ಮಡದಿಯ ತ್ಯಾಗವನ್ನ ನೆನೆದು ಅತ್ತಿದ್ದ ಚಿನ್ನಾರಿ ಮುತ್ತ! ಸೋಲಿನಲ್ಲಿ ಜೊತೆಯಾಗಿದ್ದ ಪತ್ನಿಯ ತ್ಯಾಗ ನೆನೆದು ಮಗುವಿನಂತೆ ಅತ್ತಿದ್ರು..

ರಾಷ್ಟ್ರ ಪ್ರಶಸ್ತಿ ವಿಜೇಯತ ನಟ ರಾಘವೇಂದ್ರ ರಾಜ್ ಕುಮಾರ ಬಾಳಲ್ಲಿ ವಿಧಿ ಘನ ಘೋರ ಆಟವಾಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಮಡದಿಯ ಪ್ರಾಣ ಪಕ್ಷಿಯೇ ಇದೀಗ ಹಾರಿ ಹೋಗಿದ್ದು ವಿದೇಶಿ ಪ್ರವಾಸಕ್ಕೆ ಹೋಗಿದ್ದ ಚಿನ್ನಾರಿ ಮುತ್ತನಿಗೆ ಆಘಾತ ಎದುರಾಗಿದೆ. ಪತ್ನಿಯ ಪ್ರಾಣ ಪರ ಲೋಕವನ್ನ ತಲುಪಿದ್ದು ಆಕಾಶವೇ ಕಳಚಿ ತಲೆಯ ಮೇಲೆ ಬಿದಿದ್ದೆ. ಹೆಂಡತಿ ಅಂದ್ರೆ ಪ್ರಾಣ ಪತ್ನಿಯೇ ಎಲ್ಲಾ ಅಂತ ಜೀವನ ಸಾಗಿಸುತ್ತಿದ್ದ ಚಿನ್ನಾರಿ ಮುತ್ತನಿಗೆ ಇದು ನುಂಗಲರದ ತುತ್ತು. ಹೌದು ವಿಜಯ್‌ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತವಾಗಿದೆ. ಅಪ್ಪು ನಿಧನದ ಶಾಕ್‌ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್‌ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್‌ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ. 

WhatsApp Group Join Now
Telegram Group Join Now

ಇಂದು ಬೆಂಗಳೂರಿಗೆ ವಿಜಯ್‌ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್‌ ಪೊಲೀಸ್‌ ಆಫೀಸರ್‌ ಬಿ.ಕೆ ಶಿವರಾಮ್‌ ಅವರ ಪುತ್ರಿ ಸ್ಪಂದನಾ ಅವರು ವಿಜಯ್‌ 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಓರ್ವ ಮಗನಿದ್ದಾನೆ. ಆದ್ರೆ ಇಂದು ಸ್ಪಂದನ ಇಲ್ಲ ಪತ್ನಿಯೇ ಎಲ್ಲಾ ಅನ್ನುವ ರಾಘವೇಂದ್ರರಿಗೆ ಇಂದು ಪತ್ನಿ ಇಲ್ಲದನ್ನ ಅರಗಿಸಿಕೊಳ್ಳಲು ಆಗ್ತಿಲ್ಲ. ಹೀಗೆ ಹಿಂದೊಮ್ಮೆ ಪತ್ನಿಯನ್ನ ನೆನೆದು ಪತ್ನಿಯು ತನಗಾಗಿ ತ್ಯಾಗ ಮಾಡಿದ್ದನ್ನ ಹೇಳಿಕೊಂಡು ಮಗುವಿನಂತೆ ಅತ್ತಿದ್ರು.

ಇದನ್ನೂ ಓದಿ: ಹೇಗಿತ್ತು ಗೊತ್ತಾ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಲವ್ ಸ್ಟೋರಿ! ಚಿನ್ನಾರಿ ಮುತ್ತನ ಜೀವನದಲ್ಲಿ ವಿಧಿಯ ಘೋರ ಆಟ

ಡಿಕೆಡಿ ವೇದಿಕೆಯಲ್ಲಿ ಕಣ್ಣಿರಿಟ್ಟಿದ್ದ ವಿಜಯ್ ರಾಘವೇಂದ್ರ

ಹೌದು ವಿಜಯ್ ರಾಘವೇಂದ್ರ ಅವ್ರಿಗೆ ಮೊದಲ ಬಾರಿ ಸ್ಪಂದನಾ ಅವ್ರು ಕಂಡಾಗಳೇ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. ಮೊದಲ ನೋಟಕ್ಕೆ ಕ್ಲೀನ್ ಬೋರ್ಡ್ ಆಗಿ ಹೋಗಿದ್ರು. ಅದರಲ್ಲೂ ನಿನಗಾಗಿ ಸಿನಿಮಾ ಮಾಡುವಾಗ ಮಂಗಳೂರಿನ ಹುಡುಗಿಯೇ ಬೇಕು ಎಂದು ವಿಜಯ್‌ಗೆ ಅನಿಸಿತ್ತು. ಆದ್ರೆ ಬೆಳ್ತಂಗಡಿಯ ಹುಡುಗಿ ಸ್ಪಂದನಾ ಅವರನ್ನ ನೋಡಿ ವಿಜಯ್ ಬೋಲ್ಡ್ ಆಗಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಎರಡು ಕುಟುಂಬದ ಒಪ್ಪಿಗೆ ಪಡೆದು 2007ರಲ್ಲಿ ವೈವಾಹಿಕ ಜೀವನಕ್ಕೆ ವಿಜಯ್- ಸ್ಪಂದನಾ ಕಾಲಿಟ್ಟಿದ್ದರು. ಇನ್ನು ಪತ್ನಿಯನ್ನ ಹೀಗೆ ನೋಡಿಕೊಳ್ಳಬೇಕು ಆಗೇ ನೋಡಿಕೊಳ್ಳಬೇಕು ಸ್ವಲ್ಪ ನೋವಿಲ್ಲದ ಆಗೇ ನೋಡಿಕೊಳ್ಳಬೇಕು ಅಂದುಕೊಂಡಿದ್ರು ಅದರಂತೆ ಮಡದಿಯ ಮೇಲೆ ಬಹಳ ಅಟ್ಯಾಚ್ಮೆಂಟ್ ಇಟ್ಟುಕೊಂಡಿದ್ರು…

ಬಿಗ್ ಬಾಸ್ ಮನೆಯಲ್ಲೂ ಕೂಡ ಇದು ಅನಾವರಣಗೊಂಡಿತ್ತು. ಪತ್ನಿಯನ್ನ ಒಮ್ಮೆ ನೋಡಬೇಕು ಕರೆಸಿ ಅಂತ ಬಿಗ್ ಬಾಸ್ ಮುಂದೆ ಮಗುವಿನಂತೆ ಬೇಡಿಕೊಂಡಿದ್ರು. ಅಲ್ದೆ ಹಿಂದೊಮ್ಮೆ ಡಿ ಕೆ ಡಿ ವೇದಿಕೆಯಲ್ಲಿಯೂ ಸಹ ಬರ್ತ್ ಡೇ ಸೆಲೆಬ್ರೇಷನ್ ನಲ್ಲಿ ಪತ್ನಿ ಹಾಗು ಮಗ ಸರ್ಪ್ರೈಸ್ ವಿಸಿಟ್ ನೋಡಿ ಕಣ್ಣೀರು ಇಟ್ಟಿದ್ರು. ಹೌದು ಡಿಕೆಡಿ ವೇದಿಕೆಯಲ್ಲಿ ಚಿನ್ನಾರಿ ಮುತ್ತನ ಬರ್ತ್ಡೇ ಆಚರಿಸಲಾಗಿತ್ತು. ಆಗ ಪತ್ನಿ ಸ್ಪಂದನ ಹಾಗೂ ಮಗ ಶೌರ್ಯ ನ ಎಂಟ್ರಿ ಆಗುತ್ತೆ. ಆಗ ರಾಘವೇಂದ್ರ ಬಹಳ ಭಾವುಕರಾಗುತ್ತಾರೆ.

ಒಂದು ಕಾಲದಲ್ಲಿ ವಿಜಯ ರಾಘವೇಂದ್ರ ಅವ್ರ ಎಲ್ಲಾ ಸಿನಿಮಾಗಳು ಕೂಡ ಪ್ಲಾಫ್ ಆಗ್ತಿರುತ್ತೆ ಹೇಳಿಕೊಳ್ಳುವ ಯಶಸ್ಸು ಸಿಗೋದಿಲ್ಲ. ಅದ್ರಿಂದ ಚಿನ್ನಾರಿ ಮುತ್ತ ಬಹಳ ಕುಗ್ಗಿ ಹೋಗಿರುತ್ತಾರೆ. ಯಾಕಪ್ಪ ಈ ಜೀವನ ಹಿಂಗೇ ಅಂತ ಯೋಚ್ನೆ ಮಾಡ್ತಾ ತಲೆ ಮೇಲೆ ಕೈ ಹೊತ್ತು ಕೂತಾಗ ಜೊತೆಯಾಗಿ ನಿಂತು ಧೈರ್ಯ ತುಂಬಿದ್ದು ಮತ್ಯಾರು ಅಲ್ಲ ವಿಜಯ್ ಪತ್ನಿ ಸ್ಪಂದನ ಅವ್ರು. ವಿಜಯ್ ಸೋತಾಗ ಜೊತೆ ನಿಂತು ನಿನ್ನಿಂದ ಆಗುತ್ತೆ ಒಂದಲ್ಲ ಒಂದು ಗೆಲ್ತಿಯ ಅಂತ ಹುರಿದುಂಬಿಸಿ ರಘು ಜೊತೆಯಾಗಿದ್ರು. ಆಗ ಪತ್ನಿ ಮಾಡಿದ ತ್ಯಾಗ ಹೊಂದಾಣಿಕೆ ಎಲವೂ ಕೂಡ ನಿಜಕ್ಕೂ ಕೂಡ ದೊಡ್ಡದು ಅದೆಲ್ಲವನ್ನ ಈಗ ನೆನಸಿಕೊಂಡು ವಿಜಯ್ ಡಿಕೆಡಿ ವೇದಿಕೆಯಲ್ಲಿ ಮಗುವಿನಂತೆ ಅತ್ತಿದ್ರು. ಪತ್ನಿಯನ್ನ ಬಹಳ ಪ್ರೀತಿಸಿ ಪೂಜಿಸುತ್ತಿದ್ದ ರಘು ಇಂದು ಮಾಡದಿಯಿಲ್ಲದೇ ಕಣ್ಣೀರು ಇಡುತ್ತಿದ್ದಾರೆ.

ಇದನ್ನೂ ಓದಿ: ತುಳಸಿ- ಮಾಧವ್ ಮದುವೆಯನ್ನು ಮುಂದೆ ನಿಂತು ಮಾಡಿದ ದತ್ತು! ಮುಂದೆ ಇದೇ ದೊಡ್ಡ ಟ್ವಿಸ್ಟ್ 

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram