ಚೆನ್ನಾಗಿಯೇ ಇದ್ದ ಶ್ರೀ ಮುರಳಿಗೆ ಈಗ ಏನಾಯ್ತು? ಸ್ಪಂದನಾ ಕಾರ್ಯಕ್ಕೆ ಕುಂಟುತ್ತ ಬಂದ ಶ್ರೀ ಮುರುಳಿ

ನಟ ವಿಜಯ್ ರಾಘವೇಂದ್ರ ಅವ್ರ ಪತ್ನಿ ಸ್ಪಂದನಾ ಸಂಬಂಧಿಗಳೊಂದಿಗೆ ಬ್ಯಾಂಕಾಕ್‌ಗೆ ತೆರಳಿದ್ದರು. ಕೆಲವು ದಿನಗಳು ಅಲ್ಲೇ ಆತ್ಮೀಯರೊಂದಿಗೆ ಸುತ್ತಾಟ ನಡೆಸಿದ್ದರು. ಇನ್ನೇನು ಒಂದೆರಡು ದಿನಗಳಲ್ಲಿ ಭಾರತಕ್ಕೆ ಹಿಂತಿರುಗಬೇಕು ಅನ್ನುವಾಗಲೇ ಹೃದಯಾಘಾತವಾಗಿತ್ತು. ಆಗ ಆಸ್ಪತ್ರೆ ದಾಖಲಿಸಿದರೂ ಸ್ಪಂದನಾ ಬದುಕಿ ಬರಲಿಲ್ಲ. ಇನ್ನು ಸ್ಪಂದನಾ ಅಗಲಿ ನಿನ್ನೆಗೆ 11 ದಿನಗಳಾಗಿವೆ. ಹೀಗಾಗಿ ಸ್ಪಂದನಾ ಕುಟುಂಬ ಉತ್ತರಕ್ರಿಯೆ ಕಾರ್ಯವನ್ನು ಮಾಡಿದೆ. ಬೆಳಗ್ಗೆಯಿಂದಲೇ ಕಾರ್ಯಗಳು ಆರಂಭ ಆಗಿ, ಶಾಂತಿ ಹೋಮವನ್ನು ನಡೆಸಲಾಗಿದೆ. ಬಳಿಕ ಕೋದಂಡರಾಮಪುರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಮತ್ತೆ ಪೂಜೆಯನ್ನು…

Read More