ಮುರಿದುಬಿತ್ತು ಜಗ್ಗಪ್ಪ ಸುಶ್ಮಿತಾ ಸಂಬಂಧ!? “ರಚಿತಾ ರಾಮ್ ಅವ್ರು ನಮ್ಮನ್ನ ಒಂದು ಮಾಡಲು ಪ್ರಯತ್ನಿಸಿದ್ರೂ”

ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಫಿನಾಲೆ ವೇದಿಕೆಯಲ್ಲೇ ಜಗ್ಗಪ್ಪ ಹಾಗೂ ಸುಶ್ಮಿತಾ ಎಂಗೇಜ್ ಆಗಿದ್ರು. ಹೌದು ನಟಿ ಶೃತಿ ಹಾಗೂ ನಟ ಸಾಧುಕೋಕಿಲ ಅವ್ರನ್ನ ಸಾಕ್ಷಿಯಾಗಿಟ್ಟುಕೊಂಡು ಹಸೆಮಣೆ ಏರಲು ಉಂಗುರದ ಮುದ್ರೆಯನ್ನ ಕಾಮಿಡಿ ಜೋಡಿಗಳು ಒತ್ತಿದ್ದರು. ಇದು ಎಲ್ಲರಿಗೂ ಆಶ್ಚರ್ಯವಾದ್ರೂ ಕೂಡ ಬಹಳಷ್ಟು ಜನ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ, ನೀವಿಬ್ರು ಮದುವೆಯಾದ್ರೆ ತುಂಬಾ ಚೆನ್ನಾಗಿರುತ್ತೆ ಅಂತ ಹೇಳಿದ್ರು ಅಲ್ಲದೇ ಕೆಲವೊಂದು ಟ್ರೋಲ್ ಫೇಜ್ ಗಳು ಕೂಡ ಒಳ್ಳೊಳ್ಳೆ ವಿಡಿಯೋಗಳನ್ನ ಮಾಡಿ ನಿಜ ಜೀವನದಲ್ಲೂ ಈ ಜೋಡಿ ಒಂದಾಗ್ಲಿ ಅಂತ ಸಕತ್ ಟ್ರೋಲ್ ಮಾಡಿದ್ರು, ಆ ವಿಡಿಯೋಗಳು ವೈರಲ್ ಅದಾಗ್ಲೇಲ್ಲಾ ಅಭಿಮಾನಿಗಳು ಹಾಗೂ ಆಪ್ತರು ಕೂಡ ಯಾಕೆ ನೀವಿಬ್ರು ಮದುವೆಯಾಗಬಾರದು ಅಂತ ಕೇಳಿದಾಗ ಎಲ್ಲಿಯೂ ಕೂಡ ಒಂಚೂರು ಸಣ್ಣ ಸುಳಿವನ್ನ ಬಿಟ್ಟುಕೊಡದೆ, ನಾವಿಬ್ಬರು ಸ್ನೇಹಿತರು ಮಾತ್ರ ಅಂತ ಹೇಳ್ತಲೆ ಫಿನಾಲೆ ವೇದಿಕೆಯ ಮೇಲಿಯೇ ತಮ್ಮಿಬ್ಬರ ಪ್ರೀತಿಯನ್ನ ವ್ಯಕ್ತಪಡಿಸಿ ಉಂಗುರ ಬದಲಾಯಿಸಿಕೊಂಡಿದ್ದರು. ಹೌದು ಮಜಾಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನ ಸ್ಪರ್ಧೆಗಳಾಗಿದ್ದ ಕಾಮಿಡಿ ಕಲಾವಿದರಾದ ಸುಶ್ಮಿತಾ ಹಾಗೂ ಜಗ್ಗಪ್ಪ ತಾವಿಬ್ಬರು ಉಂಗುರ ಬದಲಾಯಿಸಿಕೊಂಡು ಮದುವೆಯಾಗುವ ಸುಳಿವು ಕೊಟ್ಟಿದ್ರು. ಆದ್ರೆ ಇದೀಗ ಈ ವಿಚಾರದಲ್ಲಿ ಬಗ್ಗೆ ಮಾತನಾಡಿರುವ ಸುಶ್ಮಿತಾ ಇದೆಲ್ಲಾ ಸುಳ್ಳು ನಾವಿಬ್ರು ಮದುವೆ ಆಗ್ತಿಲ್ಲ ಅಂತ ಹೊಸ ಬಾಂಬ್ ಸಿಡಿಸಿದ್ದಾರೆ.

WhatsApp Group Join Now
Telegram Group Join Now

ಹೌದು ಸುಶ್ಮಿತಾ ಹಾಗೂ ಜಗ್ಗಪ್ಪ ಪ್ರೀತಿ ಹಾಗೂ ಮದುವೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳು ಟ್ರೋಲ್ ಗಳು ಹರಿದಾಡುತ್ತಿದ್ವು, ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರು ವೇದಿಕೆ ಮೇಲೆ ರಿಂಗ್ ಎಕ್ಸ್ಚೇಂಜ್ ಮಾಡಿಕೊಂಡಿದ್ರು. ಆದ್ರೆ ಇದೀಗ ಉಲ್ಟಾ ಹೊಡದಿರೋ ಸುಶ್ಮಿತಾ ಅಯ್ಯೋ ಏನಿದು ಹರಿದಾಡುತ್ತಿರುವುದು. ಇದೆಲ್ಲಾ ಸುಳ್ಳು ಸುದ್ದಿ. ಮೊದಲನೇ ಸೀಸನ್‌ನಿಂದಲೂ ಜನರು ನಮ್ಮನ್ನು ತುಂಬಾ ಜೋಡಿಯಾಗಿ ನೋಡಿದ್ದಾರೆ, ಅದಿಕ್ಕೆ ರಿಯಲ್ ಜೀವನದಲ್ಲೂ ಜೋಡಿ ಅಂದುಕೊಂಡಿದ್ದಾರೆ ಅಂತ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ರಚಿತಾ ರಾಮ್ ಮೇಡಂ ಲವ್ ಮದ್ವೆ ಮಾಡಿಸುತ್ತಾರೆ ಅನ್ನೋ ವಿಚಾರ ಇತ್ತು, ಪಾಪ ಅವರು ಅಡ್ಡ ಬಂದಿಲ್ಲ, ಅವರಿಂದ ನಾವು ಒಳ್ಳೆ ಒಳ್ಳೆ ಸ್ಕಿಟ್‌ಗಳನ್ನು ಮಾಡಿದ್ದೀವಿ. ರಚ್ಚು ಸ್ವೀಟ್ ಹಾರ್ಟ್‌ ಯಾವಾಗಲೂ ಮಾತನಾಡಿಸುತ್ತಿರುತ್ತಾರೆ, ಅವ್ರ ಬರ್ತಡೇಗೆ ಹೋಗಿ ವಿಶ್ ಮಾಡಿದ್ದೀವಿ, ಅವರು ಯಾವ ರೀತಿನೂ ಅಡ್ಡ ಬಂದಿಲ್ಲ. ಆದರೆ ಒಂದು ಮಾಡಲು ತುಂಬಾ ಪ್ರಯತ್ನ ಪಟ್ಟರು ನಾವೇ ಬೇರೆ ಬೇರೆ ಆಗ್ಬಿಟ್ವಿ ಅಂತ ಸುಶ್ಮಿತಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

ಆಗಾದ್ರೆ ವೇದಿಕೆ ಮೇಲೆ ಸುಶ್ಮಿತಾ ಜಗ್ಗಪ್ಪ ಎಂಗೇಜ್ಮೆಂಟ್ ಬಗ್ಗೆ ಹೇಳಿದ್ದೇನು?

ಜೊತೆಗೆ ರಿಂಗ್ ಎಕ್ಸ್ಚೇಂಜ್ ಬಗ್ಗೆ ಮಾತನಾಡದ ಸುಶ್ಮಿತಾ ಜನರ ತಿಳುವಳಿಕೆ ಬಗ್ಗೆ ಮಾತನಾಡುತ್ತಲೇ ಉಲ್ಟಾ ಹೊಡೆದಿದ್ದಾರೆ. ಹೌದು ಟಿವಿಯಲ್ಲಿ ಸ್ಕಿಟ್‌ಗೆ ನಮ್ಮನ್ನು ಪದೇ ಪದೇ ಜೋಡಿ ಮಾಡಿ ಮಾಡಿ ನನಗೆ ಹುಡುಗ ಸಿಗುತ್ತಿಲ್ಲ ಜಗಪ್ಪನಿಗೆ ಹುಡುಗಿ ಸಿಗುತ್ತಿಲ್ಲ. ಜನರೇ ನಮ್ಮ ಜೀವನದ ಸಂಗಾತಿ ಬಗ್ಗೆ ಫಿಕ್ಸ್‌ ಆಗಿ ಬಿಟ್ಟಿದ್ದಾರೆ. ಆನ್‌ಸ್ಕ್ರೀನ್‌ ಜೋಡಿ ಸಾಮಾನ್ಯವಾಗಿ ಜನರಿಗೆ ಇಷ್ಟ ಆಗುವುದು ಕಡಿಮೆನೇ ಅದರಲ್ಲೂ ನಮ್ಮ ಜುಗಲ್ ಬಂದಿ ಇಷ್ಟ ಪಡುತ್ತಾರೆ ಅಂದ್ರೆ ಇನ್ನೂ ಖುಷಿ ಆಗುತ್ತೆ. ಆರಂಭದಿಂದ ಈ ಕ್ಷಣದವರೆಗೂ ನಮ್ಮ ಕಾಂಬಿನೇಷನ್‌ ಸ್ಕಿಟ್‌ನ ಜನರು ಇಷ್ಟ ಪಡುತ್ತಿದ್ದಾರೆ. ರಚಿತಾ ರಾಮ್ ಅವರನ್ನು ಸದಾ ನೆನಪಿಸಿಕೊಳ್ಳಬೇಕು ಅವರ ಸಪೋರ್ಟ್‌ನಿಂದ ನಾವು ಇಷ್ಟು ಹೆಸರು ಮತ್ತು ಜನಪ್ರಿಯತೆ ಗಳಿಸಿರುವುದು ತಾಳಿ ಕಟ್ಟಿ ಯಜಮಾನ್ರು ಎನ್ನುತ್ತಿದ್ದರು ಅಂತ ಸುಶ್ಮಿತಾ ಬಹಳ ನಾಜುಕಾಗಿ ಜಾರಿಕೊಂಡಿದ್ದಾರೆ.

ಅಲ್ದೇ ಕಲಾವಿದೆ ಆಗಬೇಕು ನಟನೆ ಮಾಡಬೇಕು ಅನ್ನೋ ಆಸೆ ತುಂಬಾ ವರ್ಷಗಳಿಂದ ಇತ್ತು ಆದರೆ ಇಷ್ಟು ದೂರ ಕರೆದುಕೊಂಡು ಬರುತ್ತೆ ಬದುಕು ಅಂತ ಗೊತ್ತಿರಲಿಲ್ಲ. ಮಜಾ ಭಾರತ ವೇದಿಕೆ ಸಿಗುತ್ತೆ ಅನ್ನೋ ಕಲ್ಪನೆ ಇರಲಿಲ್ಲ. ನಟನ ಕ್ಷೇತ್ರದಲ್ಲಿ ಯಾವ ಆಸೆನೂ ಇಲ್ಲದೆ ಕೆಲಸ ಬಂದಾಗ ಕೆಲಸ ಮಾಡುತ್ತಿದ್ದೆ ಅಂತ ಸುಶ್ಮಿತಾ ಹೇಳಿಕೊಂಡಿದ್ದಾರೆ. ಇದಲ್ಲದೆ ಈ ಹಿಂದೆಯು ಕೂಡ ಜಗ್ಗಪ್ಪ ಸಂದರ್ಶನ ಒಂದರಲ್ಲಿ ರಚಿತಾ ರಾಮ್‌ ನಮಗೆ ಹೆಸರು ಮಾಡಲು ಸಹಾಯ ಮಾಡಿದರು ಹೀಗಾಗಿ ರಚ್ಚು ನನಗೆ ಒಂದು ಕಣ್ಣು ಸುಶ್ಮಿತಾ ಮತ್ತೊಂದು ಕಣ್ಣು ಇದ್ದಂತೆ ಅಂತ ಹೇಳಿದ್ದರು. ಆದ್ರೆ ಇದೀಗ ಎಲ್ಲವು ಉಲ್ಟಾ ಆಗಿದ್ದು ಇವರಿಬ್ಬರು ದೂರ ಆಗಲು ಕಾರಣ ಏನು ಅನ್ನೋದು ಮಾತ್ರ ಇನ್ನು ಗೊತ್ತಾಗಿಲ್ಲ.

ಇದನ್ನೂ ಓದಿ: ಅಪ್ಪು ಹೆಸರಲ್ಲಿ ಸ್ವಯಂ ಚಾಲಿತ ಅರೋಗ್ಯ ಯಂತ್ರ, ಅಪ್ಪು ಹೆಸರಲ್ಲಿ ಹೊಸ ಯೋಜನೆ ಘೋಷಿಸಿದ ಸಿದ್ದರಾಮಯ್ಯ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram