ಕಟ್ಟಡ ಕಾರ್ಮಿಕರ ಮಕ್ಕಳ ಸಹಾಯಧನವನ್ನು ಹೆಚ್ಚಿಸಿದ ರಾಜ್ಯ ಸರ್ಕಾರ

State government has increased the allowance for children of construction workers

ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಈಗಾಗಲೇ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಆದರೆ ಈಗ ಮತ್ತೆ ಆ ಹಣವನ್ನು ಪರಿಷ್ಕರಣೆ ಮಾಡಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಇನ್ನಷ್ಟು ಧನ ಸಹಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಹೊರಡಿಸಿದ ಆದೇಶವೇನು :- 1996 ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯ 62 ರ ಕಲಂ ಅಡಿಯಲ್ಲಿ
ಕರ್ನಾಟಕ ಸರ್ಕಾರವು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು ನಿಯಮದ ಅಡಿಯಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನದ ಮೊತ್ತಗಳನ್ನು ಶೈಕ್ಷಣಿಕ ವರ್ಷ 2023-24 ರಿಂದ ಹೆಚ್ಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪರಿಷ್ಕೃತ ದರದ ಪಟ್ಟಿ ಹೀಗಿದೆ.

ರಾಜ್ಯ ಸರ್ಕಾರವು ನೂತನವಾಗಿ ಬಿಡುಗಡೆ ಮಾಡಿದ ಸಹಾಯ ಧನದ ಮೊತ್ತ ಹೀಗಿದೆ :-

  • 1 ರಿಂದ 5ನೇ ತರಗತಿಯವರೆಗೆ ಓದುತ್ತಿರುವ ಕಟ್ಟಡ ಕಾರ್ಮಿಕರ ಮಕ್ಕಳಿಗೆ 1,800 ರೂಪಾಯಿ.
  • 6 ರಿಂದ 8ನೇ ತರಗತಿಯವರೆಗೆ 2,400 ರೂಪಾಯಿ.
  • 9 ರಿಂದ10ನೇ ತರಗತಿಯವರೆಗೆ 3,000 ರೂಪಾಯಿ.
  • 1st ಪಿಯು ಹಾಗೂ 2nd ಪಿಯುಸಿ ವಿದ್ಯಾರ್ಥಿಗಳಿಗೆ 4,600 ರೂಪಾಯಿ.
  • ಪದವಿ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
  • ಬಿ.ಇ ಅಥವಾ ಬಿಟೆಕ್ ಹಾಗೂ ತತ್ಸಮಾನ ತಾಂತ್ರಿಕ ಪದವಿಯ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
  • ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
  • ಬಿ.ಎಸ್.ಸಿ ನರ್ಸಿಂಗ್ ಅಥವಾ ಜಿ.ಎನ್.ಮ್ ಹಾಗೂ ಪ್ಯಾರ ಮೆಡಿಕಲ್ ಕೋರ್ಸ್ ಓದುವ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
  • ಬಿ.ಎಡ್ ಕೋರ್ಸ್ ವಿದ್ಯಾರ್ಥಿಗಳಿಗೆ 6,000 ರೂಪಾಯಿ.
  • ವೈದ್ಯಕೀಯ ಕ್ಷೇತ್ರದಲ್ಲಿ ಯಾವುದೇ ಕೋರ್ಸ್ ಮಾಡುತ್ತಾ ಇರುವ ವಿದ್ಯಾರ್ಥಿಗಳಿಗೆ 11,000 ರೂಪಾಯಿ ಎಲ್ಎಲ್ ಬಿಅಥವಾ ಎಲ್.ಎಲ್.ಎಮ್ ವಿದ್ಯಾರ್ಥಿಗಳಿಗೆ 10,000 ರೂಪಾಯಿ.
  • ಐ.ಐ.ಟಿ ಅಂತಹ ಭಾರತ ಸರ್ಕಾರದ ಮಾನ್ಯತೆ ಪಡೆದ ವಿವಿಧ ಕೋರ್ಸ್ ಗಳಿಗೆ 10,000 ರೂಪಾಯಿ.
  • ಪಿಹೆಚ್ ಡಿ ಗೆ 11,000 ರೂಪಾಯಿ , ಎಂ. ಡಿ 11,000 ರೂಪಾಯಿ.

ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಿಯಮಗಳು :-

  1. ಪರಿಷ್ಕೃತ ಸಹಾಯ ಧನದ ಮೊತ್ತವು 2023-2 4ನೇ ಸಾಲಿನಲ್ಲಿ ಓದುವ ಮಕ್ಕಳಿಗೆ ಅನ್ವಯ ಆಗುತ್ತವೆ.
  2. ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹಿಂದಿನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಯಾವುದೇ ಕಾರಣಕ್ಕೂ ಸುಳ್ಳು ಪ್ರಮಾಣ ಪತ್ರಗಳನ್ನು ನೀಡಬಾರದು.
  3. ವಿದ್ಯಾರ್ಥಿಗಳ ಪಾಲಕರು ಕಡ್ಡಾಯವಾಗಿ ನೋಂದಾಯಿತ ಕಟ್ಟಡ ಕಾರ್ಮಿಕರ ಸದಸ್ಯತ್ವವನ್ನು ಹೊಂದಿರಬೇಕು. ಇಲ್ಲವಾದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಕಟ್ಟಡ ಕಾರ್ಮಿಕ ಮಕ್ಕಳಿಗೆ ಇದರಿಂದ ಏನೂ ಲಾಭ :-

  1. ಕಟ್ಟಡ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಈ ಹಣವೂ ಉಪಯೋಗ ಆಗುತ್ತದೆ.
  2. ಹಾಸ್ಟೆಲ್ ಫೀಸ್ ಕಾಲೇಜ್ ಫೀ ಹಾಲನ್ನು ಕಟ್ಟಲು ಸಹಾಯ ಆಗುತ್ತದೆ.
  3. ಆರ್ಥಿಕ ವಾಗಿ ಹಿಂದುಳಿದ ಕಾರ್ಮಿಕ ವರ್ಗದವರಿಗೆ ಇದರಿಂದ ಆರ್ಥಿಕ ಹೊರೆ ಕಡಿಮೆ ಆಗುತ್ತದೆ.
  4. ಕಟ್ಟಡ ಕಾರ್ಮಿಕ ವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನು ತಡೆಯಲು ಸಾಧ್ಯವಿದೆ.
  5. ಕಲಿಕೆಯಲ್ಲಿ ಕಾರ್ಮಿಕ ವರ್ಗದ ಮಕ್ಕಳಿಗೆ ಇನ್ನಷ್ಟು ಆಸಕ್ತಿ ಬರುತ್ತದೆ.

ಇದನ್ನೂ ಓದಿ: ಮಹಿಳೆಯರಿಗೆ 11 ಸಾವಿರ ನೀಡುವ ಕೇಂದ್ರ ಸರ್ಕಾರದ ಯೋಜನೆ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Vivo V30 ಮತ್ತು V30 Pro ಖರೀದಿಸಿ, ಅದ್ಭುತ ರಿಯಾಯಿತಿಯೊಂದಿಗೆ ಸಾವಿರಾರು ರೂಪಾಯಿ ಉಳಿಸಿ!