ವರ್ತೂರು ಸಂತೋಷ್ ಅರೆಸ್ಟ್ ಆಗಿರೋದು ಬೇಕು ಅಂತಾನೆ ಮಾಡಿರೋದು! ಮಗನ ಬಗ್ಗೆ ತಾಯಿ ಮಂಜುಳಾ ಹೇಳಿದ್ದೇನು ಗೊತ್ತಾ?

ವರ್ತೂರು ಸಂತೋಷ್(Varthur Santhosh) ರೈತನಾಗಿ ಗುರುತಿಸಿಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಸುದ್ದಿಯಾಗುತ್ತಿದ್ದವರು, ನಂತರ ಬಿಗ್ ಬಾಸ್​ಗೆ ಎಂಟ್ರಿ ಆದಮೇಲೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತ್ತು. ಆದ್ರೆ ಇದೀಗ ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಹಿಂದೆಂದೂ ನಡೆಯದ ಘಟನೆ ದಸರಾ ಹಬ್ಬದ ಸಂಭ್ರಮದ ಮಧ್ಯೆ ನಡೆದುಹೋಗಿದೆ. ಕೊರಳಲ್ಲಿ ಧರಿಸಿದ ಚಿನ್ನದ ಸರದಲ್ಲಿ ಹುಲಿ ಉಗುರು ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ರನ್ನು ಅರಣ್ಯಾಧಿಕಾರಿ ಮತ್ತು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಿಂದ ಸಂತೋಷ್ ಅವರನ್ನು ಕರೆತಂದಿರುವ ರಾಮೋಹಳ್ಳಿ ಅರಣ್ಯಾಧಿಕಾರಿಗಳು ಪೊಲೀಸ್ ಕಸ್ಟಡಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅರಣ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಸಂತೋಷ್ ಅವರ ಬಂಧನವಾಗಿದ್ದು, ಕುತ್ತಿಗೆಯಲ್ಲಿ ಹುಲಿಯ ಉಗುರು ಇರುವ ಲಾಕೆಟ್ ನ್ನು ಅವರು ಹಾಕಿಕೊಂಡಿದ್ದರು.

WhatsApp Group Join Now
Telegram Group Join Now

ಈ ಕುರಿತು ಶರತ್ ಎನ್ನುವವರು ದೂರು ನೀಡಿದ್ದರು. ಈ ಹಿನ್ನೆಲೆ ವರ್ತೂರು ಸಂತೋಷ್(Varthur Santhosh) ನನ್ನ ಬಂಧಿಸಿ, ಸದ್ಯ ಅರಣ್ಯಾಧಿಕಾರಿಗಳಿಂದ ಸಂತೋಷ್ ಅವರ ವಿಚಾರಣೆ ನಡೆಯುತ್ತಿದೆ. ಇನ್ನು ಎರಡು ದಿನದ ಹಿಂದೆ ನಾನು ದೂರು ಕೊಟ್ಟಿದ್ದೆ. ಹುಲಿ ಉಗುರು ಇರುವ ಪದಕವನ್ನು ಅವರು ಧರಿಸಿದ್ದರು. ಇದು ವನ್ಯಜೀವಿ ಕಾಯ್ದೆಯ ಪ್ರಕಾರ ತಪ್ಪು. ಸೆಲೆಬ್ರಿಟಿಗಳು ನಿಯಮ ಪಾಲನೆ ಮಾಡಬೇಕು. ಈ ರೀತಿ ಹುಲಿಉಗುರಿನ ಪದಕ ಧರಿಸುವುದು ತಪ್ಪು. ಅದು ಒರಿಜಿನಲ್ಲೋ ಅಥವಾ ಡೂಪ್ಲಿಕೇಟ್ ಅನ್ನೋದು ಫಾರೆನ್ಸಿಕ್ ನವರು ಡಿಸೈಡ್ ಮಾಡಬೇಕು ಅಂತ ಶರತ್ ಹೇಳಿದ್ರು. ಆದ್ರೆ ಇದರ ಬಗ್ಗೆ ಮಾತನಾಡಿರುವ ಸಂತೋಷ್ ತಾಯಿ ಇದು ಪಿತೂರಿ, ನನ್ನ ಮಗನನ್ನ ಸಿಕ್ಕಿಸುವ ಸಂಚು ಎಂದಿದ್ದಾರೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

10ವರ್ಷದಿಂದ ನನ್ನ ಮಗ ಆ ಡಾಲರ್ ಹಾಕೊಂಡಿದ್ದ!

ಸದ್ಯ ಪೋಲೀಸರ ಕಸ್ಟಡಿಯಲ್ಲಿರುವ ಸಂತೋಷ್ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಅಲ್ದೇ ವರ್ತೂರ್ ಸಂತೋಷ್ ಹಲವು ಮಾಹಿತಿಗಳನ್ನು ಅರಣ್ಯ ಅಧಿಕಾರಿಗಳ ಮುಂದೆ ಹೇಳಿದ್ದು, ತನ್ನ ಬಳಿ ಇರುವುದು ಒರಿಜಿನಲ್ ಹುಲಿ ಉಗುರು, ನಾನು ವ್ಯಕ್ತಿಯೊಬ್ಬನಿಂದ ಹುಲಿ ಉಗುರು ಖರೀದಿಸಿದ್ದೆ ಅಂತ ಹೇಳಿದ್ದು, ಹುಲಿ ಉಗುರಿನ ಮೂಲವನ್ನು ಅರಣ್ಯಾಧಿಕಾರಿಗಳು ಹುಡುಕುತ್ತಿದ್ದಾರೆ. ಇನ್ನು ಇತ್ತ ಸಂತೋಷ್ ಅವ್ರ ಅಮ್ಮಾ ಮಂಜುಳಾ ಮಗನಿಗೆ ಅದರ ತಪ್ಪಿನ ಅರಿವಿಲ್ಲದೇ ಅವನು ಹಾಕಿಕೊಂಡಿದ್ದಾನೆ. ಖಂಡಿತ ಈಗ ಅವನಿಗೆ ತಪ್ಪಿನ ಅರಿವಾಗಿ ಪಶ್ಚಾತಾಪ ಆಗಿರುತ್ತೆ, ಅವ್ನು ಗೊತ್ತಿಲ್ಲದೇ ಅದನ್ನ ಹಾಕಿಕೊಂಡಿರೋದು, 10ವರ್ಷದಿಂದ ಹಾಕೊಂಡಿದ್ದ, ಆಗ ಯಾರು ಕೇಳಿಲ್ಲ ಈಗ ಈ ರೀತಿ ಮಾಡಿದ್ದಾರೆ ಅಂದ್ರೆ ಅದು ಸಂಚು ಅಲ್ದೇ ಬೇರೇನು, ಬೇಕು ಅಂತಲೇ ಇದೆಲ್ಲವನ್ನ ಮಾಡಿರೋದು. ಎಲ್ಲ ಕಾರ್ಯಕ್ರಮಗಳಿಗೂ ಹಾಕೊಂಡು ಹೋಗ್ತಿದ್ದ ಆಗ ಕಾಣದೆ ಇರೋದು ಇವಾಗ ಹೇಗೆ ಕಾಣಿಸಿದೆ, ಅವನ ಏಳಿಗೆ ಸಹಿಸದೆ ಯಾರೋ ಕೆಲವರು ಹೀಗೆ ಮಾಡಿದರೆ, ಆದ್ರೆ ಚಿಂತೆ ಇಲ್ಲ ನನ್ನ ಮಗ ಹೊರಗೆ ಬರ್ತಾನೆ ಅವನ ಸುತ್ತ ಜನ ಇದ್ದಾರೆ. ಇತರ ಮಾಡೋರು ಚೆನ್ನಾಗಿರಲಿ ಅಂತ ಹೇಳಿದ್ದಾರೆ.

ಹೌದು ಒಬ್ಬ ತಾಯಿಯಾಗಿ ಹೇಳ್ತಾ ಇದ್ದೀನಿ ಇತರ ಮಾಡಿದವರು ಚೆನ್ನಾಗಿರಲಿ. ನನ್ನ ಮಗ ಮುಗ್ದ, ಅವನಿಗೆ ಏನು ಗೊತ್ತಾಗಲ್ಲ. ಅಮ್ಮಾ ನಂಗೆ ಚೈನ್ ಬೇಕು ಮಾಡ್ಸು ಅಂದ ಆಗ ಚೈನು ನಾನೆ ಮಾಡಿಸಿದ್ದು, ಡಾಲರ್ ಯಾರತ್ರನೋ ತಂದೆ ಇದನ್ನ ಹಾಕ್ಸು ಅಂದ ಹಾಕಿಸಿಕೊಟ್ಟಿದ್ದೆ. ಖಂಡಿತಾ ಅದು ತಪ್ಪು ಅಂತ ನಮಗೆ ಗೊತ್ತಿರಲಿಲ್ಲ. ಅವನಿಗೂ ಕೂಡ ಗೊತ್ತಿರಲ್ಲ, ಅವ್ನು ಗೊತ್ತಿಲ್ಲದೇ ಹಾಕೊಂಡಿರ್ತಾನೆ, ನಂಗು ಕೂಡ ಅದ್ರ ಬಗ್ಗೆ ಯಾವತ್ತೂ ಏನನ್ನು ಹೇಳಿಲ್ಲ ಎಂದಿದ್ದಾರೆ. ಇನ್ನು ಮಗನನ್ನ ನಾನಿನ್ನು ನೋಡಿಲ್ಲ ಬಿಗ್ ಬಾಸ್ ಗೆ ಹೋದಾಗ ನೋಡಿದ್ದು ಅಲ್ಲಿಂದ ಈಗ ನೇರವಾಗಿ ಅವ್ನ ಕರ್ಕೊಂಡು ಹೋಗಿದ್ದಾರೆ. ಅವನ ಸ್ನೇಹಿತರು ಈಗ ಅಲ್ಲಿಗೆ ಹೋಗಿದ್ದಾರೆ, ಲಾಯರ್ ಕೂಡ ಹೋಗಿದ್ದಾರೆ, ನನ್ನ ಮಗನಿಗೆ ಜನ ಬಲ ಇದೆ ಅವ್ನು ಹೊರಗೆ ಬಂದೆ ಬರ್ತಾನೆ. ಅವ್ನ ತುಳಿಯಬೇಕು ಅಂತ ಮಾಡಿದವರು ಬೆಳೆಯಲಿ ಅವ್ರಿಗೆ ಒಳ್ಳೆಯದಾಗ್ಲಿ, ತಾಯಿಯಾಗಿ ಇದನ್ನ ಹೇಳ್ತಿದ್ದೀನಿ ಅವ್ರು ಅನುಭವಿಸುತ್ತಾರೆ. ಆದ್ರೆ ನನ್ನ ಮಗನದ್ದು ಇದರಲ್ಲಿ ಏನು ತಪ್ಪಿರಲ್ಲ ಅವ್ನು ಒಳ್ಳೆಯವನು ಅಂತಲೇ ಮಗನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನ್ನ ಗಂಡನನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂದ ಸಂತು ಪತ್ನಿ ಮಾನಸ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram