Vaisshnavi: ಕಿರುತರೆಯಲ್ಲಿ ಮತ್ತೆ ಮಿಂಚಲು ರೆಡಿಯಾದ ವೈಷ್ಣವಿ ಗೌಡ..ಶೂಟಿಂಗ್ ಸಮಯದ ಫೋಟೋಗಳನ್ನ ಹಂಚಿಕೊಂಡು ಖುಷಿ ಪಟ್ಟ ನಟಿ

Vaisshnavi gowda: ಕನ್ನಡ ಕಿರುತರೆ ಲೋಕದ ಡಿಂಪಲ್ ಚೆಲುವೆ, ಗುಳಿಕೆನ್ನೆ ಬೆಡಗಿ ವೈಷ್ಣವಿ ಗೌಡ ಮತ್ತೆ ಧಾರಾವಾಹಿ ಲೋಕಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಅಗ್ನಿಶಾಕ್ಷಿ ಸೀರಿಯಲ್ ಬಳಿಕ ಯಾವುದೇ ಧಾರಾವಾಹಿ ಗಳಲ್ಲಿ ನಟಿಸದ ವೈಷ್ಣವಿ ಗೌಡ ಇದೀಗ ಮತ್ತೊಂದು ಹೊಸ ಧಾರಾವಾಹಿ ಯೊಂದಿಗೆ ಕಿರುತರೆ ಪ್ರೇಕ್ಷಕರನ್ನ ರಂಜಿಸಲು ರೆಡಿ ಆಗಿದ್ದಾರೆ. ಅಗ್ನಿಸಾಕ್ಷಿ ನಂತರ ಬಿಗ್ ಬಾಸ್ ಗೆ ಬಂದು ಸಾಕಷ್ಟು ಮನೋರಂಜನೆ ನೋಡಿದ ವೈಷ್ಣವಿ ಸಾಕಷ್ಟು ಅಭಿಮಾನಿಗಳ ಹಾಟ್ ಫೇವರೇಟ್ ಕೂಡ ಹೌದು. ಧಾರಾವಾಹಿಯೊಂದರ ನಾಯಕಿಯಾಗಿ ಅಮ್ಮನ ಪಾತ್ರ ನಿಭಾಯಿಸಲು ಬರುತ್ತಿದ್ದಾರೆ. ಈ ಕುರಿತು ಅವ್ರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಶೇರ್ ಮಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now

ಹೌದು ಕನ್ನಡ ಕಿರುತೆರೆ ಯಲ್ಲಿ ಹಲವಾರು ನಟಿಯರು ಸಿನಿಮಾ ನಟಿಯರಿಗಿಂತಲೂ ಹೆಚ್ಚಾಗಿ ಫೇಮಸ್ ಆಗಿರುತ್ತಾರೆ. ಅದಕ್ಕೆ ಕಾರಣ ಅವ್ರ ಕ್ಯೂಟ್ ಲುಕ್ ಮತ್ತೆ ಅವ್ರ ಅಭಿನಯ ಅಭಿಮಾನಿಗಳಿಗೆ ಸಾಕಷ್ಟು ಮೋಡಿ ಮಾಡಿರುತ್ತದೆ. ಅಂತಹ ಕಲಾವಿದೆಯರಲ್ಲಿ ನಟಿ ವೈಷ್ಣವಿ ಗೌಡ ಕೂಡ ಒಬ್ಬರು. ಸೋಶಿಯಲ್ ಮೀಡಿಯಾ ಸೇರಿದಂತೆ ನಿಜ ಜೀವನ ದಲ್ಲಿ ಕೂಡ ಯಾವುದೇ ಸ್ಟಾರ್ ನಟಿಗೂ ಕಡಿಮೆ ಇಲ್ಲದಂತೆ ವೈಷ್ಣವಿ ಗೌಡ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನ ಸಂಪಾದನೆ ಮಾಡಿದ್ದಾರೆ. ಇನ್ನು ಕನ್ನಡ ಕಿರುತರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಗೆ ಕೂಡ ವೈಷ್ಣವಿ ಗೌಡ ಎಂಟ್ರಿ ಕೊಟ್ಟು ಅಲ್ಲಿಂದಲೂ ಸಕತ್ ಫೇಮಸ್ ಆದ್ರೂ. ಅದಾದ ಬಳಿಕ ಅಂದ್ರೆ ಬಿಗ್ ಬಾಸ್ ನಿಂದ ಹೊರಬಂದ ಬಳಿಕ ನಟಿ ವೈಷ್ಣವಿ ಗೌಡ ಅವರ ಮದುವೆ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಯಾಕಂದ್ರೆ ಪ್ರತಿ ಬಾರಿಯ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ವೈಷ್ಣವಿ ಗೌಡ ಅವರ ಬಳಿ ಕೇಳಿದಾಗಲೆಲ್ಲ, ಅವ್ರು ಏನು ಉತ್ತರ ಕೊಡುತ್ತಿರಲಿಲ್ಲ.
ಆದ್ರೆ ಇದಕ್ಕಿಂದ್ದ ಆಗೇ ವೈಷ್ಣವಿ ಗೌಡ ಅವರು ಮದುವೆ ಆಗಲು ಸಿದ್ದರಾಗಿದ್ದಂತಹ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ವಿದ್ಯಾಭರಣ ಎನ್ನುವವರ ಜೊತೆಗೆ ನಿಶ್ಚಿತಾರ್ಥವಾಗಿದೆ ವೈಷ್ಣವಿ ಮದುವೆ ತಯಾರಿಯಲ್ಲಿದ್ದಾರೆ ಅಂತೆಲ್ಲ ಹೇಳಲಾಗಿತ್ತು ಆದ್ರೆ ಇದ್ದಕಿದ್ದ ಹಾಗೆ ಆ ಮದುವೆ ಕ್ಯಾನ್ಸಲ್ ಆಗಿ ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಆದ್ರೆ ಇದೆಲ್ಲಾದರಿಂದ ವೈಷ್ಣವಿ ಹೊರಬಂದು ಮತ್ತೆ ಕಿರುತರೆ ಲೋಕದಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ತನ್ನನ್ನು ಕಾಪಡಿದವನಿಗೆ ಈ ಪಕ್ಷಿ ತೋರಿದ್ದು ಎಂತಹ ಪ್ರೀತಿ ಗೊತ್ತಾ?

ಗಗನ್ ಚಿನ್ನಪ್ಪಗೆ ಜೋಡಿಯಾಗಿ ಕಂಬ್ಯಾಕ್ ಮಾಡಿದ ಸನ್ನಿಧಿ.

ಜೀ ಕನ್ನಡ ವಾಹಿನಿ ಯಲ್ಲಿ ಸೀತಾರಾಮ ಎನ್ನುವ ವಿನೂತನ ಹೊಸ ಧಾರಾವಾಹಿ ಬರ್ತಾ ಇದೆ. ಅದಕ್ಕೆ ನಾಯಕನಾಗಿ ಅಂದ್ರೆ ರಾಮನ ಪಾತ್ರವನ್ನು ನಿಭಾಯಿಸಲು ಮಂಗಳಗೌರಿ ಮದುವೆ ಧಾರಾವಾಹಿ ಖ್ಯಾತಿಯ ಗಗನ್ ಚಿನ್ನಪ್ಪ ರೆಡಿಯಾಗಿದ್ರೆ, ಇತ್ತ ನಾಯಕಿಯಾಗಿ ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಸಜ್ಜಾಗಿದ್ದಾರೆ. ಈ ಧಾರಾವಾಹಿ ಯಲ್ಲಿ ಸೀತೆಯ ಪಾತ್ರವನ್ನು ವೈಷ್ಣವಿ ನಿಭಾಯಿಸಲಿದ್ದಾರೆ. ಇದೇ ಮೊದಲ ಬಾರಿಗೆ ಗಗನ್ ಹಾಗೂ ವೈಷ್ಣವಿ ಇಬ್ಬರು ಕೂಡ ಒಟ್ಟಿಗೆ ಜೀ ಕನ್ನಡ ವಾಹಿನಿ ಜೊತೆ ಕೆಲಸ ಮಾಡ್ತಾ ಇದ್ದು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬೇರೆ ಬೇರೆ ಧಾರಾವಾಹಿಗಳಲ್ಲಿ ನಾಯಕ ಹಾಗೂ ನಾಯಕಿಯಾಗಿ ನಟಿಸಿ ಕಿರುತಾರೆಯಲ್ಲಿ ಬಾರಿ ನಿರೀಕ್ಷೆ ಮೂಡಿಸಿದ್ರು. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಒಂದೇ ಸೀರಿಯಲ್ ನಲ್ಲಿ ಒಟ್ಟಿಗೆ ನಟಿಸಲು ಅವಕಾಶ ಸಿಕ್ಕಿರೋದ್ರಿಂದ ಇಬ್ಬರೂ ಬಹಳಷ್ಟು ಖುಷಿಯಾಲ್ಲಿದ್ದಾರೆ. ಇನ್ನು ತಮ್ಮ ಪಾತ್ರ ಹಾಗೂ ಹೊಸ ಧಾರವಾಹಿಯ ಅಪಡೇಟ್ಸ್ ಗಳನ್ನ ಆಗಾಗ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೈಷ್ಣವಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಶೂಟಿಂಗ್ ನಲ್ಲಿ ತಾವು ಕಳೆದ ಸುಂದರ ಕ್ಷಣಗಳ ಫೋಟೋಗಳನ್ನ ಹಂಚಿಕೊಂಡು ಹರ್ಷ ವ್ಯಕ್ತಪಡಿಸುತ್ತಿರುತ್ತಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ನಟಿ ವೈಷ್ಣವಿ ಅವ್ರು, ನಾನು ಸೀತಾ ಎನ್ನುವ ಪಾತ್ರ ನಿರ್ವಹಿಸುತ್ತಿದ್ದೇನೆ. ಮೊದಲ ಬಾರಿಗೆ ತಾಯಿ ಪಾತ್ರ ಮಾಡುತ್ತಿದ್ದೇನೆ ಸ್ವಲ್ಪ ಭಯ ಇದೆ ಅಂತ ಹೇಳಿಕೊಂಡಿರುವ ವೈಷ್ಣವಿ ಅವರ ಮಗಳ ಪಾತ್ರದಲ್ಲಿ ರಿತು ಎಂಬ ಪುಟ್ಟ ಪೋರಿ ಬಣ್ಣ ಹಚ್ಚಿದ್ದಾಳೆ. ಇನ್ನು ಡ್ರಾಮಾ ಜೂನಿಯರ್ಸ್ ನಲ್ಲಿ ಇದ್ದ ಬೇಬಿ ಡಾಲ್ ರಿತು ಸಿಂಗ್ ಇದರಲ್ಲಿ ಅಭಿನಯಿಸಲಿದ್ದಾರೆ. ಈ ಕುರಿತಂತೆ ವೈಷ್ಣವಿ ಗೌಡ ಅವರು Instagram ನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವೈಷ್ಣವಿ, ಗಗನ್ ಮತ್ತು ಪುಟಣಿ ರಿತು ಬೀಚ್ ನಲ್ಲಿ ಕುಳಿತ್ತಿರುವ ಫೋಟೋಗಳಿದ್ದು, ಸೀತಾ ರಾಮ Coming Soon ಎಂದು ಬರೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಮದುವೆ ಮುರಿದು ಬಿದ್ದ ಬಳಿಕ ಸುದ್ದಿ ಯಲ್ಲಿ ಅಷ್ಟಾಗಿರದ ವೈಷ್ಣವಿ ಗೌಡ ಇದೀಗ ಮತ್ತೆ ಸೌಂಡ್ ಮಾಡ್ತಿರೋದು ಸೀತಾ ರಾಮ ಧಾರವಾಹಿ ಮೂಲಕ. ಹೀಗಾಗಲೆ ವಾಹಿನಿನಾಯವ್ರು ಕೂಡ ಪ್ರೊಮೊಗಳನ್ನ ಬಿಡುಗಡೆ ಮಾಡಿದ್ದು. ಧಾರವಾಹಿ ಯಾವ ರೀತಿ ಇರಲಿದೆ ಅನ್ನೋ ಕುತೂಹಲದಲ್ಲಿದ್ದಾರೆ. ಅಲ್ಲದೆ ಹೊಸ ಪುಟ್ಟ ಪ್ರತಿಭೆ ರಿತು ಪುಟಾಣಿಯ ಮುದ್ದು ಮಾತು ಗಳನ್ನ ಕೇಳಲು ಕಿರುತಾರೆ ವೀಕ್ಷಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು ಗಗನ್ ಚಿನ್ನಪ್ಪ ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದು, ವೈಷ್ಣವಿ ಅವ್ರ ಜೊತೆ ಜೀ ಕುಟುಂಬದಲ್ಲಿ ಇರೋದು ನನಗೆ ಖುಷಿ ತಂದಿದೆ ಅಂತ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ವೈಷ್ಣವಿ ಒಂದಷ್ಟು ನೋವುಗಳ ಮಧ್ಯೆ ಇದೀಗ ಮತ್ತೆ ಕಿರುತರೆಗೆ ಕಾಲಿಟ್ಟಿರೋದು ಅವ್ರ ಅಭಿಮಾನಿಗಳ ಸಂತೋಷವನ್ನ ದುಪ್ಪಟ್ಟು ಮಾಡಿರೋದಂತೂ ಸುಳ್ಳಲ್ಲ.

ಇದನ್ನೂ ಓದಿ: ಕ್ರಾಂತಿ ಸಿನಿಮಾ ಪ್ರಚಾರ ಮಾಡಿ ಕೆಲಸ ಕಳೆದುಕೊಂಡಿದ್ದ ದರ್ಶನ್ ಅಭಿಮಾನಿ! ಇದೀಗ ವಿದೇಶದಲ್ಲಿ ಕಾಟೇರ ಪ್ರಚಾರ