ಡಿಕೆಡಿ ಶೋಗೆ ವಾಪಸ್ ಎಂಟ್ರಿ ಕೊಟ್ಟ ರಾಘು! ಶೋಗೆ ಬಂದ ರಾಘು ನ ನೋಡಿ ಶಿವಣ್ಣ ಹೇಳಿದ್ದೇನು?

ಚಂದನವನದ ಚಿನ್ನಾರಿ ಮುತ್ತ, ಸದಾ ಹಸನ್ಮುಖಿ ನಮ್ಮ ನಗು ಮುಖದ ಸರದಾರ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ವಿಜಯ್ ರಾಘವೇಂದ್ರ ಅವರು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್ ಹೋಗಿದ್ದಾಗ ಬ್ಯಾಂಕಾಕ್ನಲ್ಲಿ ಶಾಪಿಂಗ್ ಮುಗಿಸಿ ಬಂದು ಸುಸ್ತಾಗಿ ಮಲಗಿದವರು ಮತ್ತೆ ಮೇಲೇಳಲೆ ಇಲ್ಲ. ಮಲಗಿದ್ದಂತಹ ಸಂದರ್ಭದಲ್ಲಿ ಸ್ಪಂದನವರಿಗೆ ಲಘು ಹೃದಯಾಘಾತ ಸಂಭವಿಸಿ ಇಹಲೋಕ ತ್ಯಜಿಸಿದರು. ಸದ್ಯ ಸ್ಪಂದನಾ ಸಾವಿನ ನೋವಿನಿಂದ ಇನ್ನು ಕೂಡ ಚಿನ್ನಾರಿ ಮುತ್ತಾ ಹೊರ ಬಂದಿಲ್ಲ. ಯಾಕಂದ್ರೆ ವಿಜಯ್ ರಾಘವೇಂದ್ರ ನೋವು ಯಾರಿಗೆ ಬಾರದೆ ಇರಲಿ ಅಂತ ಹೇಳಬಹುದು ಹೌದು ಹೆಂಡತಿ ದಾಸಿ ಅಲ್ಲ ಅವಳನ್ನ ರಾಣಿಯಂತೆ ನೋಡ್ಕೋಬೇಕು ಅಂತ ಹೇಳ್ತಿದ್ದ ರಾಘು ಇಂದು ಪತ್ನಿಯಿಲ್ಲದ ಜೀವನದಲ್ಲಿ ಉಸಿರಿಲ್ಲದ ದೇಹ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ.

WhatsApp Group Join Now
Telegram Group Join Now

ಹೌದು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ ರಾಘವೇಂದ್ರ ಅವರ ಪರಿಸ್ಥಿತಿ ಹಾಗೂ ತನ್ನ ತಾಯಿಯೇ ಸರ್ವಸ್ವವೆಂದು ತನಗಿಂತ ಹೆಚ್ಚಾಗಿ ಅಮ್ಮನನ್ನು ಪ್ರೀತಿಸುತ್ತಿದ್ದ ಶೌರ್ಯವರ ಮನಸ್ಥಿತಿ ನಿಜಕ್ಕೂ ಕೂಡ ಘನ ಘೋರ. ಆದ್ರೆ ಆಗಂತ ಚಿನ್ನಾರಿ ಮುತ್ತಾ ಮನೆಯಲ್ಲಿಯೂ ಕೂರುವ ಆಗಿಲ್ಲ. ಹೀಗಾಗಿ ತಮ್ಮ ನಟನೆ ಹಾಗೂ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಭಾಗವಾಹಿಸುವಂತೆ ಸಾಕಷ್ಟು ಜನ ರಾಘು ಅವ್ರಿಗೆ ಒತ್ತಡ ಹಾಕಿದ್ರು ಅದರಂತೆ ರಾಘು ಈಗ ಗಟ್ಟಿ ನಿರ್ಧಾರವನ್ನ ಮಾಡಿದ್ದಾರೆ. ರಾಘು ಮತ್ತೆ ಶೂಟಿಂಗ್ ಗೆ ಮರಳಿದ್ದು, ಡಿಕೆಡಿ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಿ ಕನ್ನಡ ವಾಹಿನಿಯ ಪ್ರೊಮೋದಲ್ಲಿ ಚಿನ್ನಾರಿ ಮುತ್ತ ಎಂಟ್ರಿ ಕೊಟ್ಟಿದ್ದು, ಅಭಿಮಾನಿಗಳೂ ಫುಲ್ ಖುಷ್ ಆಗಿದ್ದು ಶಿವಣ್ಣ ಕೂಡ ಸಂತಸ ಪಟ್ಟಿದ್ದಾರೆ.

ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಪ್ರೀತಿಸಿ ಮದುವೆ ಆದವರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದವರು. ಆದ್ರೆ ಏಕಾಏಕಿ ಅವರು ಮೃತಪಟ್ಟರೆ ಯಾರಿಗಾದರೂ ಶಾಕ್ ಆಗುತ್ತದೆ. ವಿಜಯ್​ಗೂ ಸ್ಪಂದನಾ ಸಾವು ಆಘಾತಕಾರಿ ಆಗಿತ್ತು. ಅವರು ಹಲವು ದಿನಗಳಕಾಲ ಚಿತ್ರರಂಗದಿಂದ ದೂರವೇ ಇದ್ದರು. ‘ಡಿಕೆಡಿ’ ಶೋಗೂ ಅವರು ಬರುತ್ತಿರಲಿಲ್ಲ. ಈಗ ಅವರು ಎಲ್ಲವನ್ನೂ ಮರೆತು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಲು ನಿರ್ಧರಿಸಿದ್ದಾರೆ. ಹೀಗಾಗಿ ಡಿಕೆಡಿ ಶೋಗೂ ರಾಘು ಬಂದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಇನ್ನು ಬಂದಿಲ್ವ; ಮರೆಯದೆ ಮೊದಲು ಈ ಕೆಲಸ ಮಾಡಿ

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ನೋವಿನಿಂದ ಚೇತರಿಸಿಕೊಂಡ್ರ ಚಿನ್ನಾರಿ ಮುತ್ತ?

ಹೌದು ವಿಜಯ್ ರಾಘವೇಂದ್ರ ಅವರ ಬಾಳಲ್ಲಿ ದೊಡ್ಡ ಕಹಿ ಘಟನೆ ನಡೆಯಿತು. ಅವರ ಪತ್ನಿ ಸ್ಪಂದನಾ ಅವರು ಕಳೆದ ತಿಂಗಳು ಹೃದಯಾಘಾತದಿಂದ ಮೃತಪಟ್ಟರು. ಈ ನೋವು ಎಂದಿಗೂ ಮರೆಯಾಗುವಂಥದ್ದಲ್ಲ. ಅವರನ್ನು ನೆನಪಿಸಿಕೊಂಡಾಗಲೆಲ್ಲ ವಿಜಯ್​ಗೆ ಅಳು ಬರುತ್ತದೆ. ಆದರೆ, ಈ ನೋವನ್ನು ನುಂಗಿ ಮುಂದೆ ಸಾಗಲೇಬೇಕಿದೆ. ಈಗ ವಿಜಯ್ ರಾಘವೇಂದ್ರ ಅವರು ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ತೊಡಗಿಕೊಂಡಿದ್ದಾರೆ. ಹೌದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ರ ಜಡ್ಜ್​ ಸ್ಥಾನದಲ್ಲಿ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ವಿಜಯ್ ಅವರ ಜೀವನೋತ್ಸಾಹ ಕಂಡು ಅನೇಕರು ಭೇಷ್ ಎಂದಿದ್ದಾರೆ.

ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7ರ ಈ ವಾರದ ಪ್ರೋಮೋವನ್ನ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಜಡ್ಜ್​​ ಸ್ಥಾನದಲ್ಲಿ ವಿಜಯ್ ರಾಘವೇಂದ್ರ ಅವರನ್ನು ನೋಡಿ ಅಭಿಮಾನಿಗಳಂತು ಖುಷಿಪಟ್ಟಿದ್ದಾರೆ. ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಈಗಾಗಲೇ ಆರು ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಏಳನೇ ಸೀಸನ್ ಪ್ರಸಾರ ಕಾಣುತ್ತಿದೆ. ಅನೇಕ ಪ್ರತಿಭೆಗಳಿಗೆ ‘ಡಿಕೆಡಿ’ ವೇದಿಕೆ ಆಗಿದೆ. ಶಿವರಾಜ್​ಕುಮಾರ್, ರಕ್ಷಿತಾ ಪ್ರೇಮ್, ಚಿನ್ನಿ ಮಾಸ್ಟರ್​, ವಿಜಯ್ ರಾಘವೇಂದ್ರ ಜಡ್ಜ್ ಸ್ಥಾನದಲ್ಲಿದ್ದು, ಇದೀಗ ಚಿನ್ನಾರಿ ಮುತ್ತನ ರೀ ಎಂಟ್ರಿ ನೋಡಿ ಇತರೆ ಜಡ್ಜ್ ಗಳೂ ಖುಷಿ ಪಟ್ಟಿದ್ದು ಶಿವಣ್ಣ ಕೂಡ ಮನಬಿಚ್ಚಿ ಮಾತನಾಡಿದ್ದಾರೆ.

ರಾಘು ಡಿಕೆಡಿಗೆ ಮರಳಿ ಬಂದ ಬಗ್ಗೆ ಶಿವಣ್ಣ ಹೇಳಿದ್ದೇನು?

ಹೌದು ರಾಘು ವೇದಿಕೆ ಎಂಟ್ರಿ ಕೊಟ್ಟಿದ್ದಂತೆ ನಿರೂಪಕಿ ಅನುಶ್ರೀ ಶಿವಣ್ಣ ಅವರ ಜೊತೆಗೆ ಮಾತನಾಡುವಂತೆ ಹೇಳುತ್ತಾರೆ ಆಗ ಶಿವಣ್ಣ ರಾಘವೇಗೆ ನೋವಿಲ್ಲ ಅಂತ ಹೇಳೋಕಾಗಲ್ಲ ನಾವೆಲ್ಲರೂ ಕೂಡ ಎಲ್ಲವನ್ನ ಸಹಿಸಿಕೊಂಡು ಬದುಕು ಅಂತ ಹೇಳಬಹುದು ಎಲ್ಲವನ್ನು ಮರೆತು ಬಿಡು ಅಂತ ಹೇಳಬಹುದು ಆದರೆ ಹೇಳಿದಷ್ಟು ಎಲ್ಲವನ್ನ ಮರೆತು ಬದುಕೋದು ಕಷ್ಟ ಹಾಗಂತ ಆಗೋದಿಲ್ಲ ಜೀವನ ಹೇಗೆ ಬರುತ್ತೋ ಹಾಗೆ ಎಲ್ಲವನ್ನ ನಿಭಾಯಿಸಿಕೊಂಡು ಹೋಗಬೇಕು ಈಗ ನಮ್ಮ ರಾಘು ಕೂಡ ಅದೇ ಪರಿಸ್ಥಿತಿಯಲ್ಲಿದ್ದಾನೆ ರಾಘು ನಿಮ್ ಜೊತೆ ನಾವ್ ಇರ್ತೀವಿ ಯಾವಾಗಲೂ ಖುಷಿಯಾಗಿರು ಬಂದಿದ್ನಲ್ಲ ನಿಭಾಯಿಸಿಕೊಂಡು ಹೋಗು. ಚೆನ್ನಾಗಿದ್ರೆ ಅಷ್ಟೇ ಸಾಕು ತುಂಬಾನೇ ಕಷ್ಟ ಆದ್ರೂ ಬದುಕಲೇಬೇಕು ಈ ಹುಮ್ಮಸ್ಸು ಇದೇ ರೀತಿ ಇರ್ಲಿ ಅಂತ ಶಿವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram