ಮಗನಿಗೆ ನನ್ನ ನೋವು ಗೊತ್ತಾಗಬಾರದು; ಅವ್ನು ಮನೆಗೆ ಬಂದು ಅಮ್ಮ ಅಂದಾಗ ಸಹಿಸಿಕೊಳ್ಳೋಕಾಗಿಲ್ಲ!

ವಿಧಿ ಯಾರ ಬಾಳಲ್ಲಿ ಹೇಗೆ ಕಣ್ಣ ಮುಚ್ಚಾಲೆ ಆಟ ಆಡುತ್ತೆ ಅಂತ ಊಹಿಸೋದು ಕಷ್ಟ. ಇವಗಿದ್ದೋರು ಇನ್ನೊಂದು ಕ್ಷಣಕ್ಕೆ ಇರ್ತಾರ ಅನ್ನೋದನ್ನ ನಂಬೋಕು ಕೂಡ ಕಷ್ಟವಾಗುವಂತೆ ವಿಧಿ ಸಾವಿನ ಆಟ ಆಡಿ ಎಲ್ಲವನ್ನ ಮುಗಿಸಿಬಿಡುತ್ತದೆ. ಹೌದು ಸ್ನೇಹಿತೆಯರ ಜೊತೆ ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್ 6ರಂದು ನಿಧನ ಹೊಂದಿದ್ದರು. ನಂತರ ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಮೃತದೇಹವನ್ನು ಕಾರ್ಗೊ ಮೂಲಕ ಬೆಂಗಳೂರಿಗೆ ತಂದು ಈಡಿಗ ಸಂಪ್ರದಾಯ ಪ್ರಕಾರ ಸ್ಪಂದನ ಅಂತಿಮ ವಿಧಿ ವಿಧಾನಗಳನ್ನು ಪ್ರಣವಾನಂದ ಸ್ವಾಮಿಗಳ ನೇತೃತ್ವದಲ್ಲಿ ಕುಟುಂಬಸ್ಥರು ನೆರವೇರಿಸಿದ್ರು.

WhatsApp Group Join Now
Telegram Group Join Now

ಇನ್ನು ವಿಜಯ್ ರಾಘವೇಂದ್ರ ಅವರೇ ಕೈಗೆ ಬಳೆ ತೊಡಿಸಿ ಹಣೆಗೆ ತಿಲಕವಿಟ್ಟು ಅಲಂಕಾರ ಮಾಡಿ ಮಲಗಿಸಿದ್ದರು. ಆ ಒಂದು ಕ್ಷಣ ನಿಜಕ್ಕೂ ಯಾರಿಗೂ ಬೇಡ. ಸದ್ಯ ಈಗ ಸ್ಪಂದನ ಅವ್ರು ಇನ್ನಿಲ್ಲವಾಗಿ ಹತ್ತಿರ ಹತ್ತಿರ ಒಂದು ತಿಂಗಳು ಆಗುತ್ತಿದ್ದೂ, ಇದೀಗ ಚಿನ್ನಾರಿ ಮುತ್ತ ಸಿನಿಮಾಗಳತ್ತ ಮುಖ ಮಾಡಿದ್ದು ಕೆಲವೊಂದು ಸುದ್ದಿ ವಾಹಿನಿಗಳ ಸಂದರ್ಶನದಲ್ಲೂ ಕೂಡ ಭಾಗಿಯಾಗಿದ್ದಾರೆ. ಈ ಸಮಯದಲ್ಲಿ ಮಗ ಶೌರ್ಯ ನ ಸ್ಥಿತಿ ಹಾಗೂ ಮಾಡದಿಯನ್ನ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಹೌದು ವಿಜಯ್ ರಾಘವೇಂದ್ರ ಜೀವನವೇ ಮಡದಿ ಆಗಿದ್ರು. ಪತ್ನಿ ಇಲ್ಲದೆ ಯಾವ ಕೆಲ್ಸವು ಮಾಡದೆ ಇದ್ದ ರಾಘು ಗೆ ಆ ಒಂದು ದಿನ ಬರಸಿಡಿಲಿಂನಂತೆ ಸ್ಪಂದನ ಸಾವು ಆಕಾಶವೇ ಕಳಚಿ ಬಿದ್ದಂತಾಯಿತು. ಅಂದಿನಿಂದ ರಾಘುಗೆ ಜೀವನವೇ ಸಾಕು ಅನ್ನೋ ನಿರಾಸಕ್ತಿ ಮೂಡುತ್ತೆ. ಆದರೆ ಮಗ ಶೌರ್ಯನಿಗಾಗಿ ಎಲ್ಲವನ್ನು ಸಹಿಸಿಕೊಂಡು ರಘು ಇಂದಿಗೂ ಕೂಡ ಮಗನ ಮುಂದೆ ಖುಷಿ ಖುಷಿಯಾಗಿಯೇ ಜೀವನವನ್ನು ನಡೆಸುತ್ತಿದ್ದಾರೆ. ಆದ್ರೆ ಮಡದಿಯ ಸಾವಿನ ನೋವು ಯಂತವರನ್ನಾದರೂ ಕೂಡ ಬಾಧಿಸದೆ ಇರೋದಿಲ್ಲ ಅನ್ನೋದಕ್ಕೆ ರಾಘು ಸಂದರ್ಶನ ಒಂದರಲ್ಲಿ ಹಾಕಿದ ಕಣ್ಣೀರೆ ಸಾಕ್ಷಿ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಅಂದ್ರೆ ಏನ್ ಮಾಡ್ಬೇಕು? ಹಣ ಬಂದಿದ್ಯ ಇಲ್ವಾ ಅಂತ ಚೆಕ್ ಮಾಡೋದು ಹೇಗೆ?

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಸಂದರ್ಶನದಲ್ಲಿ ಸ್ಪಂದನ ನೆನೆದು ಬಿಕ್ಕಿ ಬಿಕ್ಕಿ ಅತ್ತ ರಾಘು

ಹೌದು ಮೊನ್ನೆ ಅಷ್ಟೇ ರಾಘು ತಮ್ಮ ಮುಂದಿನ ಸಿನಿಮಾದ ಪ್ರಮೋಷನ್ಗಾಗಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದರು ಆ ಕಾರ್ಯಕ್ರಮದಲ್ಲೂ ಕೂಡ ಮಡದಿಯನ್ನು ನೆನೆಸಿಕೊಂಡು ಅತ್ತಿದ್ರು ಅದಾದ ನಂತರ ಒಂದೊಂದೇ ವಾಹಿನಿಯ ಸಂದರ್ಶನದಲ್ಲಿ ರಾಘು ಭಾಗಿಯಾಗ್ತಿದ್ರು. ಹೀಗೆ ಒಂದು ವಾಹಿನಿಯ ಸಂದರ್ಶನದಲ್ಲಿ ರಾಘು ಮಡದಿಯ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಹೌದು ಕದ್ದ ಸಿನಿಮಾಕ್ಕೆ ಬೇಕಾಗಿರ್ತಕಂತ ಕಾಸ್ಟ್ಯೂಮ್ ಡಿಸೈನ್ ನನ್ನ ಮಡದಿ ಸ್ಪಂದನ ಅವರೇ ಮಾಡಿದ್ರಂತೆ. ಅದನ್ನ ನೆನೆಸಿಕೊಂಡು ರಾಘು ಅಕ್ಷರ ಸಹ ಕಣ್ಣೀರಿಟ್ಟಿದ್ದರು. ಅಲ್ಲದೆ ಮಗ ಕೂಡ ಅಮ್ಮನನ್ನ ನೆನೆಸಿಕೊಳ್ಳುತ್ತಿರುತ್ತಾನೆ ಅಂತ ಹೇಳಿಕೊಂಡು ಬಹಳ ಅತ್ತಿದ್ದಾರೆ.

ಹೌದು ಸ್ಪಂದನ ಬಗ್ಗೆ ಆಗಲಿ ಮಗ ಶೌರ್ಯನ ಬಗ್ಗೆ ಆಗಲಿ ಎಲ್ಲೂ ಕೂಡ ಸಂದರ್ಶಕರು ಕೇಳಿಲ್ಲ. ಆದರೆ ಕದ್ದ ಸಿನಿಮಾದ ಬಗ್ಗೆ ಮಾತನಾಡುವಾಗ ಸ್ಪಂದನವರ ನೆನಪು ಬಂದಿದೆ. ಸ್ಪಂದನ ಅವರು ಕದ್ದ ಸಿನಿಮಾಗಾಗಿ ರಾಘು ಹಾಕೊಂಡಿದ್ದಂತ ಪ್ರತಿಯೊಂದು ಬಟ್ಟೆಗೂ ಕೂಡ ಅವರೇ ಡಿಸೈನ್ ಮಾಡಿದ್ರಂತೆ. ರಾಘು ಕ್ಯಾಸ್ಟ್ಯುಂ ಹೀಗೆ ಇರಬೇಕು ಅಂತ ಸ್ಪಂದನ ಅವರೇ ಮುಂದೆ ನಿಂತು ಎಲ್ಲವನ್ನ ತಯಾರಿ ಮಾಡ್ತಿದ್ರಂತೆ ಇದನ್ನು ನೆನೆಸಿಕೊಂಡು ರಾಘು ಅಕ್ಷರ ಸಹ ಮಗುವಿನಂತೆ ಅತ್ತಿದ್ದಾರೆ. ಅಲ್ದೆ ಮಗನನ್ನ ಇಂಡಸ್ಟ್ರಿಗೆ ತರಬೇಕು ಜೊತೆಗೆ ಅದಕ್ಕೆ ನಿರ್ದೇಶನವನ್ನ ನಾನೇ ಮಾಡಬೇಕು ಅನ್ನೋ ಆಸೆಗಳನ್ನು ಇಟ್ಟುಕೊಂಡಿದ್ಲು ಆದ್ರೆ ಇದೆಲ್ಲವೂ ನೆರವೇರುವ ಮುಂಚಿಯೇ ಸ್ಪಂದನ ಇಲ್ಲವಾಗಿದ್ದು, ಬಹಳ ನೋವನ್ನು ಉಂಟು ಮಾಡುತ್ತದೆ. ನಾನು ಅಪ್ಪ ಅಮ್ಮನ ಮುಂದೆ ಅತ್ರೆ ಅಪ್ಪ ಅಮ್ಮನಿಗೆ ನೋವಾಗುತ್ತೆ, ನನ್ನ ಮಗನ ಜೀವನ ಹೀಗಾಗೊಯ್ತಲ್ಲ ಅಂತ ಯೋಚನೆ ಮಾಡುತ್ತಾರೆ. ಮಗನ ಮುಂದೆ ಅಂತೂ ಅಳುವಂತೆಯೇ ಇಲ್ಲ.

ಹೀಗಾಗಿ ರೂಮಲ್ಲಿ ಒಬ್ಬನೇ ಇದ್ದಾಗ ಅಥವಾ ಬಾತ್ರೂಮ್ ನಲ್ಲೂ ಕೂಡ ನಾನು ಒಂಟಿಯಾಗಿ ಕುಳಿತು ಅತ್ತಿದ್ದೇನೆ ಅಂತ ರಾಘು ಕಣ್ಣೀರಿಡುತ್ತಾ ಎಲ್ಲವನ್ನು ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೇನು ಕೆಲವೇ ದಿನಗಳಲ್ಲಿ ಡಿಕೆಡಿ ವೇದಿಕೆಯಲ್ಲೂ ಕೂಡ ಕಾಣಿಸಿಕೊಳ್ಳುವುದಾಗಿ ರಾಘು ಹೇಳಿದ್ದು ಎಲ್ಲ ನೋವಿನಿಂದ ಹೊರಗಡೆ ಬರೋದಾಗಿಯೂ ಕೂಡ ಭರವಸೆಯನ್ನು ಕೊಟ್ಟಿದ್ದಾರೆ. ಜೊತೆಗೆ ಸ್ಪಂದನಗೆ ನಾನು ಅಳೋದು ಇಷ್ಟವಿಲ್ಲ ಹಾಗಾಗಿ ಇನ್ಯಾವತ್ತೂ ನಾನು ಅಳೋದಿಲ್ಲ ಅನ್ನುವ ಮಾತುಗಳನ್ನು ಕೂಡ ಚಿನ್ನಾರಿ ಮುತ್ತ ಹೇಳಿದ್ದಾರೆ. ಒಟ್ಟಿನಲ್ಲಿ ಮೊದಲ ಬಾರಿಗೆ ಪತ್ನಿಯನ್ನ ನೆನೆದು ಬಹಿರಂಗವಾಗಿ ನಮ್ಮ ಚಿನ್ನಾರಿ ಮುತ್ತ ಮಗುವಿನಂತೆ ಅತ್ತಿದ್ದು ಮಾತ್ರ ಯಾರಿಗೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಇದನ್ನೂ ಓದಿ: ಅಪಹರಣವಾದ ಟಿಕ್ ಟಾಕ್ ಸ್ಟಾರ್ ಶವವಾಗಿ ಪತ್ತೆ; ಸ್ಮೈಲಿ ನವೀನ್ ನಾಲೆಯಲ್ಲಿ ಶವವಾಗಿ ಪತ್ತೆ!ಕೊಲೆಗೆ ಕಾರಣ ಏನ್ ಗೊತ್ತಾ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram