Vinod Raj: ಒಂದು ಸತ್ಯವನ್ನು ಒಪ್ಪಿಕೊಂಡದ್ದಕ್ಕೆ ಅಮ್ಮ-ಮಗನಿಗೆ ಧನ್ಯವಾದಗಳು. ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್

ಹೌದು ನಿಮ್ಮೆಲ್ಲರಿಗೂ ಗೊತ್ತಿರುವ ಆಗೇ ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್‌ ಬುಕ್‌ ಪೋಸ್ಟ್‌ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಯನ್ನ ಬಹಿರಂಗ ಪಡಿಸಿದ ಬಳಿಕ ಲೀಲಾವತಿ ಮತ್ತು ವಿನೋದ್‌ ರಾಜ್ ಸಂದರ್ಶನ ನೀಡಿದ್ದಾರೆ. ಇದಕ್ಕೆ ಇದೀಗ ಮತ್ತೆ ನಿರ್ದೇಶಕರಿಗೆ ಟಾಂಗ್ ಕೊಟ್ಟಿದ್ದರು.. ಸಂದರ್ಶನ ದಲ್ಲಿ ‘’ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದರು ಅಲ್ಲದೆ ಸಾಕಷ್ಟು ಪ್ರಶ್ನೆ ಗಳನ್ನ ಕೇಳಿ ಸ್ವರ್ಗ ನರಕದ ಮಾತುಗಳನ್ನು ಮಾತಾಡಿದ್ರು ಇದೀಗ ಇದಕ್ಕೆ ಉತ್ತರ ಎಂಬಂತೆ ಮತ್ತೊಂದು ಪೋಸ್ಟ್ ನ್ನ ಪ್ರಕಾಶ್ ಹಂಚಿಕೊಂಡಿದ್ದಾರೆ..

WhatsApp Group Join Now
Telegram Group Join Now

ದಿವಂಗತ ಡಾ. ರಾಜ್ ಕುಮಾರ್ ಅವರ ಆಪ್ತ ಹಾಗೂ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಮತ್ತೆ ಪೋಸ್ಟ್ ಒಂದನ್ನ ಹಂಚಿಕೊಂಡು ವಿನೋದ್ ರಾಜ್ ಅವ್ರ ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ.. ಅಲ್ಲದೆ ಮತ್ತೊಂದು ಸತ್ಯವನ್ನು ಒಪ್ಪಿಕೊಂಡ್ರೆ ಸ್ವರ್ಗಕ್ಕೆ ಹೋಗ್ತೀರಾ ಅಂತಲೂ ಹೇಳಿದ್ದಾರೆ. ಹಾಗಾದ್ರೆ ಮತ್ತೆ ವಾದ ವಿವಾದ ಶುರುವಾಯ್ತ ನೋಡೋಣ ಬನ್ನಿ..

ಹೌದು ಪ್ರಕಾಶ್ ರಾಜ್ ಮೇಹು ಅವರ ಫೇಸ್‌ ಬುಕ್‌ ಪೋಸ್ಟ್‌ ಮೂಲಕ ‘ವಿನೋದ್ ರಾಜ್ ಮದುವೆ’ ಸಂಗತಿ ಬಹಿರಂಗ ಪಡಿಸಿದ್ರು ಬಳಿಕ ಲೀಲಾವತಿ ಮತ್ತು ವಿನೋದ್‌ ರಾಜ್ ಸಂದರ್ಶನ ಒಂದರಲ್ಲಿ ಮಾತನಾಡಿ ನನ್ನ ಮಗನಿಗೆ ಮದುವೆಯಾಗಿರೋದು ನಿಜ’’ ಎಂದು ಲೀಲಾವತಿ ಒಪ್ಪಿಕೊಂಡಿದ್ದರು. ಅಲ್ಲದೆ ಸ್ವರ್ಗ ನರಕದ ಮಾತುಗಳನ್ನ ಆಡಿ ಅನುಕಂಪ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ರೂ ಆದ್ರೆ ಈಗ ಅದಕ್ಕೂ ನಿರ್ದೇಶಕ ತಣ್ಣೀರು ಎರೆಚಿದ್ದಾರೆ..

ಮಗನ ಮದುವೆ ಬಗ್ಗೆ ಲೀಲಾವತಿ ಹೇಳಿದ್ದೇನು?

ಸಂದರ್ಶನ ದಲ್ಲಿ ಮಾತಾನಾಡಿದ ಲೀಲಾವತಿ ಯವರು ಯಾವ ತಾಯಿಯೂ ಮಗನ ಭವಿಷ್ಯಕ್ಕೆ ಒಳ್ಳೆಯದಾಗ ಬಾರದು ಅಂತ ಹೇಳಲ್ಲ. ಮಗನಿಗೆ ಮದುವೆ ಮಾಡಿದ್ದೀನಿ. ಯಾಕೆ ಹೇಳಲಿಲ್ಲ ಅಂದ್ರೆ, ಎಂತೆಂಥವರ ಮದುವೆಯೆಲ್ಲಾ ಆ ಹಾಲ್‌ನಲ್ಲಿ, ಈ ಹಾಲ್‌ನಲ್ಲಿ, ಪ್ಯಾಲೇಸ್‌ನಲ್ಲಿ ಮಾಡಿದ್ದಾರೆ. ನನಗೆ ಅವತ್ತು ಆ ಚೈತನ್ಯ ಇರಲಿಲ್ಲ. ಅದನ್ನ ರಹಸ್ಯ ವಾಗಿ ಇಡೋದೇ ಒಳ್ಳೆಯದ್ದು ಅಂತ ನನಗೆ ಅನಿಸಿತು’’ ಆಗ ಬರೀ 7 ಜನ ಕನ್ನಡಿಗರು ಮಾತ್ರ ಮದುವೆ ನೋಡಿದರು. ‘ಏನು ಲೀಲಾವತಿ ಅವರೇ.. ನಿಮ್ಮ ಮಗನ ಮದುವೆಗೆ ಬರೀ 7 ಜನ ಕನ್ನಡಿಗರು ಬಂದಿದ್ದಾರೆ. ಜನ ಸಿಗಲಿಲ್ವಾ ನಿಮಗೆ’ ಅಂತ ಕೇಳಿದರು. ನಾನು ಅದಕ್ಕೆ ಉತ್ತರ ಕೊಡಲಿಲ್ಲ. ಉತ್ತರ ಕೊಟ್ಟರೆ ಇನ್ನೂ ನೂರೆಂಟು ಬರುತ್ತೆ ಅಂತ’’ ಸುಮ್ಮನ್ನಾದೆ ಅಷ್ಟೇ.

‘’ನನ್ನ ಸೊಸೆ, ಮೊಮ್ಮಗ ಚೆನ್ನಾಗಿದ್ದಾರೆ. ಚಿನ್ನದ ಹಾಗೆ ಇದ್ದಾರೆ ಅವರು. ಅಲ್ಲಿ ಅಂದ್ರೆ ಚೆನ್ನೈ ನಲ್ಲಿ ಬಂಗಲೆ ಇದೆ. ಸಕಲ ಸೌಕರ್ಯ ಇದೆ’’ ಅಂತ ಬಹಳ ಖುಷಿ ಯಿಂದಲೇ ಸೊಸೆ ಮಾತು ಮೊಮ್ಮಗನ ಬಗ್ಗೆ ಹೇಳಿಕೊಂಡ್ರು. ಅಲ್ಲದೆ ನಮ್ಮ ಅಂತರಂಗದ ಸುದ್ದಿಯನ್ನ ಯಾಕೆ ಕೆದಕುತ್ತಿದ್ದಾರೆ. ನನ್ನ ಆತ್ಮಸಾಕ್ಷಿಗೆ ನಾನು ಕರೆಕ್ಟಾಗಿ ನಡೆದುಕೊಂಡಿದ್ದೇನೆ. ನನಗೆ ನೋವುಂಟು ಮಾಡುವವರು ನರಕದಲ್ಲಿ ಬೀಳ್ತಾರೆ. 650 ಸಿನಿಮಾ ಗಳಲ್ಲಿ ನಾನು ನಟಿಸಿದ್ದೇನೆ. ನನ್ನ ಮಗನ ಮದುವೆ ಯನ್ನ ವಿಜೃಂಭಣೆ ಯಿಂದ ಮಾಡಲು ಆಗಲಿಲ್ಲವೇ ಅಂತ ನನಗೆ ಅನಿಸಿತ್ತು’’ ಹಾಗಾಗಿ ಸತ್ಯ ಮುಚ್ಚಿಟ್ಟೆ ಎಂದು ಸಂದರ್ಶನ ದಲ್ಲಿ ಲೀಲಾವತಿ ಹೇಳಿದ್ರು.

ಇದನ್ನು ಓದಿ: ಯಾರಿದು ಈ ಮಲ್ಲಿಕಾರ್ಜುನ ಮುತ್ಯ ಇವರು ದೇವರಂತೆ ನಿಜಾನಾ!?

ನಂತರ ಮಾತಾನಾಡಿದ ವಿನೋದ್ ರಾಜ್,‘ ’ಇಳಿವಯಸ್ಸಿ ನಲ್ಲಿ ಅಮ್ಮ ನನ್ನ ನೆಮ್ಮದಿಯಾಗಿ ಇರೋಕೆ  ಬಿಡಿ. ಅಮ್ಮ ಕರ್ನಾಟಕದ ಆಸ್ತಿ’’ ಅಂತ ಹೇಳುದ್ರು.. ಸಾಲದಕ್ಕೆ ನಮ್ಮ ಸುದ್ದಿಗೆ ಬಂದರೆ ಚೆನ್ನಾಗಿರೋದಿಲ್ಲ ರಾಜ್ ಅವ್ರ ಅಭಿಮಾನಿಗಳಿಗೆ ನಾವೇನು ಅಂತ ಗೊತ್ತು ಅದನ್ನ ತಿರುಚುವ ಅಗತ್ಯ ಇಲ್ಲ ಅವ್ರು ಅದನ್ನ ನಂಬೋದು ಇಲ್ಲ. ನಾನು ಭಯೋತ್ಪಾದನೆ ಮಾಡಿಲ್ಲ ಸ್ವಾಮಿ ಮದುವೆ ಆಗಿದ್ದೀನಿ ಅದನ್ನ ಇಷ್ಟು ದೊಡ್ಡದಾಗಿ ಹೇಳುವಂತದ್ದು ಏನಿತ್ತು, ನಮ್ಮ ಮೇಲೆ ದ್ವೇಷ ಸಾಧಿಸೋ ನೀವು ಸೈತಾನ ಇದ್ದಹಾಂಗೆ ನೀವು ನರಕಕ್ಕೆ ಹೋಗೋದು ಅಂತ ಬಹಳ ಖಾರವಾಗಿಯೇ ಮಾತನಾಡಿದ್ರು.

ಇದೇ ಥರಾ ಇನ್ನೊಂದು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು ಟ್ವೀಟ್

ಇನ್ನು ಇದೆಲ್ಲ ವನ್ನ ನೋಡಿದಂತಹ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಸುಮ್ಮನಿರಲು ಸಾಧ್ಯವೇ ಇಲ್ಲ ಬಿಡಿ ಅವ್ರು ಕೂಡ ಒಂದು ಒಳ್ಳೆ ಅವಕಾಶ ವನ್ನ ಬಳಸಿಕೊಂಡು ಲೀಲಾವತಿ ಅವ್ರ ಮೊಮ್ಮಗನ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುವುದರ ಜೊತೆಗೆ ಮತ್ತೊಂದು ಸವಾಲು ಕೂಡ ಹಾಕಿದ್ದಾರೆ.

ಹೌದು ಒಂದು ಸತ್ಯ ವನ್ನು ಒಪ್ಪಿ ಕೊಂಡದ್ದಕ್ಕೆ ಅಮ್ಮ- ಮಗನಿಗೆ ಧನ್ಯವಾದಗಳು. ಹಾಗೆ ಆ ಇನ್ನೊಂದು ಸತ್ಯ ವನ್ನೂ ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ, ಆ ಮಹಾಲಿಂಗ ಭಾಗವತರರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರೂ ಚಿಂತೆಯಿಲ್ಲ. “ಯುವರಾಜ” ನಿಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಬರೆದುಕೊಂಡು ಮತ್ತೆ ಸುದ್ದಿ ಯಲ್ಲಿದ್ದಾರೆ.. ಹೌದು ಸದಾ ಸಾಕ್ಷಿ ಸಮೇತ ಸತ್ಯ ವನ್ನ ಬಯಲಿಗೆಳೆಯುವ ಪ್ರಯತ್ನದಲ್ಲಿರುವ ಪ್ರಕಾಶ್ ಅವ್ರು ಇದೀಗ ಲೀಲಾವತಿ ಅವ್ರ ಕುಟುಂಬಕ್ಕೆ ಮತ್ತೆ ಸವಾಲು ಹಾಕಿ ಕಗ್ಗಂಟಾಗಿದ್ದಾರೆ.

ಇನ್ನು ನಿರ್ದೇಶಕ ಪೋಸ್ಟ್ ನೋಡ್ತಿದ್ದಂಗೆ ಅಭಿಮಾನಿ ಗಳು ರೊಚ್ಚಿ ಗೆದಿದ್ದು ಲೀಲಾವತಿ ಹಾಗೂ ವಿನೋದ್ ರಾಜ್ ಅವ್ರನ್ನ ಕಾಮೆಂಟ್ ನಲ್ಲಿಯೇ ತಾರಾಟೆಗೆ ತೆಗೆದು ಕೊಂಡಿದ್ದಾರೆ.. ಸಾಲದಕ್ಕೆ ರವಿಬೆಳೆಗೆರೆ ಅವ್ರ ಹೆಸರು ಕೂಡ ಬಂದಿದ್ದು ರಾಜ್ ಲೀಲಾ ವಿನೋದ ಪುಸ್ತಕದಲ್ಲಿ ಇರೋದೆಲ್ಲ ಸುಳ್ಳು ರವಿಬೆಳಗೆರೆ ಈಗ ನರಕದಲ್ಲೆ ಇರಬೇಕು ನೀವು ಅಲ್ಲೇ ಹೋಗ್ಬಿಡಿ ಅಂತಲೂ ಕಾಮೆಂಟ್ ಗಳನ್ನ ಮಾಡಳಾಗ್ತಿದೆ.

ಒಟ್ಟಿ ನಲ್ಲಿ ಸತ್ಯ ವನ್ನ ಯಾವತ್ತೂ ಜಾಸ್ತಿ ದಿನ ಮುಚ್ಚಿಡೋಕೆ ಆಗೋಲ್ಲ ಅದು ಬೂದಿ ಮುಚ್ಚಿದ ಕೆಂಡದ ಹಾಗೆ ಯಾವಾಗ ಬೇಕಾದ್ರೂ ಜ್ವಾಲೆಯಾಗಿ ಹತ್ತಿಕೊಂಡು ಉರಿಯಬಹುದು ಅನ್ನೋದಕ್ಕೆ ಲೀಲಾವತಿ ಅವ್ರ ವಿಷಯಗಳೇ ಸಾಕ್ಷಿ ಅನ್ನಬಹುದು.. ಇದೀಗ ನಿರ್ದೇಶಕರ ಸವಾಲಿಗೆ ಅಮ್ಮ ಮಗ ಮತ್ಯಾವ ರೀತಿ ಉತ್ತರಿಸುತ್ತಾರೋ ಕಾದುನೋಡಬೇಕು.

ಇದನ್ನು ಓದಿ: ವಿನೋದ್ ರಾಜ್ ಹೆಂಡತಿ ಮತ್ತು ಮಗನ ಬಗ್ಗೆ ಮಾತಾಡಿದವರ ಚಳಿ ಬಿಡಿಸಿದ ಲೀಲಾವತಿ