Rachitha Mahalakshmi: ಗಂಡನ ವಿರುದ್ಧವೇ ಪೋಲಿಸ್ ಕಂಪ್ಲೆಂಟ್ ಕೊಟ್ಟ ಕನ್ನಡ ಖ್ಯಾತ ಕಿರುತೆರೆ ನಟಿ ರಚಿತಾ! ಖ್ಯಾತ ಕಿರುತೆರೆ ಕಲಾವಿದೆ ಬಾಳಲ್ಲಿ ಬೀಸಿದೆ ಬಿರುಗಾಳಿ

Rachitha Mahalakshmi: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಕಲಹಗಲು ಸತಿ ಪತಿ ನಡುವೆ ಹೊಂದಾಣಿಕೆಯಿಲ್ಲದೇ ದೂರದ ಘಟನೆಗಳು, ಅಥವಾ ಒಂದಷ್ಟು ಸಾವು ನೋವಿನಲ್ಲಿ ಅಂತ್ಯವಾದ ವೈವಾಹಿಕ ಜೀವನದ ನೈಜ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿವೆ. ಹೌದು ಅದರಲ್ಲೂ ಪ್ರೀತಿಸಿ ಮದುವೆಯಾದವರ ಬಾಳಲ್ಲೇ ಇಂತಹ ಘಟನೆಗಳು ನಡೆಯುತ್ತಿರೋದು ಬಹಳ ಭಯ ಪಡುವಂತಹದ್ದು ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಕೆಲವರ ಜೀವನದಲ್ಲಿ ಪ್ರೀತಿಸುವಾಗ ಇರುವ ಹೊಂದಾಣಿಕೆ ಮದುವೆ ನಂತರ ಇರುವುದಿಲ್ಲ. ಅದಕ್ಕೆ ನಮ್ಮ ಸೆಲೆಬ್ರಿಟಿಗಳ ಜೀವನ ಕೂಡಾ ಹೊರತಾಗಿಲ್ಲ. ಪ್ರೀತಿಸಿ ಮದುವೆ ಆದ್ರೂ ಎಷ್ಟೋ ಜೋಡಿ ವಿಚ್ಚೇದನ ಪಡೆದಿವೆ. ಇನ್ನೊಂದಷ್ಟು ಜನ ದೂರವಾಗಿ, ಅಥವಾ ಮರು ಮದುವೆಯಾಗಿ ಜೀವನ ಸಾಗಿಸುತ್ತಿದ್ದಾರೆ.

WhatsApp Group Join Now
Telegram Group Join Now

ಅದೆ ರೀತಿ ಪತಿಯಿಂದ ದೂರವಾಗಿ ಜೀವನ ಸಾಗಿಸುತ್ತಿದ್ದ ಕನ್ನಡದ ಹಾಗೂ ತಮಿಳು ಕಿರುತೆರೆಯ ಖ್ಯಾತ ನಟಿ ಇದೀಗ ಪತಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ. ಹೌದು ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ರಚಿತ ಮಹಾಲಕ್ಷ್ಮಿ ಚೆನ್ನೈ ಮಂಗಾಡು ಪೊಲೀಸ್‌ ಠಾಣೆಗೆ ತೆರಳಿ ಪತಿ ದಿನೇಶ್‌ ಗೋಪಾಲಸ್ವಾಮಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಅಲ್ಲದೇ ದಿನೇಶ್‌ ನನಗೆ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾರೆ. ಜೀವ ಬೆದರಿಕೆ ಕೂಡಾ ಒಡ್ಡಿದ್ದಾರೆ ಎಂದು ಆರೋಪಿಸಿರುವ ನಟಿ ಪತಿಯ ವಿರುದ್ಧವೇ ಇದೀಗ ದೂರು ದಾಖಳಿಸಿದ್ದಾರೆ. ಕೆಲವು ದಿನಗಳಿಂದ ಪತಿಯಿಂದ ದೂರ ವಾಸಿಸುತ್ತಿದ್ದ ರಚಿತ ಮಹಾಲಕ್ಷ್ಮಿ(Rachitha Mahalakshmi) ಈಗ ಪತಿ ದಿನೇಶ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ತಮಿಳು ಕಿರುತೆರೆಯಲ್ಲಿ ಸೆಟಲ್‌ ಆಗಿರುವ ರಚಿತ ಮಹಾಲಕ್ಷ್ಮಿ ವೈಯಕ್ತಿಕ ಬೆಂಗಳೂರಿನವರೆ. ಆರಂಭದಲ್ಲಿ ಕನ್ನಡದಲ್ಲಿ ಕಾಲ ಜೀವನ ಆರಂಭಿಸಿದ್ರೂ ನಂತರ ಸೆಟಲ್ ಆಗಿದ್ದು ತಮಿಳಿನಲ್ಲಿ. ವೃತ್ತಿ ಜೀವನದಲ್ಲಿ ಒಂದು ಹಂತಕ್ಕೆ ಸೆಟಲ್ ಆಗಿರುವ ಇವ್ರು ವೈಯಕ್ತಿಕ ಜೀವನದಲ್ಲಿ ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಇನ್ನು ರಚಿತ ಮಹಾಲಕ್ಷ್ಮಿ ಕೆರಿಯರ್‌ ಆರಂಭಿಸಿದ್ದು ಕನ್ನಡ ಕಿರುತೆರೆ ಮೂಲಕ. ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಧಾರಾವಾಹಿ ಹಾಗೂ ಸಿನಿಮಾಗಳು. ಆದ್ರೂ ಕನ್ನಡಾಭಿಮಾನಿಗಳ ಅಭಿಮಾನವನ್ನ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದಲ್ಲಿ ‘ಮೇಘ ಮಂದಾರ’ ಧಾರಾವಾಹಿ ಮೂಲಕ ರಚಿತ ಮಹಾಲಕ್ಷ್ಮಿ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಂತದಲ್ಲಿ ಇವ್ರಿಗೆ ತಮಿಳಿನಲ್ಲಿ ಉತ್ತಮ ಅವಕಾಶ ದೊರೆತ ಕಾರಣ ಚೆನ್ನೈಗೆ ಹೋದರು. 2011 ರಲ್ಲಿ ವಿಜಯ್‌ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಪಿರಿವೊಮ್‌ ಸಂದಿಪೊಮ್‌’ ಧಾರಾವಾಹಿ ಮೂಲಕ ತಮಿಳಿಗೆ ಬಂದರು. ಆಗ ಅಲ್ಲಿ ಸಹನಟ ದಿನೇಶ್‌ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿ 2013 ರಲ್ಲಿ ಮದುವೆಯಾದರು. ಆದರೆ ಈ ದಂಪತಿ ಮಧ್ಯೆ ಸದ್ಯ ಬಿರುಕು ಮುಡಿದ್ದು ಈಗ ಬೇರೆ ಬೇರೆ ವಾಸಿಸುತ್ತಿದ್ದಾರೆ. ಸದ್ಯ ಈ ದಂಪತಿಗೆ ಮಕ್ಕಳು ಇಲ್ಲ.

ಇದನ್ನೂ ಓದಿ: ಮಜಾ ಟಾಕೀಸ್ ನಿಲ್ಲಿಸಿದ್ದಕ್ಕೆ ನಿಜವಾದ ಕಾರಣ ಬಿಚ್ಚಿಟ್ಟ ಸೃಜನ್! ಆ ಒಂದು ಕಾರಣಕ್ಕೆ ಮಜಾ ಟಾಕೀಸ್ ಮರೆತರ ಸೃಜಾ?

ಪತಿಯ ಚಿತ್ರ ಹಿಂಸೆ ತಾಳಲಾಗದೆ ಕಣ್ಣೀರಿಟ್ಟ ನಟಿ ರಚಿತಾ ಮಹಾಲಕ್ಷ್ಮೀ

ಇತ್ತೀಚೆಗೆ ರಚಿತ ಮಹಾಲಕ್ಷ್ಮೀ(Rachitha Mahalakshmi) ತಮಿಳು ಬಿಗ್‌ ಬಾಸ್‌ ಸೀಸನ್‌ 6ರಲ್ಲಿ ಕೂಡಾ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆಗ ತಮಗೆ ಮಗುವೊಂದನ್ನು ದತ್ತು ಪಡೆಯುವ ಆಸೆ ಇದೆ, ಆದರೆ ಅದಕ್ಕೆ ಆರ್ಥಿಕವಾಗಿ ಇನ್ನೂ ಫಿಟ್‌ ಆಗಬೇಕು ಅಂತ ರಚಿತ ಮಹಾಲಕ್ಷ್ಮಿ ಬಿಗ್‌ಬಾಸ್ ನಲ್ಲಿ ಹೇಳಿಕೊಂಡಿದ್ರು. ಆದ್ರೆ ತಮಗೆ ಯಾಕೆ ಮಕ್ಕಳಾಗಿಲ್ಲ, ಪತಿಯಿಂದ ದೂರ ಇದ್ದು ಜೀವನ ನಡೆಸುತ್ತಿರುವ ಬಗ್ಗೆ ಹೇಳಿಕೊಂಡಿರಲಿಲ್ಲ. ಆದ್ರೆ ನಂತರದಲ್ಲಿ ಇವರಿಬ್ಬರು ದೂರವಾಗಿದ್ದಾರೆ ಡೈವೋರ್ಸ್ ಆಗಲಿದೆ ಅನ್ನೋ ಸುದ್ದಿಗಳು ರಚಿತಾ ಮಹಾಲಕ್ಷ್ಮೀ ಬಿಗ್ ಬಿ ಅಂಗಳದಲ್ಲಿದ್ದಾಗಲೇ ಚರ್ಚೆ ಆಗಿದ್ವು ಆದರೆ ಆಗ ರಚಿತಾ ಯಾವುದೇ ಉತ್ತರವನ್ನ ನೀಡಿರಲಿಲ್ಲ. ಆದರೆ ಇದೀಗ ಏಕಾಏಕಿ ಪತಿಯಿಂದ ದೂರವಿದ್ರು ನಂಗೆ ನೆಮ್ಮದಿಯಿಲ್ಲ ಜೀವ ಬೆದರಿಕೆ ಇದೆ, ತುಂಬಾ ಕೆಟ್ಟದಾಗಿ ಮೆಸೇಜ್ ಗಳನ್ನ ಮಾಡ್ತಿದ್ದಾರೆ ಅವರಿಂದ ರಕ್ಷಣೆ ಕೊಡಿ ಅಂತ ಕೋರಿ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಒಟ್ಟಿನಲ್ಲಿ ಇಂತಹ ಘಟನೆಗಳು ಪದೇ ಪದೇ ಮಾರುಕಳಿಸುತ್ತೀರೋದ್ರಿಂದ ವೈವಾಹಿಕ ಜೀವನದ ಮೇಲಿರುವ ನಂಬಿಕೆಯೇ ಹೋಗುತ್ತೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: CCTV ಯಲ್ಲಿ ಬಯಲಾಯ್ತು ಆಸಲಿ ಸತ್ಯ! ಕುಡಿದು ರೀಲ್ಸ್ ಸ್ಟಾರ್ ನಿಖಿಲ್ ಮಾಡಿದ ಅವಾಂತರ ನೋಡಿ? 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram