ಸ್ಪಂದನಾ ಡೈರಿಯಲ್ಲಿ ಇದ್ದ ಬಹು ದೊಡ್ಡ ಆಸೆ ಏನ್ ಗೊತ್ತಾ? ಸ್ಪಂದನಾ ಸಾವಿನ ಬಳಿಕ ಡೈರಿಯಲ್ಲಿದ್ದ ವಿಷಯ ತಿಳಿಸಿದ ಸಂಬಂಧಿಕರು

ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಬದುಕಿನಲ್ಲಿ ವಿಧಿಯು ಆಟವಾಡಿದೆ. ಜೀವಕ್ಕೆ ಜೀವ ಆಗಿದ್ದ ಪತ್ನಿ ಸ್ಪಂದನ ಅವರನ್ನ ಕ್ರೂರ ವಿಧಿ ಕಿತ್ತುಕೊಂಡಿದ್ದಾನೆ. ಕುಟುಂಬ ಸದಸ್ಯರು ಹಾಗು ಸ್ನೇಹಿತರ ಜೊತೆ ಥೈಲ್ಯಾಂಡ್ ನ ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನ ಅವರು ಅಲ್ಲಿಯೇ ಬದುಕಿನ ಯಾತ್ರೆ ಮುಗಿಸಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಮತ್ತೆ ಮೇಲೆ ಏಳಲೇ ಇಲ್ಲ. ಈ ಸುದ್ಧಿಯು ಅವರ ಕುಟುಂಬಕ್ಕೆ ಬಹುದೊಡ್ಡ ಆಘಾತವನ್ನುಂಟು ಮಾಡಿದೆ. ಇದೀಗ ವಿಜಯ ರಾಘವೇಂದ್ರ ಅವರು ಪತ್ನಿಯನ್ನ ಕಳೆದುಕೊಂಡು ದುಃಖದ ಸಾಗರದಲ್ಲಿ ಮುಳುಗಿದ್ದಾರೆ. ಈ ಮಧ್ಯೆ ಸ್ಪಂದನ ಅವ್ರ ಉತ್ತರ ಕ್ರಿಯೆ ಇಂದು ನಡೆಯುತ್ತಿದೆ. ಹೀಗಿರುವಾಗ ಸ್ಪಂದನಾ ಅವ್ರ ಸಂಬಂಧಿಕರೊಬ್ಬರು ಇದೀಗ ಸ್ಪಂದನ ಅವ್ರಿಗಿದ್ದ ದೊಡ್ಡ ಆಸೆಯೊಂದನ್ನ ಹೇಳಿಕೊಂಡು ಡೈರಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

WhatsApp Group Join Now
Telegram Group Join Now

ಹೌದು ಬ್ಯಾಂಕಾಕ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನಾ ಮರಳಿ ಜೀವಂತವಾಗಿ ಬರಲೇ ಇಲ್ಲ. ಪತ್ನಿಯ ಶವವನ್ನ ಬೆಂಗಳೂರಿಗೆ ತರುವಷ್ಟರಲ್ಲಿ ವಿಜಯ್ ರಾಘವೇಂದ್ರ ಕಣ್ಣೀರು ಬತ್ತಿ ಹೋಗಿತ್ತು, ಬಾರದ ಮನಸ್ಸಿನಿಂದಲೇ ಪತ್ನಿಗೆ ಅಂತಿಮ ವಿಧಾನ ಪೂರೈಸಿದ ರಾಘು ಇಂದಿಗೂ ಪತ್ನಿಯ ನೆನಪಿನಲ್ಲೇ ಬದುಕುತ್ತಿದ್ದೂ, ಸಾವಿನ ನೋವಿನಿಂದ ಹೊರಬರಲಾಗದೆ ಪತ್ನಿಯನ್ನ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಅಲ್ದೆ ಪತ್ನಿ ಸ್ಪಂದನ ಹಾಗೂ ರಾಘು ಇಬ್ಬರು ಕೂಡ ತಮ್ಮ ಮಗನನ್ನು ಹೀರೋ ಮಾಡಬೇಕು ಎನ್ನುವ ಕನಸನ್ನ ಕಂಡಿದ್ದರು.

ಹಾಗೆ ಮಗನ ಮೊದಲ ಸಿನಿಮಾವನ್ನು ವಿಜಯ್ ರಾಘವೇಂದ್ರ ಅವರೇ ಡೈರೆಕ್ಷನ್ ಮಾಡುವ ಯೋಚನೆಯನ್ನು ಮಾಡಿದ್ದರು. ಆದ್ರೆ ಇದೀಗ ಸ್ಪಂದನ ಅವರು ಅಕಾಲಿಕ ಮರಣ ಹೊಂದಿದ್ದು ಇವರ ಆಸೆ ಹಾಗೆ ಉಳಿದುಕೊಂಡಿದೆ. ನಟ ವಿಜಯ್ ರಾಘವೇಂದ್ರ ಅವರು ತಮ್ಮ ಪತ್ನಿಯ ಆಸೆಯನ್ನು ಈಡೇರಿಸಬೇಕಿದೆ. ಇದರ ಜೊತೆಗೆ ಪತ್ನಿಯ ಡೈರಿ ವಿಚಾರ ಕೂಡ ಹೊರ ಬಂದಿದ್ದು ಸ್ಪಂದನಾ ಅವ್ರ ಕೊನೆಯ ಆಸೆ ಬಗ್ಗೆ ತಿಳಿದು ಬಹಳ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್ವುಡ್ ಗೆ ಭರ್ಜರಿ ಎಂಟ್ರಿ ಕೊಡ್ತಿದ್ದಾರೆ ಸಾನ್ಯಾ; ಇಂದ್ರಜಿತ್ ಲಂಕೇಶ್ ಪುತ್ರನೊಂದಿಗೆ ಸಾನ್ಯಾ ಪಾದಾರ್ಪಣೆ

ಸ್ಪಂದನಾ ಡೈರಿಯಲ್ಲಿ ಏನಿತ್ತು ಸಂಬಂಧಿಕರು ಹೇಳಿದ್ದೇನು?

ವಿಜಯ್ ರಾಘವೇಂದ್ರ ಅವರ ಪತ್ನಿ ಹೃದಯಘಾತದಿಂದ ನಿಧನರಾದ ವಿಚಾರ ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಬಂದಿತ್ತು ಚಿನ್ನಾರಿ ಮುತ್ತನ ಜೀವನ ಕತ್ತಲಿನಿಂದ ಆವರಿಸಿಕೊಂಡು ಚಿನ್ನಾರಿ ಮುತ್ತ ಚೇತರಿಸಿಕೊಳ್ಳಲಾಗದೆ ಕಣ್ಣೀರಿಡುತ್ತಿದ್ದಾರೆ. ಈ ಮಧ್ಯೆ ಸ್ಪಂದನ ಅವರ ಮಾವ ಸ್ಪಂದನವರ ಕೊನೆಯ ಆಸೆಯ ಬಗ್ಗೆ ಮಾತನಾಡಿದ್ದು ಸ್ಪಂದನವರ ಡೈರಿ ವಿಚಾರವನ್ನು ಕೂಡ ಬಿಚ್ಚಿಟ್ಟಿದ್ದಾರೆ. ಸಿನಿಮಾ ರಂಗದ ಬಗ್ಗೆ ಸ್ಪಂದನ ವಿಜಯ್ ರಾಘವೇಂದ್ರ ಅವರು ದೊಡ್ಡ ಆಸೆ ಹಾಗೂ ಕನಸನ್ನು ಕಂಡಿದ್ದರು. ಹೌದು ಸಿನಿ ರಂಗದಲ್ಲಿ ದೊಡ್ಡ ನಿರ್ಮಾಪಕೀಯಾಗಿ ಗುರುತಿಸಿಕೊಳ್ಳುವುದು ಸ್ಪಂದನವರ ಕೊನೆಯ ಆಸೆಯಾಗಿತ್ತಂತೆ.

ಅಲ್ದೆ ಈ ಮೂಲಕ ಅನೇಕರಿಗೆ ಜೀವನ ನಡೆಸಲು ಸಹಕಾರಿಯಾಗಬೇಕು ಅನ್ನೋದು ಅವರ ಆಲೋಚನೆಯಾಗಿದ್ದಂತೆ. ಹೌದು ಪಾರ್ವತಮ್ಮ ರಾಜ್ ಕುಮಾರ್ ಅವರಂತೆ ದೊಡ್ಡ ನಿರ್ಮಾಪಕಿಯಾಗಿ ಗುರುತಿಸಿಕೊಂಡು ಆನೇಕರ ಜೀವನಕ್ಕೆ ದಾರಿ ದೀಪವಾಗಬೇಕು ಅನ್ನೋ ಮಹತರವಾದ ಆಸೆಯನ್ನ ಸ್ಪಂದನ ಅವರು ಇಟ್ಕೊಂಡಿದ್ರು ಅಂತ ಅವರ ಮಾವ ಇದೀಗ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಸ್ಪಂದನ ಅವರ ಮಾವ ಪೀತಾಂಬರ ಹೆರಾಜೇ ಇದೀಗ ಸ್ಪಂದನಾ ಅವ್ರ ಡೈರಿಯಲ್ಲಿದ್ದ ವಿಚಾರವನ್ನ ಹಂಚಿಕೊಂಡು ಭಾವುಕರಾಗಿದ್ದಾರೆ.

ಇದನ್ನೂ ಓದಿ: ಶ್ರಾವಣ ಮಾಸಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram