ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ

ನಟ ವಿಜಯ್ ರಾಘವೇಂದ್ರ ಅವ್ರ ಪತ್ನಿ ಸ್ಪಂದನಾ ಸಂಬಂಧಿಗಳೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದರು. ಕೆಲವು ದಿನಗಳು ಅಲ್ಲೇ ಆತ್ಮೀಯರೊಂದಿಗೆ ಸುತ್ತಾಟ ನಡೆಸಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಾಗಲೇ ಹೃದಯಾಘಾತವಾಗಿತ್ತು. ಆಗ ಆಸ್ಪತ್ರೆ ದಾಖಲಿಸಿದರೂ ಸ್ಪಂದನಾ ಬದುಕಿ ಬರಲಿಲ್ಲ. ಇನ್ನು ಸ್ಪಂದನಾ ಅಗಲಿ ನಿನ್ನೆಗೆ 11 ದಿನಗಳಾಗಿವೆ. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡಿದೆ. ಬೆಳಗ್ಗೆಯಿಂದಲೇ ಕಾರ್ಯಗಳು ಆರಂಭ ಆಗಿ, ಶಾಂತಿ ಹೋಮವನ್ನು ನಡೆಸಲಾಗಿದೆ. ಬಳಿಕ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು ಸಲ್ಲಿಸಿ ಭೋಜನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದ್ರೆ
ಸ್ಯಾಂಡಲ್‌ವುಡ್ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ಪತ್ನಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

WhatsApp Group Join Now
Telegram Group Join Now

11 ದಿನಗಳ ಹಿಂದಷ್ಟೇ ಸ್ಪಂದನಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು. ಇದು ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಕುಟುಂಬ ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಸದ್ಯ ನೋವಿನಲ್ಲೇ ಸ್ಪಂದನಾ ಕುಟುಂಬ ಇದೀಗ 11ದಿನದ ವಿಧಿ ವಿಧಾನವನ್ನ ಪೂರೈಸಿದೆ. ಈ ಮಧ್ಯೆ ಸ್ಪಂದನಾ ಅಂತ್ಯ ಸಂಸ್ಕಾರದ ವೇಳೆ ರಾಘು ಹಾಗೂ ಶೌರ್ಯ ಪಕ್ಕದಲ್ಲೇ ಇದ್ದು ಕೊಂಡು ಧೈರ್ಯ ತುಂಬಿ 3ದಿನದ ಹಾಲು ತುಪ್ಪದ ಕಾರ್ಯದಲ್ಲೂ ಬೆನ್ನಿಗೆ ನಿಂತ ಶ್ರೀ ಮುರುಳಿ ನಿನ್ನೆ ಸ್ಪಂದನಾ ಅವ್ರ 11ದಿನದ ಕಾರ್ಯಕ್ಕೆನೋ ಬಂದ್ರು, ಆದ್ರೆ ಅವ್ರು ಬಂದ ಸ್ಥಿತಿ ಒಂದು ಕ್ಷಣ ಎಲ್ಲರನ್ನು ಆಶ್ಚರ್ಯ ಪಡಿಸಿತ್ತು. ಹೌದು ಕುಂಟುತ್ತಲೇ ಸ್ಪಂದನಾ ಕಾರ್ಯಕ್ಕೆ ಬಂದು ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಅನುಪ್ರಭಾಕರ್ ಮಗಳು ನಂದನಾಗೆ ಹುಟ್ಟುಹಬ್ಬದ ಸಂಭ್ರಮ; 5ವರ್ಷ ಪೂರೈಸಿದ ನಂದನ, ವಿಶೇಷವಾಗು ವಿಶ್ ಮಾಡಿದ ಅನುಪ್ರಭಾಕರ್

1ವಾರದಲ್ಲಿ ರಾಘು ಕುಟುಂಬಕ್ಕೆ ಏನಾಯ್ತು?

ಹೌದು ಆಗಸ್ಟ್ 6ರಂದು ಭಾನುವಾರ ಬ್ಯಾಕಾಂಕ್‌ನಲ್ಲಿ ಹೃದಯಾಘಾತದಿಂದ ಸ್ಪಂದನಾ ನಿಧನರಾಗಿದ್ದರು. ಆಗಸ್ಟ್ 9ರಂದು ಬೆಂಗಳೂರಿನ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು. ನಿನ್ನೆ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಅವ್ರ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶ್ರೀಮುರಳಿ ಭಾಗಿಯಾಗಿದ್ದಾರೆ. ಸಹೋದರ ವಿಜಯ- ಪುತ್ರ ಶೌರ್ಯ ಆಗಮನದ ಬಳಿಕ ಮುರಳಿ ಕೂಡ ಭಾಗವಹಿಸಿದ್ದು, ಮತ್ತೆ ಕಾಲು ನೋವಿನ ಸ್ಥಿತಿಯಲ್ಲಿಯೇ ಎಂಟ್ರಿ ಕೊಟ್ಟಿದ್ದಾರೆ. ಇದನ್ನ ನೋಡಿದಾಗ ಮತ್ತೆ ನಟನಿಗೆ ಏನಾಯ್ತು ಅಂತಾ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹೌದು ಉತ್ತರಕ್ರಿಯೆ ನಿನ್ನೆ ಬೆಳಿಗ್ಗೆ 8:30ರಿಂದ ಸ್ಪಂದನಾ ಸ್ವಗೃಹದಲ್ಲಿ ಶಾಂತಿ ಹೋಮ ನೆರವೇರಿದೆ.

ಅಲ್ದೆ ಸ್ಪಂದನಾ 11ನೇ ದಿನದ ಪುಣ್ಯಸ್ಮರಣೆಯಲ್ಲಿ ಶಿವಣ್ಣ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಮಗನ ಕೈ ಹಿಡಿದು ವಿಜಯ ಎಂಟ್ರಿ ಕೊಟ್ಟರೆ, ಅತ್ತಿಗೆ ಸ್ಪಂದನಾ ಪುಣ್ಯಸ್ಮರಣೆಯಲ್ಲಿ ಕುಂಟುತ್ತಾಲೇ ಶ್ರೀಮುರಳಿ ಎಂಟ್ರಿ ಕೊಟ್ಟಿದ್ದಾರೆ. ಕಾಲಿನ ನೋವಿನಿಂದಲೇ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬಂದಿದ್ದಾರೆ. ಇನ್ನು ನಿಮಗೆಲ್ಲ ಗೊತ್ತಿರುವಂತೆ ಕೆಲ ದಿನಗಳ ಹಿಂದೆ ಬಘೀರ ಸಿನಿಮಾದ ಶೂಟಿಂಗ್‌ನಲ್ಲಿ ಶ್ರೀಮುರಳಿಗೆ ಪೆಟ್ಟಾಗಿತ್ತು. ಬಳಿಕ ಚೇತರಿಸಿಕೊಂಡಿದ್ದರು. ಆದ್ರೆ ಸ್ಪಂದನಾ ಅಂತ್ಯಕ್ರಿಯೆ ಸಂದರ್ಭದಲ್ಲಿ ಚೆನ್ನಾಗಿದ್ರಲ್ಲಾ ಈಗ ಶ್ರೀಮುರಳಿಗೆ ಏನಾಯ್ತು ಎಂದು ಫ್ಯಾನ್ಸ್ ಆತಂಕಗೊಂಡಿದ್ದಾರೆ.

ಸಹಜವಾಗಿ ಶ್ರೀ ಮುರುಳಿ ಅವ್ರ ಸ್ಥಿತಿಯನ್ನ ನೋಡಿದ್ರೆ ಎಂತವರಿಗೂ ಕೂಡ ಏನಾಯ್ತು ಇವರಿಗೆ ಅನಿಸದೆ ಇರದು ಯಾಕಂದ್ರೆ ಸ್ಪಂದನಾ ಅಂತ್ಯ ಕ್ರಿಯೆ, ಹಾಲು ತುಪ್ಪ ಹಾಕುವಾಗ ಅಣ್ಣ ಹಾಗೂ ಅಣ್ಣನಾ ಮಗನ ಜೊತೆಗೆ ನಿಂತು ಧೈರ್ಯ ತುಂಬಿ ಚೆನ್ನಾಗಿಯೇ ಓಡಾಡಿಕೊಂಡಿದ್ರು, ಆದ್ರೆ 3-4ದಿನಗಳ ಅಂತರದಲ್ಲೇ ಈ ರೀತಿ ಸ್ಥಿತಿಯಲ್ಲಿ ಶ್ರೀ ಮುರುಳಿ ಇರೋದು ಯಾರಿಗೂ ಸಹಿಸಲಾಗುತ್ತಿಲ್ಲ… ಸದ್ಯ ಹಳೆಯ ನೋವು ಶ್ರೀ ಮುರುಳಿಯವರನ್ನ ಕಾಡುತ್ತಿದ್ದೂ, ಅತ್ತಿಗೆಯ ಅಂತ್ಯ ಸಂಸ್ಕಾರ ಹಾಗೂ ಹಾಲು ತುಪ್ಪ ಕಾರ್ಯದಲ್ಲಿ ಓಡಾಡಿಕೊಂಡು ಎಲ್ಲವನ್ನ ಮಾಡಿದ್ದಾರೆ ಈಗ ಮತ್ತೆ ಕಾಲು ನೋವು ಮುರುಳಿಯವರನ್ನ ಭಾದಿಸುತ್ತಿರೋದ್ರಿಂದ ಕುಂಟುತ್ತ ಬಂದು ಅತ್ತಿಗೆಯ 11ನೆ ದಿನದ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಅಮೂಲ್ಯ ಮಕ್ಕಳನ್ನು ಮೊದಲ ಬಾರಿಗೆ ನೋಡಿ ದರ್ಶನ್ ಹೇಳಿದ್ದೇನು? ವಿಶೇಷ ಫೋಟೋಗಳನ್ನು ಹಂಚಿಕೊಂಡ ಅಮೂಲ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram