ನೋವಿನಿಂದ ಹೊರಬಂದ ವರ್ಷ ಕಾವೇರಿ; ಅಭಿಮಾನಿಗಳು ಕೇಳಿದ ಪ್ರಶ್ನೆ ವರ್ಷ ಕಾವೇರಿ ಕೊಟ್ಟ ಉತ್ತರವೇನು?

ಸ್ನೇಹಿತರೆ ಟಿಕ್‌ಟಾಕ್ ಮೂಲಕ ಪರಿಚಯವಾಗಿ ಪ್ರೀತಿಯಲ್ಲಿ ಬಿದ್ದು ರೀಲ್ಸ್ ಮಾಡಲು ಆರಂಭಿಸಿದ ಜೋಡಿ ವರುಣ್ ಆರಾಧ್ಯ ಮತ್ತು ವರ್ಷಾ ಕಾವೇರಿ(Varsha Kaveri) ನಡುವಿನ ಪ್ರೀತಿ ವಿಚಾರ, ಬ್ರೇಕ್ ಅಪ್ ವಿಚಾರ ಜಗತ್ ಜಾಹೀರು ಆಗಿರೋದು ಪ್ರತಿಯೊಬ್ಬರಿಗೂ ಗೊತ್ತಿರೋ ವಿಚಾರ. ಅದರಲ್ಲೂ ಮೂರ್ನಾಲ್ಕು ವಾರಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ ಹಾಗೂ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ಗಮನಿಸಿ, ಪದೇ ಪದೇ ಪ್ರಶ್ನೆ ಕೇಳುತ್ತಿದ್ದರು ಎನ್ನುವ ಕಾರಣ ವರ್ಷಾ ಕಾವೇರಿ ಬ್ರೇಕಪ್ ಬಗ್ಗೆ ಸ್ಪಷ್ಟನೆ ಕೊಟ್ಟರು. ಇದರ ಬಗ್ಗೆ ವರುಣ್ ಆರಾಧ್ಯ ಏನೂ ಹೇಳಿರಲಿಲ್ಲ. ಯಾವಾಗ ವರ್ಷಾ ಪರ ಸೋಷಿಯಲ್ ಮೀಡಿಯಾದಲ್ಲಿ ಜನರು ಧ್ವನಿ ಎತ್ತಲು ಶುರು ಮಾಡಿದರು ಆಗ ವರುಣ್ ಕೂಡ ಪೋಸ್ಟ್ ಹಾಕಿ ಅವ್ರು ಕೂಡ ಸ್ಪಷ್ಟನೆ ಕೊಟ್ರು. ಆದ್ರೂ .ಒಂದು ಹೆಣ್ಣಿಗೆ ಮೋಸ ಮಾಡಬಾರದು ಇದು ಗಂಡು ಜಾತಿಗೆ ಅವಮಾನ, ವರ್ಷಾ ಕಾವೇರಿ ನಿನಗೆ ಕೊಡಿಸಿರುವ ದುಬಾರಿ ಗಿಫ್ಟ್‌ಗಳನ್ನು ವಾಪಸ್ ಕೊಡಬೇಕು, ವರ್ಷಾ ಖರ್ಚು ಮಾಡಿರುವ ಹಣ ಕೊಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರು.

WhatsApp Group Join Now
Telegram Group Join Now

ಅದ್ರೆ ಸಮಸ್ಯೆ ಬಗ್ಗೆ ಅರಿತ ವರ್ಷ ಎಲ್ಲರಿಗೂ ಆಗಿರೋದನ್ನ ಬಿಡಿಸಿ ಹೇಳಲು ಪ್ರಯತ್ನ ಮಾಡಿ ಅವ್ರು ನಾನು ಕೊಟ್ಟಿರೋದನೆಲ್ಲ ವಾಪಸ್ ಕೊಟ್ಟಿದ್ದಾರೆ ಅಂತ ಹೇಳಿದ್ರು, ಆದ್ರೂ ನೆಟ್ಟಿಗರು ಅವ್ರ ಅಭಿಮಾನಿಗಳು ಪದೇ ಪದೇ ಕೆಲವೊಂದು ಕಮೆಂಟ್ಸ್ ಮಾಡಿತ್ತಲೇ ಬಂದಿದ್ರು. ಹೀಗಾಗಿ ವರ್ಷ ಕಾವೇರಿ ನೀವು ಪ್ರಶ್ನೆಗಳನ್ನ ಕೇಳಿ ನಿಮ್ಮೆಲ್ಲ ಪ್ರಶ್ನೆಗಳಿಗೆ ಉತ್ತರ ಕೊಡ್ತೀನಿ ಅಂತ ಹೇಳಿದ್ರು ಹೀಗಾಗಿ ವರ್ಷ ಅವ್ರಿಗೆ ಸಾಕಷ್ಟು ಪ್ರಶ್ನೆಗಳು ಬಂದಿತ್ತು ಹೀಗಾಗಿ ಅದರಲ್ಲಿ ಕೆಲವೊಂದು ಪ್ರಶ್ನೆಗಳು ಒಂದೇ ಥರ ಇದಿದ್ರಿಂದ ಹಾಗೂ ಅಭಿಮಾನಿಗಳು ನೆಟ್ಟಿಗರು ಕೇಳಿರೋ ಪ್ರಶ್ನೆಗಳಲ್ಲಿ ಕೆಲವೊಂದನ್ನ ಆಯ್ಕೆ ಮಾಡಿ ಅದೆಲ್ಲದಕ್ಕೂ ಉತ್ತರಿಸಿದ್ದು ತಮ್ಮ ಯೌಟ್ಯೂಬ್ ನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಹೌದು ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತು ಎಂದು. ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾನು ಮತ್ತು ವರುಣ್​ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ನಿಮಗೆ ಗೊತ್ತಿಲ್ಲದ ಸಂಗತಿ ಏನೆಂದರೆ ವರುಣ್​ ನನ್ನನ್ನು ಬಿಟ್ಟು ಮತ್ತೊಂದು ಹುಡುಗಿಯನ್ನು ಲವ್​ ಮಾಡುತ್ತಿದ್ದಾರೆ. ನಾನಿಲ್ಲಿ ಆ ಹುಡುಗಿಯ ಹೆಸರನ್ನು ಹೇಳಿ ಆಕೆಯ ಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ. ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ಅವನಿಗೆ ಎಷ್ಟು ಬಾರಿ ಹೇಳಿದರೂ ಆ ಹುಡುಗಿಯನ್ನು ಬಿಡಲು ತಯಾರಿಲ್ಲ. ನಾನು ನಿನ್ನನ್ನು ಪ್ರೀತಿಸಲು ಬಯಸುವುದಿಲ್ಲ, ನಾನು ಆ ಹುಡುಗಿಯೊಂದಿಗೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಆತ ಹೇಳಿದಾಗ ಅದು ನನಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಮತ್ತು ವರುಣ್‌ನ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ವರ್ಷ ಅವ್ರ ಮುಂದಿನ ಜೀವನ ಮುಂದಿನ ನಡೆ ಏನ್ ಗೊತ್ತಾ?

ನಮ್ಮನ್ನು ಪ್ರೀತಿಸುವವರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಅನಿಸುತ್ತದೆ. ಹೀಗಾಗಿ ನಾನಿಂದು ನಿಮಗೆ ತಿಳಿಸುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೇಮ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯೊಂದಿಗೆ ಸಂತೋಷವಾಗಿರಲಿ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದೆ. ನಾನು ಅವರಿಗಾಗಿ ನನ್ನ ಜೀವನವನ್ನು ನಡೆಸಬೇಕಿದೆ. ಹೀಗಾಗಿ ನನಗೆ ಅನಿಸಿದ್ದನ್ನು ನಿಮಗೆ ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನವೇ ನನ್ನ ಮಾರ್ಗವಾಗಿದ್ದು, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಮತ್ತು ಇನ್ನು ಮುಂದೆಯೂ ನನ್ನನ್ನು ಬೆಂಬಲಿಸಿ, ಧನ್ಯವಾದಗಳು ಎಂದು ವರ್ಷಾ ಸುದೀರ್ಘವಾಗಿ ಬರೆದುಕೊಂಡಿದ್ದರು. ಆದ್ರೂ ಈ ಮಧ್ಯೆಯು ಒಂದಷ್ಟು ಕೆಟ್ಟ ಕಮೆಂಟ್ಸ್? ಪ್ರಶ್ನೆಗಳು ವರ್ಷ ಅವ್ರಿಗೆ ಬರುತ್ತಲೆ ಇತ್ತು..

ಹೀಗಾಗಿ ವರ್ಷ ಕಾವೇರಿ(Varsha Kaveri) ಎಲ್ಲರಿಗೂ ನಿಮಗಿರುವ ಸಂದೇಹಗಳು ಪ್ರಶ್ನೆಗಳು ಏನೇ ಇದ್ರೂ ನನ್ನನ್ನ ಕೇಳಿ ಎಲ್ಲದಕ್ಕೂ ನಾನು ಉತ್ತರ ಕೊಡ್ತೀನಿ ಅಂತ ಹೇಳಿದ್ರು ಅದರಂತೆ ಕೆಲವೊಂದಷ್ಟು ಜನ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ರು ಅದಕ್ಕೆ ವರ್ಷ ಕಾವೇರಿ(Varsha Kaveri) ವಿಡಿಯೋ ಮಾಡಿ ಉತ್ತರ ಕೊಟ್ಟಿದ್ದಾರೆ. ಮತ್ತೆ ನೀವು ಒಂದಾಗ್ತೀರಾ ಅಂತ ಸಾಕಷ್ಟು ಜನ ಕೇಳಿದ್ದಾರೆ ಅದ್ರೆ ವರ್ಷ ಸಾಧ್ಯ ಇಲ್ಲ, ಹಳ್ಳ ಅಂತ ಗೊತ್ತಿದ್ದೂ ಪದೇ ಪದೇ ಬೀಳೋಕಾಗುತ್ತಾ ಸಾಧ್ಯ ಇಲ್ಲ, ಅವ್ರು ವಾಪಾಸ್ ಬರೋದು ಇಲ್ಲ ಅಂದಿದಾರೆ. ಇನ್ನು ಕೆಲವರು ನಿಮ್ಮಿಬ್ಬರ ನಡುವೆ ಬಂದ ಹುಡುಗಿ ಬಗ್ಗೆ ಹೇಳಿ ಅಂದಿದ್ದಕ್ಕೆ ಅದನ್ನು ಕೂಡ ಹೇಳಲ್ಲ ಆ ಹುಡುಗಿ ಜೀವನ ಹಾಳು ಮಾಡೋದಿಲ್ಲ ಎಂದಿದ್ದಾರೆ.

ಬ್ರೇಕ್ ಅಪ್ ಪೋಸ್ಟ್ ಯಾಕೆ ಡಿಲೀಟ್ ಮಾಡುದ್ರಿ ಇದು ಪ್ರಾಂಕ್ ಅಲ್ವಾ ಅಂತ ಕೇಳಿದ್ದಾರೆ ಅದಕ್ಕೆ ವರ್ಷ ಖಂಡಿತ ಈ ಸಲ ನಾನು ಪ್ರಾಂಕ್ ಮಾಡ್ತಿಲ್ಲ, ನಿಜವಾಗಲೂ ನಾವು ದೂರ ಆಗಿದ್ದಿವಿ, ಪೋಸ್ಟ್ ಇಂದ ತುಂಬ ಕೆಟ್ಟ ಕಮೆಂಟ್ಸ್ ಬರುತ್ತಿತ್ತು ಅದ್ರಿಂದ ಅವ್ರ ಮನೆ ಹೆಣ್ಣು ಮಕ್ಳುಗು ತೊಂದ್ರೆ ಆಗ್ತಿತ್ತು ನನಂಗೆ ಪಾಸಿಟಿವ್ ವೈಬ್ಸ್ ಇರಬೇಕು ನೆಗಟಿವ್ ಬರಬಾರದು ಅಂತ ಡಿಲೀಟ್ ಮಾಡ್ದೆ ಎಂದಿದ್ದಾರೆ. ಇನ್ನು ಬಿಗ್ ಬಾಸ್ ಗೆ ಬರೋದಕ್ಕೆ ಇವೆಲ್ಲ ಗಿಮಿಕ್ಸ್ ಅಂತ ತುಂಬಾ ಜನ ಹೇಳ್ತಿದ್ದೀರಾ ದಯವಿಟ್ಟು ಅತರ ಏನಿಲ್ಲ ಯಾರು ಅಂಗೆಲ್ಲಾ ತಿಳ್ಕೊಬೇಡಿ ಅದುಕ್ಕೋಸ್ಕರ ನನ್ನ ಜೀವನ ನಾನು ಯಾಕೆ ಹಾಳು ಮಾಡ್ಕೊಳ್ಳಿ ಖಂಡಿತ ಅತರ ಏನಿಲ್ಲ ಬಿಗ್ ಬಾಸ್ ಇಂದ ನನಿಗೆ ಯಾವುದೇ ಕಾಲ್ ಬಂದಿಲ್ಲ, ಬಂದ್ರೆ ಹೋಗ್ತೀನಿ ಅಂತಲೇ ಹೇಳಿದ್ದು ಇನ್ನೇನಿದ್ರೂ ತಾವು ತಮ್ಮ ಫ್ಯಾಮಿಲಿ, ಕೇವಲ ಸಂತೋಷದ ಕ್ಷಣಗಳು ಅಷ್ಟೇ, ಇನ್ನು 5ವರ್ಷ ಮದುವೆ ಆಗಲ್ಲ ಗೋಲ್ ರೀಚ್ ಆದ್ಮೇಲೆ ಮದುವೆ ಅದು ಕೂಡ ಅರೇಂಜ್ಡ್ ಮ್ಯಾರೇಜ್ ಆಗೋದು ಎಂದಿದ್ದಾರೆ.

ಇದನ್ನೂ ಓದಿ: ತಮಿಳು ನಟನಿಗೆ ಕ್ಷಮೆಯಾಚಿಸಿದ ಪ್ರಕಾಶ್ ರಾಜ್; ಕನ್ನಡಿಗರ ಪರವಾಗಿ ಕ್ಷಮೆ ಕೇಳುತ್ತೀನಿ ಅಂದ ಪ್ರಕಾಶ್ ರಾಜ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram