ಉಜ್ವಲ ಫಲಾನುಭವಿಗಳಿಗೆ 300 ರೂ ಸಬ್ಸಿಡಿ ಹಾಗೂ ಯೋಜನೆಯನ್ನು 2025 ರ ವರೆಗೆ ವಿಸ್ತರಿಸಿದ ಕೇಂದ್ರ ಸರ್ಕಾರ

Ujjwala scheme LPG Cylinder Subsidy

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಭಾರತ ಸರ್ಕಾರದ ಒಂದು ಯೋಜನೆ ಆಗಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ ಎಲ್ಪಿಜಿ(LPG) ಸಂಪರ್ಕಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಈ ಯೋಜನೆ 2016 ರ ಮೇ 1 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಡ ಕುಟುಂಬಗಳಿಗೆ ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಸಿಲೆಂಡರ್ ಜೊತೆಗೆ ಹೋಗೆ ಮುಕ್ತ ಅಡುಗೆ ಮನೆ ಹಾಗೂ ಮಹಿಳೆಯರ ಆರೋಗ್ಯದಲ್ಲಿ ಸುಧಾರಣೆ ತರುವುದು ಈ ಯೋಜನೆಯ ಉದ್ದೇಶವಾಗಿದೆ.

WhatsApp Group Join Now
Telegram Group Join Now

ಕಳೆದ ಅಕ್ಟೋಬರ್ ತಿಂಗಳಲ್ಲಿ ಸಬ್ಸಿಡಿ ದರ ಏರಿಕೆ ಮಾಡಿದ ಕೇಂದ್ರ ಸರ್ಕಾರ:- ಉಜ್ವಲ ಯೋಜನೆಯಲ್ಲಿ 200 ರೂಪಾಯಿ ನೀಡುತ್ತಿದ್ದ ಸಬ್ಸಿಡಿ ಹಣವನ್ನು ಕಳೆದ ಅಕ್ಟೋಬರ್ ತಿಂಗಳಲ್ಲಿ 100 ರೂಪಾಯಿ ಜಾಸ್ತಿ ಮಾಡಿ ಯೋಜನೆಯ ಫಲಾನುಭವಿಗಳಿಗೆ 308 ರೂಪಾಯಿ ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿತ್ತು. ಇದೀಗ ಈ ದರವನ್ನು ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

ಸಚಿವ ಪಿಯೂಷ್ ಗೋಯೆಲ್ ಅವರು ಪತ್ರಿಕಾ ಘೋಷಣೆಯ ಹೇಳಿಕೆ:- ಉಜ್ವಲ ಯೋಜನೆಯ ಬಗ್ಗೆ ಮಾತನಾಡಿದ ಸಚಿವರು ಈ ಯೋಜನೆಯನ್ನು ಮುಂದಿನ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. 14.2 ಕೆಜಿ LPG ಸಿಲಿಂಡರ್‌ಗೆ ನೀಡುತ್ತಿದ್ದ 300 ರೂಪಾಯಿ ದರವನ್ನು ಮಾರ್ಚ್ 2025 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಇದರ ಉಪಯೋಗಗಳನ್ನು ಫಲಾನುಭವಿಗಳು ಪಡೆಯಬೇಕು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

ಉಜ್ವಲ ಯೋಜನೆಯ ಲಾಭಗಳು ಏನು?

  • ಉಜ್ವಲ ಯೋಜನೆಯು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಮೂಲಕ ಬಡ ಕುಟುಂಬಗಳಿಗೆ ಶುಚಿಯಾಗು ಅಡುಗೆ ಮಾಡಲು ಸಹಾಯಕವಾಗಿದೆ ಹಾಗೂ ಈ ಮನೆಯ ಒಳಗಿನ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ.
  • ಉಜ್ವಲ ಯೋಜನೆಯು ಮಹಿಳೆಯರ ಆರೋಗ್ಯ ಮತ್ತು ಆರೋಗ್ಯವನ್ನು ಸುಧಾರಿಸಲು ಸಹಾಯವಾಗುತ್ತದೆ ಅಂದರೆ ಮಹಿಳೆಯರಿಗೆ ಸುಡುವ ಗಾಯಗಳ ಅಪಾಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಉಪಯೋಗ ಆಗಿದೆ.
  • ಈ ಯೋಜನೆಯಿಂದ ಮಹಿಳೆಯರಿಗೆ ಅಡುಗೆ ಮಾಡಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಜೊತೆಗೆ ಇದರಿಂದ ಅವರು ಶಿಕ್ಷಣ ಮತ್ತು ಇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಾಯ ಆಗುತ್ತದೆ.
  • ಉಜ್ವಲ ಯೋಜನೆಯು ಪರಿಸರ ಸಂರಕ್ಷಣೆಗೆ ಸಹಾಯಕವಾಗಿದೆ ಈ ಯೋಜನೆಯು ಸಾಂಪ್ರದಾಯಿಕ ಅಡುಗೆ ಇಂಧನ ಕಡಿಮೆ ಹೊಗೆ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಆಗುವಿದ್ನನು ಕಡಿಮೆ ಮಾಡಲು ಸಹಾಯಕ.
  • ಉಜ್ವಲ ಯೋಜನೆಯು ಬಡ ಕುಟುಂಬಗಳಿಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯ ಮಾಡುತ್ತದೆ ಹಾಗೂ ಯೋಜನೆಯು ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಮೂಲಕ ಅಡುಗೆ ಇಂಧನದ ಮೇಲಿನ ಕುಟುಂಬಗಳ ವೆಚ್ಚವನ್ನು ಕಡಿಮೆ ಮಾಡುತ್ತದೆ.
  • ಉಜ್ವಲ ಯೋಜನೆಯು ಬಡ ಕುಟುಂಬಗಳ ಜೀವನಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಬ್ಸಿಡಿ ಹಣವನ್ನು ಬೇರೆ ಕಡೆ ವಿನಿಯೋಗ ಮಾಡಲು ಸಹಾಯಕವಾಗಿದೆ.
  • ಕುಟುಂಬಕ್ಕೆ ಸಹಾಯ ಆಗುವ ಜೊತೆಗೆ ದೇಶ ಪ್ರಗತಿಗೆ ಹೆಚ್ಚಿನ ಸಹಾಯ ಆಗಲಿದೆ ಏಕೆಂದರೆ ಪ್ರತಿ ಕುಟುಂಬದ ಪ್ರಗತಿಯು ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ.

ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಪಡೆಯಲು ನೀವು ಅಧಿಕೃತ ವೆಬ್ಸೈಟ್ ಅಥವಾ ನಿಮ್ಮ ಹತ್ತಿರದ ಗ್ಯಾಸ್ ಏಜೆಂಟ್ ಸಂಪರ್ಕಿಸಿ.

ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆಯ 7 ಕಂತಿನ ಹಣದ ಜೊತೆಗೆ ಇಲ್ಲಿಯವರೆಗೆ ಹಣ ಬಾರದೆ ಇದ್ದವರಿಗೆ 6 ಕಂತುಗಳ ಹಣ ಒಟ್ಟಿಗೆ ಬರಲಿದೆ.

ಇದನ್ನೂ ಓದಿ: Motovolt M7: ಸ್ಮಾರ್ಟ್ ಮತ್ತು ಸ್ಟೈಲಿಷ್ ಆಗಿರುವ ಈ ಸ್ಕೂಟರ್ ನಲ್ಲಿ ಒಮ್ಮೆ ಚಾರ್ಜ್ ಮಾಡಿದರೆ ದಿನವಿಡೀ ಓಡಾಡಬಹುದು