Umapathy Srinivas: ದರ್ಶನ್ ಸರ್ ಫ್ಯಾನ್ ಆಗಿ ಸಿನಿಮಾ ಪ್ರೊಡ್ಯೂಸ್ ಮಾಡಿದ್ದೆ! ಈಗ ಏನೇ ಆಗಿದ್ರು ಕಾಲನೇ ಪಾಠ ಕಲ್ಸುತ್ತೆ.!

Umapathy Srinivas: ಸ್ನೇಹಿತರೆ ನಿಮ್ಮಲ್ಲರಿಗೂ ಗೊತ್ತಿರುವಂತೆ ಈಗಾಗ್ಲೇ ಚುನಾವಣಾ ರಂಗು ರಾಜ್ಯದಲ್ಲಿ ಹೆಚ್ಚಾಗ್ತಲೆ ಇದೆ. ಅದರಲ್ಲಿ ಸಿನಿಮಾ ಸ್ಟಾರ್ ಗಳ ಎಂಟ್ರಿಯಿಂದಾಗಿ ಒಂದಷ್ಟು ಟೀಕೆ ಟಿಪ್ಪಣಿ ಚರ್ಚೆಗಳಾದ್ವು, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಬೊಮ್ಮನಹಳ್ಳಿ ವಿಧಾನಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಮತಯಾಚನೆ ಮಾಡಿ ಪ್ರಚಾರ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ರು. ಇದು ಒಂದು ಕಾಲದ ಗೆಳೆಯ ಅಣ್ಣತಮ್ಮಂದಿರಂತಿದ್ದ ಬೊಮ್ಮನಹಳ್ಳಿ ಕ್ಷೇತ್ರದ ಈಗೀನ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡರಿಗೆ ಅರಗಿಸಿಕೊಳ್ಳಲು ಆಗ್ತಿಲ್ಲ ಅನ್ಸುತ್ತೆ ಹೀಗಾಗಿ ದರ್ಶನ್ ಅವ್ರ ಹೆಸರನ್ನ ಬಳಸದೆಯೇ ನಿರ್ಮಾಪಕರಿಲ್ಲದೆ ಯಾರು ಸ್ಟಾರ್ ಗಳಾಗಳು ಸಾಧ್ಯಯಿಲ್ಲ, ನಿರ್ಮಾಪಕರಿದ್ರೆ ಕಲಾವಿದ್ರು ಬೆಳೆಯೋಕಾಗೋದು ಅಂತ ಒಂದು ಹೇಳಿಕೆಯನ್ನ ಕೊಟ್ಟಿರುತ್ತಾರೆ.

WhatsApp Group Join Now
Telegram Group Join Now

ಆದ್ರೆ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿಯೂ ತುಟಿ ಬಿಚ್ಚಿರಲ್ಲ. ಆದರೆ ಮೊನ್ನೆ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಬಹಿರಂಗವಾಗಿ ರೋಡ್ ಷೋ ಮೂಲಕ ಮಾತಾಯಾಚನೆ ಮಾಡುವಾಗ ನಿರ್ಮಾಪಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಕೊಟ್ಟಿದ್ದ ಹೇಳಿಕೆಗೆ ಸರಿಯಾಗಿಯೇ ಕೌಂಟರ್ ಕೊಡ್ತಾರೆ. ಅದೇನಂದ್ರೆ ಯಾರು ಯಾರನ್ನು ಬೆಳಸಲ್ಲ, ಹಾಗೆ ನಾನು ಕೂಡ ನನ್ನನ್ನು ಯಾವ ನಿರ್ಮಾಪಕನು ಬೆಳಸಿಲ್ಲ, ಹಾಗೆ ಹೇಳಿಕೊಳ್ಳೋಕೆ ಯೋಗ್ಯತೆನು ಅವರಿಗಿಲ್ಲ, ನನ್ನನ್ನ ಬೆಳಿಸಿದ್ರಲ್ಲಿ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರ ಪಾತ್ರ ಬಿಟ್ರೆ ಮತ್ತೆ ಯಾವ ನಿರ್ಮಾಪಕನು ನನ್ನ ಬೆಳೆಸಿಲ್ಲ, ಕಲಾವಿದರನ್ನು ಬಗ್ಗೆ ಮಾತಾನಾಡುವಾಗ ಯೋಚ್ನೆ ಮಾಡಿ ಮಾತಾಡಬೇಕು ಅಂತ ಹೇಳಿದ್ರು. ಇದೀಗ ಈ ವಿಚಾರ ಮತ್ತೆ ಮೊನ್ನೆಲೆಗೆ ಬಂದಿದ್ದು ಖಾಸಗಿ ಸುದ್ದಿ ವಾಹಿನಿಯ ಸಂದರ್ಶನ ಒಂದರಲ್ಲಿ ನಟ ದರ್ಶನ್ ಬಗ್ಗೆ ನಿರ್ಮಾಪಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ಗೌಡ ಮಾತನಾಡಿದ್ದಾರೆ.

ದರ್ಶನ್ ಸರ್ 50ವರ್ಷದ 500 ಸಿನಿಮಾ ಮಾಡ್ಲಿ!

ಇದೀಗ ಇದೆ ವಿಚಾರವಾಗಿ ಬೊಮ್ಮನಹಳ್ಳಿ ವಿಧಾನಸಭ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಅವ್ರ ಬಗ್ಗೆ ಮಾತನಾಡಿದ್ದು, ನಾನು ದರ್ಶನ್ ಸರ್ ಫ್ಯಾನ್ ಆಗಿಯೇ ಸಿನಿಮಾ ಮಾಡಿದ್ದು, ನಿರ್ಮಾಪಕನ್ನಾಗಿ ಅಲ್ಲಾ, ದರ್ಶನ್ ಅವ್ರು ಇನ್ನು 50 ವರ್ಷ ಚಿತ್ರರಂಗವನ್ನ ಆಳಲಿ ಇನ್ನು 500 ಸಿನಿಮಾಗಳನ್ನ ಮಾಡ್ಲಿ ಅಂತ ಬಯಸುತ್ತೇನೆ ಅಂತ ಇದೀಗ ದರ್ಶನ್ ಅವ್ರ ಬಗ್ಗೆ ತುಂಬಾ ಸಾಫ್ಟ್ ಆಗಿ ಮಾತನಾಡುತ್ತಿದ್ರು. ಯಾಕಂದ್ರೆ ಈಗಾಗ್ಲೇ ಡಿ.ಬಾಸ್ ಫ್ಯಾನ್ಸ್ ಸಿಕ್ಕಾಪಟ್ಟೆ ಗರಂ ಆಗಿದ್ದು ಉಮಾಪತಿ ಅವ್ರಿಗೆ ಕಮೆಂಟ್ಸ್ ಮೂಲಕಾನೇ ಕ್ಲಾಸ್ ತೆಗೆದುಕೊಂಡಿದ್ದು ಉಂಟು ಎಲ್ಲದಕ್ಕಿಂತ ಹೆಚ್ಚಾಗಿ ನಟ ದರ್ಶನ್ ಬಹಿರಂಗವಾಗಿಯೇ ಯಾವೋನು ನನ್ನ ಬೆಳಸಿಲ್ಲ, ಬೆಳೆಸಿದ್ದೀನಿ ಅಂತ ಹೇಳ್ಕೊಳೋ ಯೋಗ್ಯತೆನೂ ಅವ್ರಿಗಿಲ್ಲ ಅಂತ ನೇರವಾಗಿಯೇ ಉಮಾಪತಿ ಅವ್ರಿಗೆ ಟಾಂಗ್ ಕೊಟ್ಟಿದ್ರು.. ಸೊ ಇದೆಲ್ಲವನ್ನ ನೋಡುದ್ರೆ ಉಮಾಪತಿ ಅವ್ರು ಬೇರೆ ಆಪ್ಷನ್ ಇಲ್ಲದೆ ಈ ರೀತಿಯಾದ ಹೇಳಿಕೆಯನ್ನ ಕೊಟ್ಟಿರಬಹುದು ಅಂತ ಕೂಡ ಇದೀಗ ಚರ್ಚೆಗಳಾಗ್ತಿವೆ. ಯಾಕಂದ್ರೆ ಅಷ್ಟು ಸುಲಭವಾಗಿ ನಿರ್ಮಾಪಕ ಉಮಾಪತಿ ಈ ರೀತಿಯಾಗಿ ಮಾತನಾಡಲು ಹೇಗೆ ಸಾಧ್ಯ. ನಾನು ಕೂಡ ದರ್ಶನ್ ಫ್ಯಾನ್ ಅಂತ ಹೇಳಿ, ಇನ್ನು 500 ಸಿನಿಮಾ ಮಾಡ್ಲಿ ಅಂತ ಹರಸಿದ್ದಾರೆ ಅಂದ್ರೆ ಏನೋ ಇದೆ ಅನ್ನೋದು ಒಂದಷ್ಟು ಜನರ ಮಾತು.

ಇದನ್ನೂ ಓದಿ: ನಿರ್ದೇಶಕ ಉಮಾಪತಿಗೆ ಪಬ್ಲಿಕ್ ಲ್ಲೆ ಕ್ಲಾರಿಟಿ ಕೊಟ್ಟ ಡಿ.ಬಾಸ್! ಯಾವ ನಿರ್ಮಾಪಕರು ನನ್ನ ಬೆಳಸಿಲ್ಲ

ಉಮಾಪತಿ ಅವರು ಸಂದರ್ಶನದಲ್ಲಿ ಹೇಳಿದ್ದೇನು?

ಉಮಾಪತಿ ಅವ್ರು ಖಾಸಗಿ ವಾಹಿನಿಯವರಿಗೆ ನೀಡಿದ ಸಂದರ್ಶನದಲ್ಲಿ ಮೊದಲಿಗೆ ಸತೀಶ್ ರೆಡ್ಡಿ ವಿರುದ್ಧವಾಗಿಯೇ ಮಾತನಾಡುತ್ತಾರೆ. ಹೆಣ್ಣು ಮಕ್ಕಳ ಮೇಲೆ ಕೈ ಮಾಡುದ್ರು ಪರ್ವಾಗಿಲ್ಲ, ಪ್ರಚಾರ ಮಾಡೋಕೆ ಬಿಡಲ್ಲ ಅಂದ್ರು ಅದನ್ನು ನಾವು ಸಹಿಸುಕೊಳ್ಳುತ್ತೇವೆ, ರೌಡಿ ಶೀಟರ್ ಒಬ್ಬ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡ್ದ ಪರ್ವಾಗಿಲ್ಲ ನೀವು ಬೆಂಕಿ ಹತ್ತಿಸ್ತ ಹೋಗಿ ನಾವು ನೀರು ಹಾಕೊಂಡು ಆರಿಸಿಕೊಂಡು ಬರ್ತೀವಿ. ನಾವು ಅಭಿವೃದ್ಧಿ ಮಾಡೋಕೆ ಬಂದಿರೋದು ದ್ವೇಷ ಸಾಧಿಸೋಕಲ್ಲ. ನಮಗೆ ಅದರ ಅವಶ್ಯಕತೆನು ಇಲ್ಲ ಅಂತ ಹೇಳಿ ದರ್ಶನ್ ಅವ್ರ ವಿಷಯದ ಬಗ್ಗೆ ಮಾತು ಶುರು ಮಾಡಿ 50ವರ್ಷ 500ಸಿನಿಮಾ ಮಾಡ್ಲಿ ಅಂತ ಬಯಸ್ತೀದಿನಿ ಅಂತ ಹೇಳ್ತಾರೆ. ಅಲ್ದೇ ಸತೀಶ್ ರೆಡ್ಡಿ ಇನ್ನು 500ವರ್ಷ ಅವರೊಬ್ಬರೇ ಚೆನ್ನಾಗಿರಲಿ ಅಂತ ಹೇಳಿ, ತಮ್ಮ ಹೆಸರಿನಾ ಮತ್ತೊಬ್ಬ ಅಭ್ಯರ್ಥಿ ಚುನಾವಣಾ ಕಾಣದಲ್ಲಿರೋದ್ರ ಬಗ್ಗೆ ಮಾತನಾಡಿ ಎಷ್ಟೇ ಎಂ. ಜಿ. ರೋಡ್ ಗಳಿದ್ರು ಬೆಂಗಳೂರು ಎಂ. ಜಿ. ರೋಡ್ ಮುಂದೆ ಅವೆಲ್ಲಾ ಅಷ್ಟೆ ಬೇಡ ಬಿಡಿ ಜಾಸ್ತಿ ಮಾತಡುದ್ರೆ ತಪ್ಪಾಗುತ್ತೆ ಅಂತ ಹೇಳಿ ಸುಮ್ಮನಾಗುತ್ತಾರೆ. ಒಟ್ಟಿನಲ್ಲಿ ನಿರ್ಮಾಪಕ ಉಮಾಪತಿ ವ್ಯಂಗ್ಯವಾಗಿ ಈ ಮಾತುಗಳನ್ನ ಹೇಳಿದ್ದರೋ ಅಥವಾ ನಿಜಕ್ಕೂ ಅವ್ರಿಗೆ ದರ್ಶನ್ ಅವ್ರ ಮೇಲೆ ಅಷ್ಟು ಅಭಿಮಾನ ಇದೆಯೋ ಗೊತ್ತಿಲ್ಲ. ಆದರೂ 50ವರ್ಷ ದರ್ಶನ್ ಅವ್ರು ಇಂಡಸ್ಟ್ರಿಯಲ್ಲಿ ಇರೋದಕ್ಕೂ ಆಗಲ್ಲ 500ಸಿನಿಮಾಗಳನ್ನ ಮಾಡೋಕು ಆಗಲ್ಲ, ಸತೀಶ್ ರೆಡ್ಡಿ ಅವ್ರು 500ವರ್ಷ ಬದುಕೋಕು ಆಗಲ್ಲ..

ಒಟ್ಟಿನಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕ್ಷೇತ್ರ ಅಂದ್ರೆ ತಪ್ಪಾಗಲ್ಲ. ಸತೀಶ್ ರೆಡ್ಡಿಯವರ ಭದ್ರ ಕೋಟೆ ನಿಜಕ್ಕೂ ಉಳಿಯುತ್ತದೆ ಅಥವಾ ಕಾಂಗ್ರೆಸ್ ಅಭ್ಯರ್ಥಿ ಉಮಾಪತಿ ಶ್ರೀನಿವಾಸ್ ರೆಡ್ಡಿ ಅವ್ರ ಕೈ ಸೇರುತ್ತದೆ ಕಾದು ನೋಡಬೇಕಿದೆ. ಅಷ್ಟರಲ್ಲಿ ಯಾರು ಎಷ್ಟೇ ಮಾತನಾಡಿದ್ರು ಚುನಾವಣಾ ಫಲಿತಾಂಶದ ನಂತರ ಎಲ್ಲವು ಮೂಲೆ ಸೇರುತ್ತೆ ಅನ್ನೋದು ನೆನಪಿರಬೇಕಷ್ಟೆ. ಒಟ್ಟಿನಲ್ಲಿ ಉಮಾಪತಿ ಮಾತಿನಲ್ಲಿ ಒಳ ಅರ್ಥವಿದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗ್ತಿದ್ರು. ಉಮಾಪತಿ ಅವ್ರು ಎಲ್ಲಿಯೂ ಯಾವುದನ್ನು ಬಿಟ್ಟುಕೊಡದೆ ಉತ್ಸಾಹಿ ಕಾರ್ಯಕರ್ತರ ಪಡೆಯನ್ನ ಕಟ್ಟಿದ್ದಾರೆ. ಅದು ಎಷ್ಟರ ಮಟ್ಟಿಗೆ ಸಕ್ಷಸ್ ಕಾಣುತ್ತೋ ಗೊತ್ತಿಲ್ಲ, ಸತೀಶ್ ರೆಡ್ಡಿ ಪರ ದರ್ಶನ್ ಅವ್ರ ಪ್ರಚಾರ ಉಮಾಪತಿಗೆ ಸಂಪೂರ್ಣ ಹೊಡೆತ ಬೀಳುತ್ತೆ ಅಂತಲೂ ಹೇಳೋದಿಕ್ಕೆ ಆಗೋದಿಲ್ಲ. ಆದ್ರೂ ಫಲಿತಾಂಶದ ದಿನವೇ ಇದೆಲ್ಲದಕ್ಕೂ ತೆರೆ ಬೀಳಲಿದೆ.

ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗಳ ಮದುವೆಗೆ ನಟ ದರ್ಶನ್ ಬರಲಿಲ್ವಾ? ನಟ ರಕ್ಷಕ್ ಆಮಂತ್ರಣ ಕೊಡದಿರಲು ಕಾರಣ ಏನ್ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram