ಬಿಗ್ ಬಾಸ್ ಮನೆಗೆ ಮರಳಿ ಬಂದ್ರು ವರ್ತೂರ್ ಸಂತೋಷ್! ಸದಸ್ಯರಿಗೆ ಶಾಕ್ ಜೊತೆ ಖುಷಿ ಕೊಟ್ಟ ರೈತ ಸಂತೋಷ್

ಸ್ನೇಹಿತರೆ ಬಿಗ್ ಬಾಸ್ ಸ್ಪರ್ಧೆಯಾಗಿ ರೈತ ವರ್ತೂರು ಸಂತೋಷ್(Varthur Santhosh) ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಇನ್ನು ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರು. ಈ ಸಂಬಂಧ ಅರಣ್ಯ ಅಧಿಕಾರಿಗಳು ವರ್ತೂರು ಸಂತೋಷ್ ಅವರನ್ನು ವನ್ಯ ಜೀವಿ ಕಾಯ್ದೆ ಅಡಿ ಬಂಧಿಸಿದ್ರು. ಆ ಬಳಿಕ ಮನೆಯ ಹೊರಗೆ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಹೌದು ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 10 ರೋಚಕ ಎನಿಸುತ್ತಿದೆ. ಅದಕ್ಕೆ ಕಾರಣ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್. ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಬಂದು ಸ್ಪರ್ಧಿಯೊಬ್ಬರನ್ನು ಬಂಧಿಸಲಾಗಿತ್ತು. ಈಗ ಜಾಮೀನು ಪಡೆದು ಹೊರಬಂದಿರೋ ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಾರಾ? ಅನ್ನೋ ಪ್ರಶ್ನೆ ಎದ್ದಿತ್ತು. ಇದಕ್ಕೆ ನಿನ್ನೆ ಸಂಡೇ ವಿಥ್ ಸುದೀಪ’ ಕಾರ್ಯಕ್ರಮದಲ್ಲಿ ಕಿಚ್ಚ ಚಿಕ್ಕದೊಂದು ಸುಳಿವು ನೀಡಿದ್ದರು. ವರ್ತೂರು ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಾರಾ? ಇಲ್ವಾ? ಅನ್ನೋದು ಸದ್ಯ ಕಿರುತೆರೆ ವೀಕ್ಷಕರಲ್ಲಿ ಎದ್ದಿರೋ ಪ್ರಶ್ನೆ.

WhatsApp Group Join Now
Telegram Group Join Now

ಈ ಬಗ್ಗೆ ಬಿಗ್ ಬಾಸ್ ಕಡೆಯಿಂದ ಆಗಲಿ ವರ್ತೂರು ಸಂತೋಷ್ ಕಡೆಯಿಂದ ಆಗಿಲಿ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿರಲಿಲ್ಲ. ಇದೇ ಗೊಂದಲದಲ್ಲಿ ಇದ್ದ ವೀಕ್ಷಕರಿಗೆ ಕಿಚ್ಚ ಸುದೀಪ್ ಸಂಡೇ ವಿಥ್ ಸುದೀಪ ಕಾರ್ಯಕ್ರಮದಲ್ಲಿ ಚಿಕ್ಕದೊಂದು ಸುಳಿವು ನೀಡಿದ್ದರು. ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್ ಸೂಪರ್ ಸಂಡೇ ವಿಥ್ ಸುದೀಪ’ ಶೋನಲ್ಲಿ ವರ್ತೂರು ಸಂತೋಷ್ ಬಗ್ಗೆ ಮಾತಾಡಿದ್ದರು, ಶೋನ ಕೊನೆಯಲ್ಲಿ ವರ್ತೂರು ಮತ್ತೆ ಬಿಗ್ ಬಾಸ್‌ಗೆ ಬರುತ್ತಾರಾ? ಇಲ್ಲವಾ? ಅನ್ನೋದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ವರ್ತೂರು ಸಂತೋಷ್‌ಗೆ ಸದ್ಯಕ್ಕೀಗ ಜಾಮೀನು ದೊರೆತಿದೆ. ಸಂತೋಷ್ ಮತ್ತೆ ಬಿಗ್ ಬಾಸ್ ಮನೆಗೆ ಬರುತ್ತಾರಾ? ಇಲ್ಲವಾ? ಅನ್ನೋ ಬಗ್ಗೆ ಬಿಗ್ ಬಾಸ್ ಮುಂದಿನ ದಿನಗಳಲ್ಲಿ ಉತ್ತರ ಕೊಡಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದರು, ಆದ್ರೆ ಇದಿಗೆ ಜಿಯೋ ಸಿನಿಮಾ ಲೈವ್ ನಲ್ಲಿ ವರ್ತೂರ್ ಸಂತೋಷ್ ಕಾಣಿಸಿದ್ದು ಬಿಗ್ ಬಿ ಮನೆಗೆ ವರ್ತೂರು ಬಂದಿರೋದು ಕನ್ಫರ್ಮ್ ಆಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಬಿಗ್ ಬಿ ಮನೆಯಲ್ಲಿ ಮತ್ತೆ ಶುರುವಾಯ್ತು ಹಳ್ಳಿಕಾರ್ ದುನಿಯಾ 

ಹೌದು ಜಾಮೀನು ಸಿಕ್ಕು ಜೈಲಿನಿಂದ ಬಂದ ನಂತರ ಮಾಧ್ಯಮದವರಿಂದ ತಪ್ಪಿಸಿಕೊಂಡು ರಾತ್ರೋರಾತ್ರಿ ಹೋದವರು ಯಾಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿಲ್ಲ ಎನ್ನುವ ಪ್ರಶ್ನೆ ಎಲ್ಲರದ್ದಾಗಿತ್ತು. ಹಾಗಾದರೆ, ಸಂತೋಷ್ ಬಿಗ್‌ ಬಾಸ್‌ ಮನೆ ಪ್ರವೇಶ ಮಾಡೋದಿಲ್ಲವಾ?? ತಡ ಯಾಕೆ ಆಗುತ್ತಿದೆ? ಕಾನೂನು ಸಮಸ್ಯೆ ಏನಾದರು ಎದುರಾಗಿದ್ಯಾ? ಮತ್ತೆ ಮನೆ ಪ್ರವೇಶ ಮಾಡೋಕೆ ಅವರ ಮನಸ್ಥಿತಿ ಚೆನ್ನಾಗಿಲ್ಲವಾ? ಹೀಗೆ ಹತ್ತಾರು ಪ್ರಶ್ನೆಗಳು ಎದುರಾಗಿದ್ದವು. ಯಾವುದೇ ಸಮಸ್ಯೆ ಇಲ್ಲದೇ ಇದ್ದರೆ ಇನ್ನೂ ಯಾಕೆ ಅವರನ್ನು ಮನೆ ಒಳಗೆ ಕಳುಹಿಸಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆಲ್ಲ ಕಾರಣ ಕೂಡ ಇತ್ತು ಹೌದು ಅಂದುಕೊಂಡಂತೆ ಆಗಿದ್ದರೆ ನಿನ್ನೆಯೇ ವರ್ತೂರು ಸಂತೋಷ್ ಬಿಗ್ ಬಾಸ್ ಮನೆ ಪ್ರವೇಶ ಮಾಡಬೇಕಿತ್ತು. ಆದ್ರೆ ಜೈಲಿನಿಂದ ಬಿಡುಗಡೆಯಾಗಿ 48 ಗಂಟೆ ಸಮೀಪಿಸಿದರೂ ಇನ್ನೂ ಸಂತೋಷ್ ದೊಡ್ಮನೆಗೆ ಎಂಟ್ರಿಕೊಟ್ಟಿರಲಿಲ್ಲ.

ಆದ್ರೆ ಈಗ ಕೊನೆಗೂ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದಾರೆ ವರ್ತೂರ್ ಸಂತೋಷ್(Varthur Santhosh). ಆ ದೃಶ್ಯಾವಳಿಗಳನ್ನು ಸದ್ಯ JioCinema ವೀಕ್ಷಿಸಬಹುದಾಗಿದೆ. ಹೌದು ಎಲ್ಲ ಅಡೆತಡೆಗಳನ್ನು ದಾಟಿಕೊಂಡು ಇಂದು ಮಧ್ಯಾಹ್ನದಿಂದಲೇ ಅಧಿಕೃತವಾಗಿ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೆ ಬಿಗ್ ಬಾಸ್ ಮನೆಯಲ್ಲಿ ಹಳ್ಳಿಕಾರ್ ದುನಿಯಾ ಇಂದಿನಿಂದ ಶುರುವಾಗಿದೆ. ಆದ್ರೆ ಮನೆಯಲ್ಲಿ ಅವರು ಹೇಗಿರಲಿದ್ದಾರೆ ಅನ್ನೋದೋ ಸದ್ಯಕ್ಕಿರೋ ಸಸ್ಪೆನ್ಸ್ ಆಗಿದ್ದು, ಮುಂದಿನ ಸಂಚಿಕೆ ಗಳಲ್ಲಿ ತಿಳಿಯಲಿದೆ.

ಇನ್ನು ಶುಕ್ರವಾರ ಬೇಲ್ ಸಿಕ್ಕ ಕಾರಣ ಅಂದಿನ ರಾತ್ರಿಯೇ ಬಿಗ್ ಬಾಸ್ ಟೀಮ್ ಸಂತೋಷ್ ಅವರನ್ನ ತಮ್ಮ ಕಬ್ಜಾಗೆ ಪಡೆದಿತ್ತು. ಮೆಡಿಕಲ್ ಟೆಸ್ಟ್ ಕೂಡ ಮಾಡಿಸಲಾಗಿತ್ತು. ಮತ್ತೆ ಬಿಗ್ ಬಾಸ್ ಮನೆಗೆ ಕಳುಹಿಸುತ್ತಿರುವ ಕುರಿತು ಅವರ ಕುಟುಂಬಕ್ಕೂ ಮಾಹಿತಿ ನೀಡಿತ್ತು. ಆದರೆ, ಜಾಮೀನಿನಲ್ಲಿರುವ ಅಂಶಗಳ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿತ್ತು. ಜಾಮೀನು ಮೇಲೆ ಸಂತೋಷ್ ಜೈಲಿನಿಂದ ಹೊರ ಬಂದಿರುವ ಕಾರಣದಿಂದಾಗಿ ಕಾನೂನು ತಜ್ಞರ ಸಲಹೆ ಪಡೆದುಕೊಳ್ಳಲಾಗುತ್ತಿತ್ತು. ಯಾಕಂದ್ರೆ ಬಿಗ್ ಬಾಸ್ ಮನೆಗೆ ಬಂದಮೇಲೆ ಮತ್ತೆ ಏನಾದ್ರೂ ಸಮಸ್ಯೆ ಎದುರಾಗಬಹುದಾ ಕಾನೂನಿನ ಚೌಕಟ್ಟಿನಲ್ಲಿ ಏನಾದ್ರೂ ಸಮಸ್ಯೆಗಳನ್ನ ಎದುರಿಸಬೇಕಾಗುತ್ತಾ ಹೀಗೆ ಹತ್ತು ಹಲವಾರು ಪ್ರಶ್ನೆಗಳುದ್ದ ಕಾರಣ ಎಲ್ಲವನ್ನ ತಿಳಿದುಕೊಂಡು ಮತ್ತೆ ಹಳ್ಳಿಕಾರ್ ದುನಿಯಾ ವನ್ನ ಬಿಗ್ ಬಿ ಮನೆಯಲ್ಲಿ ಶುರು ಮಾಡಲು ವರ್ತೂರು ಸಂತೋಷ್ ಅವ್ರಿಗೆ ಅವಕಾಶ ನೀಡಲಾಗಿದೆ.

ಸದ್ಯ ಮನೆ ಸೇರಿರುವ ಅವ್ರನ್ನ ಇಲ್ಲ ಸದಸ್ಯರು ಶಾಕ್ ಜೊತೆಗೆ ಖುಷಿಯಿಂದಲೇ ವೆಲ್ ಕಮ್ ಮಾಡಿದ್ದು, ವರ್ತೂರು ಸಂತೋಷ್ ಅವ್ರು ಕೂಡ ಸುಧಾರಿಸಿಕೊಂಡಿರೋ ರೀತಿ ಕಾಣುತಿದೆ.. ಎಲ್ಲರೊಟ್ಟಿಗೆ ಬೆರೆತು ಆರಾಮಾಗಿರುವಂತೆ ಮೇಲ್ನೋಟಕ್ಕೆ ಕಾಣ್ತಿದೆ. ಆದ್ರೆ ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನಿಮಗೆ ಸಿಗಲಿದೆ 6 ಸಾವಿರ ಯಾರಿಗೆಲ್ಲಾ ಸಿಗಲಿದೆ ಈ ಹಣ? ಸಂಪೂರ್ಣ ಮಾಹಿತಿ ಇಲ್ಲಿದೆ

ಇದನ್ನೂ ಓದಿ: ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಬರಲಿದೆ ಹಣ; 15ನೇ ಕಂತಿನ ಹಣ ಯಾವಾಗ ಬರುತ್ತೆ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram