ಭಾರವಾದ ಮನಸ್ಸಿನಿಂದಲೇ ಡಿಕೆಡಿ ಶೋ ಗೆ ಬರ್ತಾರಾ ವಿಜಯ್ ರಾಘವೇಂದ್ರ! ಈ ವಾರವೇ ಡಿಕೆಡಿ ವೇದಿಕೆಯಲ್ಲಿ ರಾಘು!?

ಸ್ನೇಹಿತರೆ, ಸ್ಯಾಂಡಲ್ವುಡ್ ನ ಚಿನ್ನಾರಿಮುತ್ತ ನಗು ಮುಖದ ಸರದಾರ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಅಲ್ಲಿನ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಹೌದು ಗೆಳೆಯರೇ ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸದ್ಯ ಸ್ಪಂದನಾ ಸಾವಿನ ನೋವಿನಿಂದ ಇನ್ನು ಕೂಡ ಚಿನ್ನಾರಿ ಮುತ್ತಾ ಹೊರ ಬಂದಿಲ್ಲ. ಆಗಂತ ಚಿನ್ನಾರಿ ಮುತ್ತಾ ಮನೆಯಲ್ಲಿಯೂ ಕೂರುವ ಆಗಿಲ್ಲ. ಹೀಗಾಗಿ ತಮ್ಮ ನಟನೆ ಹಾಗೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಭಾಗವಾಹಿಸುವಂತೆ ಸಾಕಷ್ಟು ಜನ ರಾಘು ಅವ್ರಿಗೆ ಒತ್ತಡ ಹಾಕಿದ್ರು ಅದರಂತೆ ರಾಘು ಈಗ ಗಟ್ಟಿ ನಿರ್ಧಾರವನ್ನ ಮಾಡಿದ್ದಾರೆ.

WhatsApp Group Join Now
Telegram Group Join Now

ಯಾಕಂದ್ರೆ ವಿಜಯ್ ರಾಘವೇಂದ್ರ ನೋವು ಯಾರಿಗೆ ಬಾರದೆ ಇರಲಿ ಅಂತ ಹೇಳಬಹುದು ಹೌದು ಹೆಂಡತಿ ದಾಸಿ ಅಲ್ಲ ಅವಳನ್ನ ರಾಣಿಯಂತೆ ನೋಡ್ಕೋಬೇಕು ಅಂತ ಹೇಳ್ತಿದ್ದ ರಾಘು ಇಂದು ಪತ್ನಿಯಿಲ್ಲದ ಜೀವನದಲ್ಲಿ ಉಸಿರಿಲ್ಲದ ದೇಹ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೌದು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ ರಾಘವೇಂದ್ರ ಅವರ ಪರಿಸ್ಥಿತಿ ಹಾಗೂ ತನ್ನ ತಾಯಿಯೇ ಸರ್ವಸ್ವವೆಂದು ತನಗಿಂತ ಹೆಚ್ಚಾಗಿ ಅಮ್ಮನನ್ನು ಪ್ರೀತಿಸುತ್ತಿದ್ದ ಶೌರ್ಯವರ ಮನಸ್ಥಿತಿ ನಿಜಕ್ಕೂ ಕೂಡ ಘನ ಘೋರ. ಆದ್ರೆ ರಾಘು ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ ಅನ್ನೋದು ಕೆಲವೊಂದು ಮಾಹಿತಿ ಪ್ರಕಾರ ಕನ್ಫರ್ಮ್ ಆಗಿದೆ.

ಹೌದು ದೇವರಿಗೆ ದೊಡ್ಮನೆ ಕುಟುಂಬ ಅಂದ್ರೆ ಬಹಳ ಪ್ರೀತಿ ಅನ್ಸುತ್ತೆ ಅದಿಕ್ಕೆ ಹೀಗ್ ಮಾಡ್ತಿದ್ದಾನೆ ಅಂತ ಹೇಳಬಹುದು.. ಇನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವಿನಿಂದ ಚೇತರಿಸಿಕೊಳ್ಳುತ್ತಿದ್ದಂತಹ ದೊಡ್ಮನೆಗೆ ಮತ್ತೊಂದು ದುಃಖದ ಛಾಯೆ ಮೂಡಿದ್ದು, ದೊಡ್ಮನೆಯ ಪ್ರತಿಯೊಬ್ಬರು ಸಹ ಕಣ್ಣೀರಿನ ಕೋಡಿಯಲ್ಲಿ ದಿನ ಕಳೆಯುತ್ತಿದ್ದಾರೆ. ಅಂತದ್ರಲ್ಲಿ ಪತ್ನಿಯನ್ನೇ ಸರ್ವಸ್ವ ಅಂತಿದ್ದ ರಾಘು ಸ್ಥಿತಿ ಹೇಗಿರಬೇಡ.. ಪ್ರಾಣಕ್ಕಿಂತ ಹೆಚ್ಚಾಗಿದ್ದ, ಜೊತೆಯಲ್ಲಿದ್ದ ಪತ್ನಿಯ ಪ್ರಾಣವನ್ನ ಉಳಿಸಿಕೊಳ್ಳಲೂ ಆಗದೆ ಆ ಜೀವ ಪಟ್ಟ ನೋವು ಖಂಡಿತ ಯಾವ ಶತ್ರುವಿಗೂ ಬರಬಾರದು ಅದ್ರಲ್ಲೂ ಮಗನ ಜವಾಬ್ದಾರಿ ಹೊತ್ತು ತಮ್ಮ ನಟನ ಜೀವನದಲ್ಲಿ ಸಾಗೋದು ಅಷ್ಟು ಸುಲಭದ ಮಾತಲ್ಲ. ಆದ್ರೆ ಚಿನ್ನಾರಿ ಮುತ್ತನಿಗೆ ಇದೆಲ್ಲವೂ ಅನಿವಾರ್ಯ.

ಹೌದು ಜೀವನ್ಪರಿಯಂತ ಜೊತೆಗಿರಬೇಕೆಂದು ನಿರ್ಧಾರ ಮಾಡಿ ತಮ್ಮ ಬದುಕಿನ ಪಯಣವನ್ನು ಶುರುಮಾಡಿದ್ದ ವಿಜಯ್ ರಾಘವೇಂದ್ರ ಅವರನ್ನು ಒಬ್ಬಂಟಿಯನ್ನಾಗಿಸಿ ಸ್ಪಂದನ ಅವರು ಬಾರದ ಲೋಕಕ್ಕೆ ತೆರಳಿಬಿಟ್ರು, ಅಲ್ದೆ ಮಗನ ಜವಾಬ್ದಾರಿ, ಜೊತೆಗೆ ತಮ್ಮ ಕನಸುಗಳನ್ನ ರಘುಗೆ ಕೊಟ್ಟು ಹೋದ್ರು.. ಇದೆಲ್ಲವನ್ನ ನಿಭಾಯಿಸೋದು ರಾಘು ಗೆ ಸವಾಲೇ ಅನ್ನಬಹುದು.. ಆದ್ರೂ ಕೂಡ ಸ್ಪಂದನಾ ಅವ್ರ ಎಲ್ಲಾ ಕಾರ್ಯಗಳನ್ನ ಬಹಳ ಪ್ರೀತಿಯಿಂದಲೇ ಮುಗಿಸಿ ಮುದ್ದಿನ ಮಡದಿಗೆ ಪ್ರೀತಿಯ ನಮನ ಸಲ್ಲಿಸಿ.. ಈಗ ಅದೆಲ್ಲದರಿಂದ ಹೊರ ಬರುತ್ತಿದ್ದಾರೆ.

ಮತ್ತೆ ಡಿಕೆಡಿ ವೇದಿಕೆಯಲ್ಲಿ ವಿಜಯ್ ರಾಘವೇಂದ್ರ!?

ಇದೀಗ ವಿಜಯ್ ರಾಘವೇಂದ್ರ ಮತ್ತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಹೌದು ಈ ವಾರದಿಂದಲೇ ಡಿಕೆಡಿ ಶೋನಲ್ಲಿ ವಿಜಯ್ ರಾಘವೇಂದ್ರ ಕಾಣಿಸಿಕೊಳ್ಳಲಿದ್ದಾರೆ ಅನ್ನುವಂತಹ ಮಾಹಿತಿಗಳು ಬರುತ್ತಿದ್ದು ಶೂಟಿಂಗ್ ನಲ್ಲೂ ಭಾಗವಹಿಸುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಅಲ್ದೆ ಬಾಕಿ ಇರುವಂತಹ ಸಿನಿಮಾಗಳ ಶೂಟಿಂಗ್ ಕೂಡ ಮುಗಿಸುವತ್ತ ತಮ್ಮ ಗಮನವನ್ನ ಹರಿಸುತ್ತಿದ್ದಾರಂತೆ. ಪ್ರಾಣಕ್ಕಿಂತ ಹೆಚ್ಚಾಗಿದ್ದ ಮಡದಿಯನ್ನ ಕಳೆದುಕೊಂಡು ನೋವಿನಲ್ಲಿರೋದು ಸಹಜ ಆಗಂತ ಇರೋವಷ್ಟು ದಿನ ಹೀಗೆಯೇ ಇರೋದಕ್ಕೆ ಆಗೋದಿಲ್ಲ ಆಗಾಗಿ ರಾಘು ಸ್ಪಂದನಾ ಅವ್ರ ಆಸೆ ಈಡೇರಿಸುವ ಉದ್ದೇಶದಿಂದ ಸಿನಿಮಾ ರಂಗದಲ್ಲಿ ಇನ್ನು ಹೆಚ್ಚು ಸಕ್ರಿಯರಾಗುವ ಅವಶ್ಯಕತೆ ಅನಿವಾರ್ಯತೆ ಎರಡು ಇದೆ.

ಹೀಗಾಗಿ ಇದರ ಜೊತೆಗೆ ಸ್ಪಂದನಾ ಅವ್ರ ಆಸೆ ಕೂಡ ಮಗನನ್ನ ಇಂಡಸ್ಟ್ರಿಗೆ ಪರಿಚಯಿಸಬೇಕು, ಅಲ್ದೇ ತಾವು ದೊಡ್ಡ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುವ ಆಸೆಯನ್ನ ಹೊಂದಿದ್ರು ಹೀಗಾಗಿ ಮಡದಿಯ ಕೊನೆ ಆಸೆ ಈಡೇರಿಸಿ ಮಗನನ್ನ ಇಂಡಸ್ಟ್ರಿಗೆ ಪರಿಚಯಿಸುವ ದೊಡ್ಡ ಜವಾಬ್ದಾರಿ ರಾಘು ಬೆನ್ನಿಗಿದೆ. ಹೀಗಾಗಿ ರಾಘು ಎಲ್ಲವನ್ನ ಮರೆಯೋದು ಅನಿವಾರ್ಯ. ಮರೆತು ಮುನ್ನಡೆಯೋದು ಅವಶ್ಯಕವಾಗಿರೋದ್ರಿಂದ ರಾಘು ಬದಲಾಗುತ್ತಿದ್ದಾರೆ. ಹೀಗಾಗಿ ವಿಜಯ್ ರಾಘವೇಂದ್ರ ಡಿಕೆಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ಈ ರೀತಿ ಬ್ಯುಸಿ ಆಗಿ ದುಃಖದಿಂದ ಹೊರಬರಬಹುದು ಎಲ್ಲವನ್ನ ಮರೆತು ಜೀವನ ನಡೆಸಬೇಕು ಅನ್ನೋ ನೋವಿನಲ್ಲೆ ಬದಲಾವಣೆಯ ಹಾದಿ ಶುರು ಮಾಡಿದ್ದಾರೆ.

ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್; ಸರ್ಕಾರದಿಂದ ಮಹಿಳೆಯರಿಗೆ ಏನೆಲ್ಲಾ ಸಿಗ್ತಿದೆ ಗೊತ್ತಾ!

ಇದನ್ನೂ ಓದಿ: ಪತ್ನಿ, ಮಗುಗೆ ಗುಂಡು ಹಾರಿಸಿ ತಾನು ಸತ್ತ; ಅಮೇರಿಕಾದಲ್ಲಿ ಸ್ವಂತ ಮನೆಯಿದ್ರು ಯಾಕಿಗಾಯ್ತು!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram