುದೀಪ್(Kiccha Sudeep) ಅವರನ್ನು ಕಾಂಟ್ಯಾಕ್ಟ್ ಮಾಡಲು ಪ್ರಯತ್ನಪಟ್ಟರೂ ಕೈಗೆ ಸಿಗೋದಿಲ್ಲ. ಇನ್ನು ನಿರ್ಮಾಪಕರು ನಾವು ಎಲ್ಲಿಂದ ದುಡ್ಡು ತಂದಿರುತ್ತೇವೆ ಅಂತ ನಿಮಗೆಲ್ಲ ಗೊತ್ತಿರುತ್ತದೆ, ನಾವೇ ದುಡ್ಡು ಕೊಟ್ಟು ಈಗ ಬೇಡುವ ಸಮಯ ಬಂದಿದೆ ಅಂತ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಅವರು ನಮ್ಮ ಜೊತೆ ಮಾತನಾಡಲಿ, ನಾನೇ ತಪ್ಪು ಮಾಡಿದ್ರೆ ನಾನು ಸುದೀಪ್ ಅವರ ಕಾಲು ಕೆಳಗೆ ನುಗ್ಗುವೆ ಸವಾಲು ಹಾಕಿರುವ ಕುಮಾರ್, ಉಮೇಶ್ ಬಣಕರ್, ಭಾ ಮ ಹರೀಶ್ ಅವರ ಬಳಿ ನನಗೆ 5.5 ಕೋಟಿ ರೂಪಾಯಿ ಕೊಡ್ತೀನಿ ಅಂತ ಸುದೀಪ್ ಅವರು ಹೇಳಿದ್ದಾರಂತೆ. ಬುಧವಾರದೊಳಗೆ ಸುದೀಪ್ ಅವರು ವಾಣಿಜ್ಯ ಚಲನಚಿತ್ರಮಂಡಳಿ ಮುಂದೆ ಮಾತನಾಡಿ ಈ ಸಮಸ್ಯೆ ಬಗೆಹರಿಸಲೇಬೇಕು ಇಲ್ಲದಿದ್ದರೆ ಮುಂದಿನ ಕ್ರಮಗಳಿಗೆ ನಾನು ಹೊಣೆಯಾಗೋದಿಲ್ಲ ಅಂತ ಹೇಳಿದ್ದಾರೆ.

ಇದನ್ನೂ ಓದಿ: ತಮ್ಮ ಕಾಲು ಕತ್ತರಿಸಿದ ವಿಚಾರ ಗೊತ್ತಾಗಿದ್ದೇ ನಾಲ್ಕನೇ ದಿನಕ್ಕೆ, ಸೂರಜ್ ಸ್ಥಿತಿ ಈಗ ಹೇಗಿದೆ? ವೈದ್ಯರು ಹೇಳಿದ್ದೇನು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram