ಪ್ರೇಯಸಿಗೆ ಅಂತ್ಯಕ್ರಿಯೆಗೆ ಬರುವಂತೆ ಹೇಳಿ ಲೈವ್ ನಲ್ಲೆ ಪ್ರಾಣ ಬಿಟ್ಟ ಯುವಕ! ಪೂರ್ತಿ ವಿಡಿಯೋ ಇಲ್ಲಿದೆ ನೋಡಿ

ಒಮೊಮ್ಮೆ ಸಾವು ಎಷ್ಟು ಘನಘೋರ ಎನಿಸಿಬಿಡುತ್ತದೆ. ಬದುಕಲು ಸಾವಿರ ಕನಸು ಕಂಡು ಪ್ರೀತಿಯ ಗೂಡು ಕಟ್ಟಿ ಅದ್ರಲ್ಲಿ ಒಂದಷ್ಟು ದಿನ ಬದುಕಬೇಕು ಅನ್ನೋವಾಗ್ಲೇ ವಿಧಿ ಆಟವಾಡಿದ್ರೆ ಯಪ್ಪಾ ಕನಸ್ಸಿನ ಕನ್ನಡಿಯ ಗೋಪುರ ಒಮ್ಮೆಲೇ ಛಿಧ್ರ ಛಿದ್ರವಾಗಿ ಬದುಕು ಇಷ್ಟೇನಾ??? ಎಲ್ಲವು ಶೂನ್ಯನ ಅನಿಸದೆ ಇರದು. ಹೌದು ಇಲ್ಲೊಬ್ಬ ಯುವಕ ಪ್ರೀತಿಸಿದಾಕೆಗೆ ಅಂತ್ಯಕ್ರಿಯೆಗೆ ಆಹ್ವಾನ ಕೊಟ್ಟು ಲೈವ್ ನಲ್ಲೆ ಪ್ರಾಣ ಬಿಟ್ಟಿದ್ದಾನೆ. ಹೌದು ವಿಡಿಯೋ ಮಾಡಿಸಿರೋ ಯುವಕ ತನ್ನ ಪ್ರಿಯತಮೆಗೆ ಸಾವಿನ ಮನೆ ತಲುಪಿರೋದಾಗಿ ಹೇಳಿಕೊಂಡು ತನ್ನ ಅಂತ್ಯ ಸಂಸ್ಕಾರಕ್ಕೆ ಬಂದು ಹೋಗು ಅಂತ ಬೇಡಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗ್ತಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ನಟಿ ಜಯಪ್ರದಾ ಅರೆಸ್ಟ್! 6 ತಿಂಗಳು ಜೈಲು ಶಿಕ್ಷೆ! ಕಾರಣವೇನು ಗೊತ್ತಾ?

ಸಾಯುವ ಕೊನೆಗಳಿಗೆಯಲ್ಲೂ ಪ್ರಿಯತಮೆಗೆ ಕೊನೆಯ ಮನವಿ

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಯುವಕನೊಬ್ಬ ವಿಧಿಯಿ ರೆಕಾರ್ಡ್ ಮಾಡಿಸಿ ಪ್ರಿಯತಮೆಗೆ ತನ್ನ ಸಾವಿಗೆ ಅಹ್ವಾನ ನೀಡಿದ್ದು, ಆಗಿಯೇ ಸಾವನ್ನಪ್ಪಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 22ವರ್ಷದ ಯುವಕ ಕಿರಣ್ ಮೃತ ದುರ್ದೈವಯಾಗಿದ್ದು, ಪ್ರಿಯತಮೇಯ ಬಳಿ ಅಂಗಲಾಚಿ ಕೊನೆಯ ಬಾರಿಗೆ ಬೇಡಿಕೊಂಡಿದ್ದಾನೆ. ಹೌದು ಮೃತ ಯುವಕ ಕಿರಣ್ ತನ್ನ ಸಾವಿನ ಕೊನೆ ಗಳಿಗೆಯಲ್ಲೂ ಕೂಡ ತಾನು ಪ್ರೀತಿಸಿದ ಹುಡುಗಿಯನ್ನ ನೆನಸಿಕೊಂಡು ಅಳುತ್ತ ಪ್ರೀತಿಯಿಂದಲೇ ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಕೇಳಿಕೊಂಡಿದ್ದಾನೆ. ಯುವಕ ಕಿರಣ್ ಲೈವ್ ವಿಡಿಯೋ ಮಾಡಿಸಿ ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ತನ್ನ ಪ್ರಿಯತಮೆಗೆ ಅಹ್ವಾನ ಕೊಟ್ಟಿದ್ದು, ವಿಡಿಯೋ ಮಾಡುತ್ತಿರುವಾಗಲೇ ಮೃತ ಪಟ್ಟಿದ್ದಾನೆ ಅಂತ ಹೇಳಲಾಗುತ್ತಿದೆ.

ಹಾಯ್ ಬಂಗಾರಿ, ನಾನು ಸಾಯುತ್ತಿದ್ದೀನಿ ಕಣೆ, ನಿಮ್ಮನ್ನೆಲ್ಲ ಬಿಟ್ಟು ಹೋಗ್ತಿದ್ದೀನಿ ಚಿನ್ನ, ನಿಮ್ಮ ಅಪ್ಪ ಹೇಳಿದ ಆಗೇ ಒಳ್ಳೆ ಹುಡುಗನ್ನ ನೋಡಿ ಮದುವೆ ಮಾಡ್ಕೋ ಆದ್ರೆ ಒಂದು ನಿನ್ನ ಮಗುಗೆ ನನ್ನ ಹೆಸರೇ ಇಡಬೇಕು ಆಯ್ತಾ!? ಇದು ನನ್ನ ಆಕಸ್ಮಿಕ ಸಾವು, ನೀನು ನನ್ನ ಅಂತ್ಯ ಸಂಸ್ಕಾರಕ್ಕೆ ಬರ್ಲೆ ಬೇಕು, ನಿನ್ನ ತಂಗಿನೂ ಕರೆದುಕೊಂಡು ಬಾ, ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗ್ಲಿ ಚೆನ್ನಾಗಿರು ಅಂತ ಹೇಳಿ ಯುವಕ ಪ್ರಾಣ ಬಿಟ್ಟಿದ್ದಾನೆ. ವಿಡಿಯೋ ಮಾಡುವಾಗ ಸಂಬಂಧಿ ಕೂಡ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ನಿಮಾನ್ಸ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಕಿರಣ್ ಏನೇನೋ ಹೇಳೋ ಆಸೆಯಲ್ಲಿ ಕಷ್ಟ ಪಟ್ಟು ಹೇಳ್ತಿದ್ದಾನೆ ಮತ್ತೊಬ್ಬ ಜೋರಾಗಿ ಅಳುತ್ತಾಲ್ಲೇ ಅದೆಲ್ಲವನ್ನ ವಿಡಿಯೋ ಮಾಡಿಕೊಂಡಿದ್ದಾನೆ. ಇನ್ನು ಕಿರಣ್ ಬೆಂಗಳೂರು ಗ್ರಾಮಾಂತರ ನೆಲಮಂಗಲ ತಾಲ್ಲೂಕಿನ ದಾಸೇನಹಳ್ಳಿ ನಿವಾಸಿ, ಈತ ಹೈಸ್ಕೂಲ್ ನಲ್ಲಿ ಇರುವಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಆ ಯುವತಿಗೆ ಈಗ ತನ್ನ ಸಾವಿಗೆ ಆಮಂತ್ರಣ ಕೊಟ್ಟು ಪ್ರಾಣ ಬಿಟ್ಟಿದ್ದಾನೆ. ಯುವತಿಯು ಕೂಡ ಇತನನ್ನ ಪ್ರೀತಿಸುತ್ತಿದ್ದಳು ಅಂತ ಹೇಳಲಾಗುತ್ತಿದ್ದೂ ಮೊನ್ನೆಯೆಷ್ಟೇ ಯುವತಿಯ ಹುಟ್ಟುಹಬ್ಬಕೆ ಕಾಲುಚೈನ್ ಹಾಗೂ ಉಂಗುರವನ್ನ ಉಡುಗೊರೆಯಾಗಿ ಕೊಟ್ಟಿದ್ದ ಅಂತಲೂ ಹೇಳಲಾಗುತ್ತಿದ್ದೂ,10ನೆ ತರಗತಿ ಓದು ಮುಗಿದ ನಂತರ ಕಿರಣ್ ಸಣ್ಣ ಪುಟ್ಟ ಕೆಲಸವನ್ನ ಮಾಡಿಕೊಂಡು ಇದಿದ್ದರಿಂದ ಯುವತಿಯ ಮನೆಯವರು ಯುವತಿಗೆ ಕಿರಣ್ ನನ್ನ ಬಿಟ್ಟು ಬಿಡುವಂತೆ ಹೇಳಿದ್ದಾರಂತೆ ಆದರೂ ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ರು ಅಲ್ದೆ ಸಿನಿಮಾ ಪಾರ್ಕ್ ಅಂತಲೂ ಓಡಾಡಿದ್ರು ಅಂತ ಹೇಳಲಾಗಿದೆ.

ಈ ಮಧ್ಯೆ ಕಿರಣ್ ಗೆ ನಾಯಿ ಕಚ್ಚಿದ ಆಗ ಚಿಕಿತ್ಸೆ ತೆಗೆದುಕೊಳ್ಳದ ಕಾರಣ ಈಗ ಅದ್ರಿಂದ ರೇಬಿಸ್ ಶುರುವಾಗಿದೆ ಹೀಗಾಗಿ ಆಸ್ಪತ್ರೆಗೆ ಕಿರಣ್ ನನ್ನ ದಾಖಲು ಮಾಡಲಾಗಿತ್ತು. ಹೌದು 2ತಿಂಗಳ ಹಿಂದೆ ಕಿರಣ್ ಗೆ ನಾಯಿ ಕಚ್ಚಿದೆ ಆಗ ಕಿರಣ್ ಯಾವುದೇ ಚಿಕಿತ್ಸೆ ತೆಗೆದುಕೊಂಡಿಲ್ಲ ಹೀಗಾಗಿ ಕಾಯಿಲೆ ಉಲ್ಬಾನಗೊಂದು ಕೊನೆಯುಸಿರು ಎಳೆದಿದ್ದು ಸಾಯುವ ಕೊನೆಗಳಿಗೆಯಲ್ಲೂ ಪ್ರೇಯಸಿಗಾಗಿ ಹಂಬಲಿಸಿದ್ದು ಮಾತ್ರ ಕರುಳು ಚುರ್ ಎನ್ನುವಂತಿತ್ತು.

ಇದನ್ನೂ ಓದಿ: ಮೋದಿ ಪ್ರಧಾನಿ ಆಗೋದು ಸಾಧ್ಯವಿಲ್ಲ! ಯಶ್ವಂತ ಗುರೂಜಿಗಳು ನುಡಿದಿದ್ದರೆ ಸ್ಪೋಟಕ ರಾಜಕೀಯ ಭವಿಷ್ಯ

ಇದನ್ನೂ ಓದಿ: ಇಂದು ಕರ್ನಾಟಕ ಮಾರುಕಟ್ಟೆಯಲ್ಲಿ ತರಕಾರಿಗಳ ದರ ಎಷ್ಟಾಗಿದೆ ನೋಡೋಣ ಬನ್ನಿ, ಮುಂದೆ ಓದಿ..

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram