ನಿಮಗೆ ಒಳ್ಳೆ ಸಮಯ ಆರಂಭ ಆಗೋ ಮುನ್ನ ತುಳಸಿ ಗಿಡ ಈ 5 ದೊಡ್ಡ ಸೂಚನೆಗಳನ್ನು ಕೊಡುತ್ತೆ

ನಮ್ಮ ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಹತ್ವವಿದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯ ಮುಂದೆ ತುಳಸಿಗಿಡ ಇರುತ್ತದೆ ತುಳಸಿ ಗಿಡವನ್ನು ಲಕ್ಷ್ಮೀದೇವಿ ಸ್ವರೂಪ ಎಂದು ಹೇಳುವುದರಿಂದ ಸಾಕಷ್ಟು ಮಹತ್ವವನ್ನು ತುಳಸಿಗಿಡ ಹೊಂದಿದೆ. ಧಾರ್ಮಿಕವಾಗಿ ಅಷ್ಟೇ ಅಲ್ಲದೆ ಕೂಡ ವೈಜ್ಞಾನಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ತುಳಸಿ ಗಿಡವನ್ನು ಆರಾಧನೆ ಮಾಡಿರುವುದರಿಂದ ಸಾಕಷ್ಟು ಉತ್ತಮ ಫಲಗಳನ್ನು ಪಡೆದುಕೊಳ್ಳಬಹುದು. ಹಾಗೂ ತುಳಸಿ ಗಿಡಕ್ಕೆ ಸಂಬಂಧಿಸಿದಂತೆ ಕೆಲವೊಂದು ತಪ್ಪುಗಳನ್ನು ಮಾಡಬಾರದು ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಜೊತೆಗೆ ಭಗವಾನ್ ಶ್ರೀಕೃಷ್ಣನಿಗೆ ತುಳಸಿ ಗಿಡ ಬಹಳ ಇಷ್ಟವಾದದ್ದು, ತುಳಸಿ ಇಲ್ಲದೆ ಕೃಷ್ಣ ಯಾವ ಪ್ರಸಾದವನ್ನು ಸ್ವೀಕರಿಸುವುದಿಲ್ಲ.

WhatsApp Group Join Now
Telegram Group Join Now

ಶ್ರೀಕೃಷ್ಣನೇ ಹೇಳಿರುವ ಹಾಗೆ, ಪ್ರತಿದಿನ ತುಳಸಿಗೆ ಯಾರು ಪೂಜೆ ಮಾಡುತ್ತಾರೋ ಅವರ ಬದುಕಿನಲ್ಲಿ ಯಾವುದೇ ಕಷ್ಟ ಬರುವುದಿಲ್ಲ. ತುಳಸಿದಳವನ್ನು ಸೇವನೆ ಮಾಡುವವರಿಗೆ ಜೀವನದಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ತುಳಸಿಗೆ ಎಲ್ಲಾ ಥರದ ರೋಗಗಳನ್ನು ಗುಣ ಮಾಡುವ ಸಾಮರ್ಥ್ಯ ಇದೆ. ತುಳಸಿ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ನಿಮ್ಮ ಮನೆಗೆ ಯಾವುದೇ ನೆಗಟಿವ್ ಎನರ್ಜಿ ಬರುವುದಿಲ್ಲ. ಮನೆಯ ಒಳಗೆ ಯಾವಾಗಲೂ ಪಾಸಿಟಿವಿಟಿ ಇರುವ ಹಾಗೆ ಮಾಡುತ್ತದೆ. ಲಕ್ಷ್ಮೀದೇವಿ ನಿಮ್ಮ ಮನೆಗೆ ಆಗಮಿಸುತ್ತಿರುವ ವೇಳೆ ಕೂಡ ತುಳಸಿ ಗಿಡದ ಮೂಲಕ ನಿಮಗೆ ಸೂಚನೆ ಸಿಗುತ್ತದೆ. ಹಾಗಿದ್ದಲ್ಲಿ, ಒಳ್ಳೆದಿನಗಳ ಆರಂಭದ ಸೂಚನೆಯನ್ನ ತುಳಸಿ ಗಿಡ ಹೇಗೆ ಕೊಡುತ್ತೆ ನಾವು ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶಗಳು ಯಾವ್ಯಾವು ನೋಡೋಣ.

ಮೊದಲಿಗೆ ಸ್ನೇಹಿತರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ತುಳಸಿ ಗಿಡ ಒಣಗುವುದಕ್ಕೆ ಶುರು ಮಾಡಿದರೆ ಅದು ಅಶುಭ ಅಂತ ಪರಿಗಣಿಸಬೇಕು. ನೀವು ಎಷ್ಟೇ ಕಾಳಜಿ ವಹಿಸಿದ್ರು ಕೂಡ ಗಿಡ ಒಣಗಿ ಹೋಗುತ್ತಿದೆ ಅಂದ್ರೆ ಅದರಿಂದ ಸಿಗುವ ಸೂಚನೆ ನಿಮಗೆ ಶೀಘ್ರದಲ್ಲೇ ಹೆಚ್ಚಿನ ಖರ್ಚು ಬೀಳುತ್ತದೆ, ಮತ್ತು ಯಾವುದೋ ಒಂದು ರೀತಿಯಲ್ಲಿ ಕಷ್ಟಗಳು ಬರುತ್ತದೆ ಎನ್ನುವುದಾಗಿದೆ. ಹಾಗೆಯೇ ನಿಮಗೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವುದನ್ನು ಕೂಡ ಸೂಚಿಸುತ್ತದೆ. ಹೀಗಾಗಿ ಗಿಡ ಒಣಗಳು ಶುರುವಾಗ್ತಿದ್ದಂತೆ, ಬೇರೆ ಗಿಡವನ್ನು ತಂದು ನೆಡಬೇಕು. ಇನ್ನು ತುಳಸಿ ಗಿಡದ ಎಲೆಗಳು ಒಣಗಿ, ಹಳದಿ ಬಣ್ಣಕ್ಕೆ ತಿರುಗಿ ಬೀಳುವುದಕ್ಕೆ ಶುರುವಾದರೆ, ಅದರಿಂದ ನಿಮಗೆ ಯಾವುದೇ ತೊಂದರೆ ಅಥವಾ ಸಮಸ್ಯೆ ಉಂಟಾಗುವುದಿಲ್ಲ., ಗಾಳಿಗೆ ಎಲೆ ಬಿದ್ದಿರುತ್ತದೆ. ನೀವು ಗಾಬರಿ ಪಡಬೇಡಿ. ಅದ್ರೆ ಹಸಿರು ಎಲೆಗಳೇ ಉದುರುತ್ತಿದೆ ಅಂದ್ರೆ ಅದು ಅಶುಭ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸೂಕ್ಷ್ಮವಾಗಿ ಗಮನಿಸಿ ಇವುಗಳನ್ನ ಪಾಲಿಸಿ ಅದೃಷ್ಟ ಖುಲಾಯಿಸುತ್ತದೆ

ಸಂಜೆ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪ ಹಚ್ಚಿರಿ, ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ಜಗಳ ನಡೆಯುವುದಿಲ್ಲ. ಇನ್ನು ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಪಕ್ಕದಲ್ಲೇ ಬೇರೆ ಗಿಡಗಳು ಹುಟ್ಟುತ್ತಿದ್ದರೆ, ಅದು ಮನೆಗೆ ಶಾಂತಿ, ಸಮೃದ್ಧಿಯ ಪ್ರವೇಶ ಆಗುತ್ತದೆ ಎನ್ನುವುದರ ಸಂಕೇತ ಆಗಿದೆ. ತುಳಸಿ ಕೊಡುವ ಈ ಸೂಚನೆ ಇಂದ ನೀವು ಬಿಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ನಿಮಗೆ ಮುಂದೆ ಒಳ್ಳೆಯದಾಗುತ್ತೋ ಕೆಟ್ಟದ್ದಾಗುತ್ತೋ ಎನ್ನುವುದು ತುಳಸಿ ಗಿಡದಿಂದ ಮೊದಲೇ ಗೊತ್ತಾಗುತ್ತದೆ. ಅದರಲ್ಲೂ ತುಳುಸಿ ಗಿಡದ ಪಕ್ಕ ಮತ್ತೊಂದು ತುಳಸಿ ಹುಟ್ಟಿದ್ರೆ ಸಾಕ್ಷಾತ್ ಲಕ್ಷ್ಮೀಯೇ ನಿಮ್ಮ ಮನೆಗೆ ಬರುತ್ತಿದ್ದಾಳೆ ಅನ್ನೋ ಸೂಚನೆ ಸ್ನೇಹಿತರೆ.

ಒಂದು ವೇಳೆ ನಿಮ್ಮ ಮನೆಯ ತುಳಸಿ ಗಿಡದ ಹತ್ತಿರ ನೀವು ಕ್ಲೀನ್ ಮಾಡಿದ್ದರು ಕೂಡ, ಜೇಡರ ಹುಳಗಳು ಬಂದಿವೆ ಎಂದರೆ, ಅದರಿಂದ ಗಿಡ ಹಾಳಾಗುತ್ತಿದೆ ಎಂದು ಅರ್ಥ. ಇದರ ಅರ್ಥ ಹೊರಗಿನ ವ್ಯಕ್ತಿಯೊಬ್ಬರು ನಿಮ್ಮ ಬದುಕಿಗೆ ತೊಂದರೆ ಉಂಟು ಮಾಡುತ್ತಾರೆ ಎಂದು. ಒಂದು ವೇಳೆ ನಿಮ್ಮ ತುಳಸಿ ಗಿಡದ ಮೇಲೆ ಚಿಟ್ಟೆ ಅಥವಾ ಪಕ್ಷಿಗಳು ಕುಳಿತಿದ್ದು, ಆ ನೋಟ ನಿಮಗೆ ಖುಷಿ ತಂದರೆ, ನಿಮಗೆ ಹೆಚ್ಚು ಧನಲಾಭ ಆಗುತ್ತದೆ ಎನ್ನುವುದನ್ನು ಸೂಚಿಸುತ್ತದೆ, ಅಥವಾ ನಿಮ್ಮ ಆಸೆಗಳು ನೆರವೇರುತ್ತದೆ ಎನ್ನುವುದು ಅರ್ಥ. ಜೊತೆಗೆ ಇರುವುಗಳು ಕಾಣಿಸಿದರು ಇದು ಏಳಿಗೆಯ ಸಂಕೇತ.

ಹಾಗಾಗಿ ಮನೆಯ ಮುಂದೆ ಹಾಕಿರ್ತಕ್ಕಂತ ತುಳಸಿ ಗಿಡವನ್ನ ಬಹಳ ಜೋಪಾನವಾಗಿ ನೋಡಿಕೊಳ್ಳಬೇಕು. ತುಳಸಿ ಗಿಡ ಇರುವ ಮನೆಯಲ್ಲಿ ಮಾಂಸಹಾರ ಮಧ್ಯಪಾನವನ್ನು ಮಾಡಲೇಬಾರದು, ಇದು ತುಳಸಿಯ ಕೋಪಕ್ಕೆ ಕಾರಣವಾಗುತ್ತದೆ. ತುಳಸಿ ಗಿಡ ಯಾವತ್ತಿಗೂ ಶುದ್ಧವಾದ ಸ್ಥಳದಲ್ಲಿ ಇರಬೇಕು, ಅಶುದ್ಧವಾದ ಸ್ಥಳಗಳಲ್ಲಿ ತುಳಸಿಯನ್ನು ನೆಡಬಾರದು. ತುಳಸಿಯನ್ನು ನೆಟ್ಟಿರ್ತಕ್ಕಂತ ಪ್ರದೇಶವನ್ನು ಬಹಳ ಅಚ್ಚುಕಟ್ಟಾಗಿ ಇಟ್ಟು ಕೊಳ್ಳಬೇಕು. ಒಟ್ಟಿನಲ್ಲಿ ಮನೆಯ ಮುಂದೆ ಇರತಕ್ಕಂತಹ ತುಳಸಿ ಮನೆಗೆ ಬರ್ತಕಂತ ನಕಾರಾತ್ಮಕ ಶಕ್ತಿಗಳನ್ನು ತಡೆದು ನಿಲ್ಲಿಸ್ತಾಳೆ ಅನ್ನೋ ನಂಬಿಕೆ ಆಗಿನ ಕಾಲದಿಂದಲೂ ಇದೆ. ಹೀಗಾಗಿ ಮನೆಯ ಮುಂದೆ ಸಾಕ್ಷಾತ್ ಲಕ್ಷ್ಮಿ ದೇವಿಯ ಇದ್ದಾಳೆ ಅನ್ನೋ ಮನೋಭಾವದಲ್ಲಿ ತುಳಸಿಯನ್ನು ಬಹಳ ನಾಜೂಕಿನಿಂದ ನೋಡಿಕೊಂಡು, ಭಕ್ತಿಯಿಂದ ಒಳ್ಳೆಯ ಮನಸ್ಸಿನಿಂದ ಪೂಜೆಯನ್ನು ಸಲ್ಲಿಸಿದ್ದೆ ಆದಲ್ಲಿ ನಿಮಗೆ ಮಾತೆ ಮಹಾಲಕ್ಷ್ಮಿಯ ಅನುಗ್ರಹ ಆಗುತ್ತದೆ.

ಇದನ್ನೂ ಓದಿ: ಧ್ರುವ ಸರ್ಜಾ ಮಗಳ ಜೊತೆಗೆ ಫೋಟೋ ಕ್ಲಿಕ್ಕಿಸಿದ ಮೇಘನಾ; ಕಣ್ಮಣಿ ಎಂದು ಕ್ಯೂಟ್ ಹೆಸರಿಟ್ಟ ಮೇಘನಾ

ಇದನ್ನೂ ಓದಿ: ನಿಮಗೆ ದರ್ಶನ್, ಶಿವಣ್ಣ, ಯಶ್ ಮಾತ್ರನ ಕಾಣಿಸೋದಾ? ದರ್ಶನ್ ಖಡಕ್ ಮಾತು; ಕನ್ನಡ ನಾಡಲ್ಲಿ ತಮಿಳನ್ನ ಬೆಳೆಸ್ತಾ ಇರೋರು ಯಾರು?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram