ಸ್ಪಂದನ ನಿಧನದ ನಂತರ ರಾಘು ಭೇಟಿ ಮಾಡಿದ ಕಿಚ್ಚ; ಮನೆಯಲ್ಲಿ ರಾಘುಗೆ ಕಿಚ್ಚ ಹೇಳಿದ್ದೇನು ಗೊತ್ತಾ?

ಎಲ್ಲದಕ್ಕೂ ಪತ್ನಿಯನ್ನೇ ಅವಲಂಬಿಸಿದ್ದ ವಿಜಯ್ ರಾಘವೇಂದ್ರ ಕೂಡ ಪತ್ನಿಯ ಅಗಲಿಕೆಯ ನೋವನ್ನು ತಾಳಲಾರದೆ ಪರದಾಡುತ್ತಿದ್ದಾರೆ. ಹೌದು ಸ್ನೇಹಿತರೇ, ತಮ್ಮ ‘ಕದ್ದ ಚಿತ್ರ’ ಸಿನಿಮಾದ ಶೋ ಒಂದರಲ್ಲಿ ಭಾಗಿಯಾಗಿದ್ದ ಚಿನ್ನಾರಿ ಮುತ್ತ ಮಡದಿಯನ್ನ ನೆನೆದು ಕಣ್ಣೀರಿಟ್ಟರು. ಅಲ್ದೇ ಇನ್ಯಾವತ್ತೂ ಅಳಲ್ಲ ಅಂತ ಹೇಳಿದ್ರು. ಸದ್ಯ ಮಡದಿಯನ್ನ ಕಳೆದುಕೊಂಡು ನೋವಿನಲ್ಲಿರುವ ರಾಘುಗೆ ಸಾಕಷ್ಟು ಜನರು ಸಾಂತ್ವನ ಹೇಳಿದ್ರು, ಆದ್ರೆ ಸ್ಪಂದನ ಸಾವಿನಲ್ಲೂ ಕಾಣಿಸಿಕೊಂಡಿರದ ಕಿಚ್ಚ ಸ್ಯಾಂಡಲ್​ವುಡ್​ ನಟ ವಿಜಯ್ ರಾಘವೇಂದ್ರ ಮನೆಗೆ ಭೇಟಿ ಕೊಟ್ಟಿದ್ದಾರೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​​ ಹಾಗೂ ಪತ್ನಿ ಪ್ರಿಯಾ ಸುದೀಪ್​​ ಭೇಟಿ ಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಇನ್ನು ನಿಮ್ಮೆಲರಿಗೂ ಗೊತ್ತಿರುವಂತೆ ಆಗಸ್ಟ್​ 7ರಂದು ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಮೃತಪಟ್ಟಿದ್ದರು. ಬ್ಯಾಂಕಾಕ್​ಗೆ ಹೋಗಿದ್ದ ವೇಳೆ ಸ್ಪಂದನಾ ಅವರಿಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದರು. ಅದಾದ ಬಳಿಕ ಸ್ಪಂದನಾ ನಿಧನದ ದಿನ ಕಿಚ್ಚ ಸುದೀಪ್​​ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಕಿಚ್ಚ ಸುದೀಪ್​​ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಹೀಗಾಗಿ ಇದೀಗ ಕಿಚ್ಚ ಸುದೀಪ್ ದಂಪತಿ​ ನಟ ವಿಜಯ ರಾಘವೇಂದ್ರ ಅವರ ನಿವಾಸಕ್ಕೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ.

ಹೌದು ಸ್ಪಂದನ ಸಾವಿಗೆ ಕಿಚ್ಚ ಬರೋದಕ್ಕೆ ಸಾಧ್ಯವಾಗಿರಲಿಲ್ಲ ಹೀಗಾಗಿ ಸ್ಪಂದನಾ ನಿಧನದ ಬಳಿಕ ಕಿಚ್ಚ ರಾಘು ಮನೆಗೆ ಪತ್ನಿ ಜೊತೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಸ್ಪಂದನ ನಿಧಾನರಾದ ದಿನ ಕಿಚ್ಚ ಸುದೀಪ್​​ ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಹಾಗಾಗಿ ಕಿಚ್ಚ ಸುದೀಪ್​​ ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಹೀಗಾಗಿ ಇದೀಗ ಕಿಚ್ಚ ಸುದೀಪ್ ದಂಪತಿ​ ನಟ ವಿಜಯ ರಾಘವೇಂದ್ರ ಅವರ ನಿವಾಸಕ್ಕೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಾರೆ. ಈ ವೇಳೆ ಕೆಆರ್​ಜಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜು ಅವರು ಕಿಚ್ಚ ಸುದೀಪ್​​​​ ಅವರಿಗೆ ಸಾಥ್​​ ನೀಡಿದ್ದಾರೆ. ಇನ್ನು ಈ ವಿಚಾರವನ್ನ ಸ್ವತಃ ಚಿನ್ನಾರಿ ಮುತ್ತ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದು, ಕಿಚ್ಚ ಹಾಗೂ ಪತ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ದೇ ಕಿಚ್ಚ ಎಷ್ಟು ಒಳ್ಳೆ ಮನಸಿನ ವ್ಯಕ್ತಿ, ಸ್ಪಂದನ ಅಂದ್ರೆ ಅವ್ರ ಕುಟುಂಬಕ್ಕೆ ಯಾಕಷ್ಟು ಇಷ್ಟ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಂದೇ ಬಿಡ್ತು ಬಿಗ್ ಬಾಸ್ ಮೊದಲ ಪ್ರೋಮೋ; ಬಿಗ್ ಬಾಸ್ ಸೀಸನ್ 10ಕ್ಕೆ ಮುಹೂರ್ತ ಫಿಕ್ಸ್

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಚಿನ್ನಾರಿ ಮುತ್ತನ ಮನೆಯಲ್ಲಿ ಕಿಚ್ಚ ಸುದೀಪ್

ಹೌದು ಹಿಂದೊಮ್ಮೆ ಅಂದ್ರೆ ಚಿನ್ನಾರಿ ಮುತ್ತ ಬಿಗ್ ಬಾಸ್ ಗೆ ಸ್ಪರ್ಧೆಯಾಗಿ ಹೋಗಿದ್ದಾಗ ಸ್ಪಂದನ ಅವ್ರನ್ನ ಬಿಟ್ಟು ಹೋಗೋದು ಅವ್ರಿಗೆ ಬಹಳ ಕಷ್ಟ ಆಗಿತ್ತಂತೆ, ಸ್ಪಂದನ ಕೂಡ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ ಹೀಗಾಗಿ ತಾನಿಲ್ಲದೆ ಎಲ್ಲವನ್ನ ಹೇಗೆ ನಿಭಾಯಿಸುತ್ತಾಳೆ ಅನ್ನೋ ಗೊಂದಲದಲ್ಲೇ ರಾಘು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ರು. ಈ ಮಧ್ಯೆ ಕುಟುಂಬದವರನ್ನ ಭೇಟಿ ಮಾಡುವ ಅವಕಾಶ ಬಂದಾಗ ಸಿಕ್ಕಾ ಸಣ್ಣ ಅವಕಾಶವನ್ನ ಸ್ಪಂದನ ಹೇಗೆ ಬಳಸಿಕೊಂಡ್ರು, ಆ ಸಂದರ್ಭವನ್ನ ಹೇಗೆ ನಿಭಾಯಿಸಿದ್ರೂ ಅನ್ನೋದರ ಕುರಿತು ಕಿಚ್ಚ ಹಾಗೂ ಪತ್ನಿ ಪ್ರಿಯಾ ಆಡಿದ ಮಾತುಗಳನ್ನ ಚಿನ್ನಾರಿ ಮುತ್ತ ನೆನಸಿಕೊಂಡಿದ್ದಾರೆ.

ಅಲ್ದೇ ಕಿಚ್ಚ ಹಾಗೂ ಪ್ರಿಯಾ ಅವ್ರಿಗೆ ಸ್ಪಂದನ ಹೇಗೆ ಅಷ್ಟು ಇಷ್ಟವಾದ್ರೂ ಅನ್ನೋದನ್ನ ಕೂಡ ಹೇಳಿಕೊಂಡಿರುವ ರಾಘು, ಸ್ಪಂದನ ಹೆಚ್ಚಿಗೆ ಮಾತನಾಡುತ್ತಿರಲಿಲ್ಲ, ಒಬ್ಬರ ಬಗ್ಗೆ ಇನ್ನೊಬ್ಬರ ಹತ್ತಿರ ಏನನ್ನು ಹೇಳಿಕೊಳ್ಳುತ್ತಿರಲಿಲ್ಲ ಆದ್ರೆ ಕೆಲ ಸಂದರ್ಭಗಳನ್ನ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸಿ ಸಂಬಂಧಗಳನ್ನ ಉಳಿಸಿಕೊಳ್ಳುತ್ತಿದ್ದ ಸ್ಪಂದನ ಗುಣ ಸುದೀಪ್ ಹಾಗೂ ಪ್ರಿಯಾ ಅವ್ರಿಗೆ ತುಂಬಾ ಇಷ್ಟವಾಗಿತ್ತು, ಹೀಗಾಗಿ ಕಿಚ್ಚ ಮತ್ತು ಪ್ರಿಯಾ ಅವ್ರಿಗೆ ಅಷ್ಟು ಅಚ್ಚು ಮೆಚ್ಚು, ಮೊನ್ನೆ ಮನೆಗೆ ಬಂದಾಗಳು ಅಷ್ಟೇ ಅವಳನ್ನ ಮರೆತು ಬದುಕು ಅಂತ ನಾನು ಹೇಳ್ತಿಲ್ಲ, ಆಗಂತ ಆ ನೋವಿನಲ್ಲೆ ಇರು ಅಂತಲೂ ನಾನು ಹೇಳ್ತಿಲ್ಲ ಆದ್ರೆ ಎಲ್ಲವನ್ನ ನಿಭಾಯಿಸಿಕೊಂಡು ಹೋಗು ಅಂತ ನಾನು ಹೇಳ್ತಿದ್ದೀನಿ. ನಂಗೆ ಗೊತ್ತು ಅವಳನ್ನ ಮರೆಯೋದು ಅಷ್ಟು ಸುಲಭ ಅಲ್ಲ, ಮರೆತು ಬದುಕೋಕು ಆಗಲ್ಲ, ಆಗಂತ ಅಗೆಯೂ ಇರೋದು ಕಷ್ಟ, ಬಂದಿದ್ದೆಲ್ಲವನ್ನ ತೆಗೆದುಕೊಂಡು ಹೋಗಲೇ ಬೇಕು ಹೀಗಾಗಿ ಎಲ್ಲವನ್ನ ಸರಿದೂಗಿಸಿಕೊಂದು ಧೈರ್ಯವಾಗಿ ಹೋಗು ಅಂತ ಕಿಚ್ಚ ಹೇಳಿದ ಮಾತುಗಳನ್ನ ಸಂದರ್ಶನವೊಂದರಲ್ಲಿ ರಾಘು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವಿದೇಶದಲ್ಲಿ ಅರೆಬರೇ ಬಟ್ಟೆಯಲ್ಲಿ ಕಾಣಿಸಿಕೊಂಡ ಸೋನುಗೌಡ; ಒಳ ಉಡುಪಿನಲ್ಲಿ ರೆಸಾರ್ಟ್ ನಲ್ಲಿ ಸೋನುಗೌಡ ಫೋಟೋಶೂಟ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram