Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್! ಸ್ನೇಹ-ಕಂಠಿ ಮದುವೆ ಮಾಡಿಸಿದ ಬಂಗಾರಮ್ಮ

Puttakkana Makkalu: ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 7:30ಕ್ಕೆ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಈಗ ಕಂಠಿ ಸ್ನೇಹ ಮದುವೆಯ ಸಂಚಿಕೆಗಳು ಬರುತ್ತಿದ್ದು ಇಬ್ಬರು ಬೇರೆಯವರ ಜೊತೆಗೆ ಮದುವೆಗೆ ಒಪ್ಪಿಕೊಂಡಿದ್ದರು. ಇದೀಗ ಅದೆಲ್ಲ ಉಲ್ಟಾ ಹೊಡೆದಿದ್ದು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಹೊಸ ತಿರುವು ಸಿಕ್ಕಿದೆ. ಇನ್ನು ಟ್ವಿಸ್ಟ್ ನೋಡಿ ಕಂಠಿ-ಸ್ನೇಹ ಒಂದಾಗಬೇಕು ಎನ್ನುತ್ತಿರುವ ಪ್ರೇಕ್ಷಕರು ಕೂಡ ಖುಷಿಯಾಗಿದ್ದಾರೆ.

WhatsApp Group Join Now
Telegram Group Join Now

ಕಂಠಿ-ರಾಧ ಮತ್ತು ಭುವನ್-ಸ್ನೇಹ ಮದುವೆ ನಿಂತು ಹೋಯಿತು

ಕಂಠಿ-ರಾಧ ಮತ್ತು ಭುವನ್-ಸ್ನೇಹ ಜೋಡಿ ದೇವಸ್ಥಾನಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ವಾಪಸ್ ಮಂಟಪಕ್ಕೆ ಬಂದಿದ್ದಾರೆ. ಕಂಠಿಯನ್ನು ಮೊದಲು ಹಸೆಮಣೆಗೆ ಕರೆತರಲಾಗುತ್ತದೆ. ಇನ್ನೊಂದೆಡೆ ಇಲ್ಲಿ ಭುವನ್ ಕೂಡ ಹಸೆಮಣೆ ಮೇಲೆ ಕೂತಿರುತ್ತಾರೆ ಆಗ ಸ್ನೇಹ ಅವರು ಕೂಡ ಭುವನ್ ಜೊತೆ ಹಸೆಮಣೆ ಮೇಲೆ ಕೂರುತ್ತಾರೆ ಭುವನ್ ಕೂಡ ಸ್ನೇಹಗಳನ್ನು ನೋಡುತ್ತಿರುತ್ತಾನೆ ಆದರೆ ಸ್ನೇಹ ಭುವನ್ ಅನ್ನು ಬೇಜಾರಿಂದ ನೋಡುತ್ತಾಳೆ. ಭುವನ್ ಹಾಗೂ ಸ್ನೇಹ ಮದುವೆ ಇನ್ನೇನು ಆಗುತ್ತೆ ಅನ್ನುವ ಅಂತಕ್ಕೆ ಬರುತ್ತೆ ಭುವನ್ ಕೂಡ ಕೈಯಲ್ಲಿ ತಾಳಿ ಹಿಡಿದುಕೊಂಡು ರೆಡಿಯಾಗಿರುತ್ತಾನೆ. ಇನ್ನೊಂದು ಕಡೆ ಕಂಠಿ ಬಂದು ಹಸೆಮಣೆ ಮೇಲೆ ಕೂತುಕೊಂಡಿದ್ದರು ಕೂಡ ರಾಧಾ ಮಾತ್ರ ಬಂದಿರಲಿಲ್ಲ ರಾಧಾಳನ್ನು ಕರೆತರಲು ರೂಮಿಗೆ ಹೋದಾಗ ಆಕೆ ಅಲ್ಲಿ ಇರುವುದಿಲ್ಲ ಬಾಗಿಲು ಕೂಡ ತೆಗೆದಿರುತ್ತದೆ ಆದರೆ ಆಕೆ ಅಲ್ಲಿ ಇರುವುದಿಲ್ಲ ತುಂಬಾ ಹುಡುಕಾಟ ಕೂಡ ನಡೆಸುತ್ತಾರೆ ಕೊನೆಗೆ ಅವಳ ಮೊಬೈಲ್ ಬೆಡ್ ಮೇಲೆ ಇರುವುದನ್ನು ಗಮನಿಸುತ್ತಾರೆ ನಂತರ ಈ ವಿಷಯವನ್ನು ಮಂಟಪಕ್ಕೆ ಬಂದು ಬಂಗಾರಮ್ಮಗೆ ಹೇಳುತ್ತಾರೆ ಆಗ ಎಲ್ಲರೂ ಕೂಡ ಶಾಕ್ ಆಗುತ್ತಾರೆ.

ಇನ್ನೊಂದು ಕಡೆ ಭುವನ್ ತಾಳಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದಾನೆ ಆದರೆ ಆ ಸಮಯದಲ್ಲಿ ಆತ ನನಗೆ ಈ ಮದುವೆ ಇಷ್ಟ ಇಲ್ಲ ನಾನು ಸ್ನೇಹಳನ್ನು ಮದುವೆ ಆಗುವುದಿಲ್ಲ ಅನ್ನುವಂತ ಮಾತು ಹೇಳುತ್ತಾನೆ. ಇದನ್ನು ಕೇಳಿ ಸ್ನೇಹ ಶಾಕ್ ಆಗುತ್ತಾಳೆ ಅದರಲ್ಲೂ ಪುಟ್ಟಕ್ಕ ಅಲ್ಲೇ ಕುಸಿದು ಬೀಳುತ್ತಾಳೆ. ಇನ್ನೂ ರಾಧ ಎಲ್ಲಿಗೆ ಹೋಗಿದ್ದಾಳೆ ಎಂದು ಹುಡುಕುವಾಗ ರಾಧಾಳ ರೂಮ್ನಲ್ಲಿ ಒಂದು ಪತ್ರ ಸಿಗುತ್ತದೆ ಅದರಲ್ಲಿ”ಲೇ ಕಂಠಿ ನಾನು ಮತ್ತೆ ಸಹನ ಮದ್ವೆ ಆಗುವುದನ್ನು ತಡೆದೆ ಅಲ್ವಾ, ಈಗ ನಿನ್ ಮದ್ವೇನಾ ತಡೀತೀನಿ ಕಲಾ” ಇಂತಿ ಕಾಳಿ. ಈಗ ಪತ್ರ ನೋಡಿದ ಮೇಲೆ ರಾಧಾಳನ್ನು ಕಾಳಿ ಕಿಡ್ನಾಪ್ ಮಾಡಿದ್ದಾನೆ ಎಂದು ಗೊತ್ತಾಗುತ್ತದೆ.

Image Credit: Zee Kannada

ಸ್ನೇಹ ಜೊತೆ ಕಂಠಿ ಮದುವೆ ಮಾಡಿಸುತ್ತಾಳ ಬಂಗಾರಮ್ಮ

ಇನ್ನು ಇದೀಗ ಒಂದು ಕಡೆ ಸ್ನೇಹಗಳ ಮದುವೆ ಅರ್ಧಕ್ಕೆ ನಿಂತು ಹೋಯ್ತು ಕಂಠಿ ಮದುವೆ ಕೂಡ ಹೀಗೆ ಆಯಿತು. ಇನ್ನು ಕಂಠಿ ಸ್ನೇಹ ಪ್ರೀತಿಯನ್ನು ಅರಿತು ಬಂಗಾರಮ್ಮನೆ ಈ ಇಬ್ಬರ ಮದುವೆಯನ್ನು ಮಾಡಿಸುತ್ತಾರಾ ಎಂದು ಕಾದು ನೋಡಬೇಕು. ಸ್ನೇಹ-ಕಂಠಿ ಮದುವೆಯಾದರೆ ಪ್ರೇಕ್ಷಕರು ಕೂಡ ತುಂಬಾ ಖುಷಿ ಪಡುತ್ತಾರೆ ಇನ್ನು ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ..

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಬೆನ್ನಲ್ಲೇ ಹಿರಿಯ ನಾಗರಿಕರಿಗೆ ಸಾರಿಗೆ ಸಚಿವ ರಿಂದ ಗುಡ್ ನ್ಯೂಸ್, ಹಿರಿಯನಾಗರಿಕರಿಗೆ ದೇವಸ್ಥಾನಗಳಲ್ಲಿ ಡೈರೆಕ್ಟ್ ಎಂಟ್ರಿ 

ಇದನ್ನೂ ಓದಿ: CCTV ಯಲ್ಲಿ ಬಯಲಾಯ್ತು ಆಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram