Sharmila Chandrashekar: ಆಪರೇಷನ್ ಬಳಿಕ 1 ವರ್ಷ ಬೆಡ್ ಮೇಲೆ ಇದ್ದ, ಅಂತರಪಟ ಧಾರಾವಾಹಿ ನಟಿ ಶರ್ಮಿಳಾ

Sharmila Chandrashekar: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ವಾರದಿಂದ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಶರ್ಮಿಳಾ ಚಂದ್ರಶೇಖರ್ ಅವರು ಕೆಲವು ವರ್ಷಗಳಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತೆ’, ‘ಪಲ್ಲವಿ ಅನು ಪಲ್ಲವಿ’ ಮತ್ತು ಜೀ ಕನ್ನಡ ದಲ್ಲಿ ಬರುತ್ತಿದ್ದ ‘ಪತ್ತೆದಾರಿ ಪ್ರತಿಭಾ’ ದಾರವಾಹಿಗಳಲ್ಲಿ ಶರ್ಮಿಳ ಅವರು ನಟಿಸಿದ್ದಾರೆ ಆದರೆ ಇಷ್ಟೆಲ್ಲ ಸೀರಿಯಲ್ ನಲ್ಲಿ ನಟಿಸಿದ ಇವರು ಕೆಲವು ವರ್ಷಗಳು ಕಿರುತೆರೆಯಿಂದ ದೂರವಿದ್ದರೂ ಮತ್ತು ಯಾವುದೇ ಕಾರ್ಯಕ್ರಮಗಳಲ್ಲೂ ಕೂಡ ಇವರು ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆ? ಇದರ ಬಗ್ಗೆ ಅವರು ಒಂದು ಸಂದರ್ಶನದಲ್ಲಿ ಏನು ಹೇಳಿಕೊಂಡಿದ್ದಾರೆ ಅದನ್ನು ನೋಡೋಣ ಬನ್ನಿ.

WhatsApp Group Join Now
Telegram Group Join Now

ನಟಿ ಶರ್ಮಿಳಾ ಚಂದ್ರಶೇಖರ್ ಅವರಿಗೆ ಸೀತೆ ಸೀರಿಯಲ್ ತುಂಬಾ ಜನಪ್ರಿಯತೆ ಯನ್ನು ತಂದು ಕೊಟ್ಟಿತ್ತು. ಸೀತೆ ಸೀರಿಯಲ್ ಬಳಿಕ ಸ್ಟಾರ್ ಸುವರ್ಣ ವಾಹಿನಿ ಯಲ್ಲಿ ಪ್ರಸಾರವಾಗುತ್ತಿದ್ದ ಪಲ್ಲವಿ ಅನುಪಲ್ಲವಿ ಯಲ್ಲೂ ಇವರು ನಟಿಸಿದ್ದಾರೆ. ಈ ಸೀರಿಯಲ್ ಕೂಡ ಅವರಿಗೆ ಜನಪ್ರಿಯತೆ ತಂದು ಕೊಟ್ಟಿತ್ತು ಇನ್ನು ಈ ಎರಡು ಧಾರವಾಹಿಗಳ ನಂತರ ಜೀ ಕನ್ನಡ ವಾಹಿನಿ ಯಲ್ಲಿ ಪ್ರಸಾರವಾದ ಪತ್ತೆದಾರಿ ಪ್ರತಿಭಾ ಎಂಬ ವಿಭಿನ್ನ ಧಾರವಾಹಿ ಮೂಲಕ ಶರ್ಮಿಳ ಅವರು ಕಾಣಿಸಿಕೊಂಡಿದ್ದರು. ಈ ಸೀರಿಯಲ್ ನಿಂದ ಶರ್ಮಿಳಾ ಅವರಿಗೆ ಚಿತ್ರರಂಗದ ಸಾಕಷ್ಟು ಕಲಾವಿದರು ಪರಿಚಯವಾಗಿದ್ದರು ಎಂದು ಶರ್ಮಿಳಾ ಅವರು ಈ ಹಿಂದೆ ಕೊಟ್ಟಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಛೋಟಾ ಚಾಂಪಿಯನ್ ಶೋ ಗೆ ಟೈಟಲ್ ಹಾಡನ್ನು ಹೇಳಿದ ದಿಯಾ ಹೆಗಡೆ, ಶೋ ಯಾವಾಗಿನಿಂದ ಶುರುವಾಗುತ್ತೆ?

ಒಂದು ವರ್ಷ ಬೆಡ್ ಮೇಲೆ ಇದ್ದ ಶರ್ಮಿಳಾ ಚಂದ್ರಶೇಖರ್?

ಶರ್ಮಿಳ ಅವರು ಖಾಸಗಿ ವಾಹಿನಿ ಸಂದರ್ಶನ ದಲ್ಲಿ ಮಾತನಾಡುತ್ತಾ ” ಕಿರುತೆರೆಗೆ ಮರಳಿದ್ದು ತುಂಬಾ ಖುಷಿ ಇದೆ Actually long Break ಏನು ಇಲ್ಲ ನನ್ನ ಪ್ರಕಾರ One year ಬ್ರೇಕ್ ಅನ್ನಿಸುತ್ತದೆ. ಕಾರಣ ನನ್ನ ಮೊಳಕಾಲು ಸರ್ಜರಿ Stage Accident ಆಗಿತ್ತು ಒಂದು ವರ್ಷ ಬೆಡ್ ಮೇಲೆ ಇದ್ದೆ move ಮಾಡುವುದಕ್ಕೂ ಕೂಡ ಆಗುತ್ತಿರಲಿಲ್ಲ. ಅದಾದ ತಕ್ಷಣ ಇಷ್ಟು ಒಳ್ಳೆ ಪಾತ್ರ, ಇಷ್ಟು ಒಳ್ಳೆ ಪ್ರಾಜೆಕ್ಟ್, ಒಳ್ಳೆ ಪ್ರೊಡಕ್ಷನ್ ಅದು ಕಲರ್ಸ್ ಕನ್ನಡ ಪ್ಲಾಟ್ಫಾರ್ಮ್ ತುಂಬಾ ಖುಷಿಯಾಗುತ್ತಿದೆ” ಎಂದು ಹೇಳಿದ್ದರು..

ಅಂತರಪಟ ಸೀರಿಯಲ್ ನಲ್ಲಿ ಅಮಲ ಪಾತ್ರ ದಲ್ಲಿ ಶರ್ಮಿಳ ಅವರು ನಟಿಸುತ್ತಿದ್ದರೆ. ಈ ಪಾತ್ರ ತುಂಬಾ ಪವರ್ ಫುಲ್ ಆಗಿದ್ದು ಶರ್ಮಿಳ ಅವರು ಸಾಕಷ್ಟು ವರ್ಷಗಳ ಬಳಿಕ ವಿಲನ್ ಪಾತ್ರ ದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಪಾತ್ರ ಈಗ ವಿಲ್ಲನ್ ರೀತಿ ಬರುತ್ತಿದ್ದು ಮುಂದಿನ ದಿನಗ ಳಲ್ಲಿ ಕಥೆ ಬದಲಾವಣೆಯಾಗಿ ಯಾವ ರೀತಿ ಮೂಡಿ ಬರುತ್ತದೆ ಎಂದು ಕಾದು ನೋಡಬೇಕಿದೆ. ಅಂತರಪಟ ಸೀರಿಯಲ್ ನಲ್ಲಿ ದೀಪಿಕಾ ದಾಸ್, ಮಂಜು ಪಾವಗಡ, ಚಂದನ್ ಗೌಡ , ತನ್ಮಿಯಾ ಬಾಲರಾಜ್, ಅಕ್ಷತಾ ಗಣೇಶ್, ವಿಠ್ಠಲ್ ಕಾಮತ್ ಇನ್ನು ಹಲವು ಕಲಾವಿದರು ಈ ಧಾರಾವಾಹಿ ಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಯನ್ನು ಸ್ವಪ್ನ ಕೃಷ್ಣ ರವರು ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಆರೋಪಗಳಿಂದ ಕಿರುತೆರೆ ಧಾರಾವಾಹಿ ಗಳಿಂದ ದೂರಾಗಿದ್ದ ನಟಿ ಅಭಿನಯ ಈಗ ಮತ್ತೆ ಕಂಬ್ಯಾಕ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram