Weekend With Ramesh: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ವೀಕೆಂಡ್ ವಿಥ್ ರಮೇಶ ನಲ್ಲಿ ಕಾಣಿಸಿಕೊಂಡ ನಟಿ ಮಾಳವಿಕಾ

ನಟಿ ಹಾಗೂ ರಾಜಕಾರಣಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ, ಸ್ವತಃ ಅವ್ರೆ ಈ ವಿಚಾರ ವನ್ನ ಸಾಮಾಜಿಕ ಜಾಲತಾಣ ದಲ್ಲಿ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಫೋಟೋ ವನ್ನು ಹಂಚಿಕೊಂಡು ತಮಗಿರುವ ಅರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ರು. ತಮ್ಮ ಆರೋಗ್ಯದ ಸಮಸ್ಯೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ ಮಾಳವಿಕ ಅವ್ರು ಒಂದು ಚಿಕ್ಕ ಎಚ್ಚರಿಕೆ ಯನ್ನು ಸಹ ಕೊಟ್ಟಿದ್ರು. ಸಮಸ್ಯೆ ಬಂದಾಗ ನಿರ್ಲಕ್ಷ್ಯ ಮಾಡಬೇಡಿ ಎಂದು ಫ್ಯಾನ್ಸ್‌ಗೆ ಸಲಹೆ ನೀಡಿದ್ರು. ಆಗ ಅಭಿಮಾನಿಗಳು ಸಹ ಬೇಗ ಗುಣಮುಖರಾಗಿ ಆಸ್ಪತ್ರೆ ಯಿಂದ ಹೊರಬನ್ನಿ ಅಂತ ಧೈರ್ಯ ತುಂಬುವ ಕೆಲಸ ಮಾಡಿದ್ರು. ಅದರಂತೆ ನಟಿ ಮಾಳಾವಿಕ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಆಗಿದ್ದು, ಇದೀಗ ದೊಡ್ಡ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಮಾಳವಿಕಾ ಅವಿನಾಶ್ ಸಂಪೂರ್ಣ ಗುಣಮುಖರಾದ್ರ, ಅವ್ರು ಭಾಗಿಯಾಗಿರುವ ಕಾರ್ಯಕ್ರಮ ಯಾವುದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾರಣ ಏನು ಎಲ್ಲವನ್ನ ನೋಡೋಣ ಬನ್ನಿ.

WhatsApp Group Join Now
Telegram Group Join Now

ಹಾಗಾದ್ರೆ ಸಂಪೂರ್ಣ ಗುಣಮುಖರಾದ್ರ ನಟಿ ಮಾಳವಿಕಾ!?

ಹೌದು ನಟಿ ಮಾಳವಿಕಾ ಅವ್ರು ಮೈಗ್ರೇನ್ ಸಮಸ್ಯೆ ಯಿಂದ ಬಳಲುತ್ತಿದ್ರು, ಆಗ ಸಣ್ಣ ತಲೆನೋವು ತಾನೇ ಬಿಡು ಹೋಗುತ್ತೆ ಅಂತ ನಿರ್ಲಕ್ಷ ಮಾಡಿದ್ದಾರೆ ಇದರಿಂದ ಅವ್ರಿಗೆ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಬಂತು, ಸಾಲದಕ್ಕೆ ಅವ್ರ ಮುಖ ಚಹರೆಯೇ ಬದಲ್ಲಾಗುವ ಮಟ್ಟಕ್ಕೆ ಮೈಗ್ರೆನ್ ಅವ್ರನ್ನ ತೆಗೆದುಕೊಂಡು ಹೋಗಿಬಿಟ್ಟಿತ್ತು. ಆಗಾಗಿ ಇದನ್ನು ಯಾರೂ ಹಗುರವಾಗಿ ಪರಿಗಣಿಸಬಾರದು, ಸುಮ್ಮನೆ ತಲೆ ನೋವು ಎಂದುಕೊಂಡರೆ ನನ್ನಂತೆ ಆಸ್ಪತ್ರೆಗೆ ಸೇರಬೇಕಾಹಗಬಹುದು ಇದು ನನ್ನ ಸಣ್ಣ ಎಚ್ಚರಿಕೆಯ ಸಂದೇಶ ಅಂತ ಫೋಟೋ ಸಮೇತ ಹಂಚಿಕೊಂಡಿದ್ರು.

ನಟಿ ಮಾಳಾವಿಕ ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಸೆಲ್ಫಿಯ ಜೊತೆಗೆ ತಮ್ಮ ಆರೋಗ್ಯ ಸ್ಥಿತಿಯ ಅಪ್‌ಡೇಟ್‌ ನೀಡಿ, ಅಭಿಮಾನಿಗಳಿಗೆ ಸಲಹೆ ನೀಡಿ ನನಂತೆ ಆಗ್ಬೇಡಿ ಅಂತ ಹೇಳಿದ್ರು. ಆಗಾಗ ಚೇತರಿಸಿಕೊಂಡಿರುವುದಾಗಿ ಮಾಹಿತಿ ನೀಡುತ್ತಿದ್ರು. ಇನ್ನು ಮಾಳಾವಿಕ ಅವ್ರು ಹಂಚಿಕೊಂಡಿದ್ದ ಫೋಟೋ ನೋಡ್ತಿದ್ರೆ, ಫೋಟೋದಲ್ಲಿರುವವರು ನಿಜವಾಗಿಯೂ ಮಾಳವಿಕಾ ಅವ್ರೇನಾ ಅಂತ ಅವ್ರ ಅಭಿಮಾನಿಗಳೇ ಅನುಮಾನಿಸುವಷ್ಟರ ಮಟ್ಟಿಗೆ ಮಾಳವಿಕಾ ಅವ್ರ ಮುಖ ಬದಲಾಗಿ ಹೋಗಿತ್ತು. ಇದನ್ನ ನೋಡಿದ ಮಾಳವಿಕ ಅವರ ಅಭಿಮಾನಿಗಳು ಒಂದು ಕ್ಷಣ ಆತಂಕಕ್ಕೆ ಈಡಾಗಿದ್ರು. ಹೀಗಾಗಿ ಮಾಳವಿಕಾ ಅವ್ರು ಶೀಘ್ರ ಗುಣಮುಖರಾಗಿ ಮನೆಗೆ ಮರಳಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಅದರಂತೆಯೇ ಮಾಳವಿಕ ಅವ್ರಿಗ ಸಂಪೂರ್ಣ ಗುಣ ಮುಖರಾಗಿದ್ದು. ಜೀ ಕನ್ನಡ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ: ಉಪೇಂದ್ರ ಅವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ

ಹೊದು ನಟಿ ಮಾಳವಿಕ ಅವ್ರ ಬದುಕು ಆರಂಭವಾದದ್ದೇ ಕಿರುತೆರೆ ಮೂಲಕ. ಕಿರುತೆರೆ ಯಲ್ಲಿ ಸಾಕಷ್ಟು ಧಾರಾವಾಹಿ ಗಳಲ್ಲಿ ನಟಿ ಮಾಳವಿಕ ಅಭಿನಯಿಸಿದ್ದಾರೆ. ನಂತರ ಸ್ಯಾಂಡಲ್ವುಡ್ ನಲ್ಲೂ ಕೂಡ ಅನೇಕ ಸಿನಿಮಾ ಗಳಲ್ಲಿ ಮಾಳವಿಕಾ ಅಭಿನಯಿಸಿದ್ದಾರೆ. ಕೆಜಿಎಫ್ ಚಿತ್ರ ದಲ್ಲಿ ನಟಿಸುವ ಮೂಲಕ ಪಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ್ರು. ಇದರ ಜೊತೆಗೆ ಕೆಲವೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನ ನಡೆಸಿಕೊಡುವ ಮೂಲಕ ಮತ್ತಷ್ಟು ಜನಪ್ರಿಯತೆ ಗಳಿಸಿಕೊಂಡ್ರು. ಅಲ್ಲದೆ ಇತ್ತೀಚಿಗೆ ಕೆಲವೊಂದು ರಿಯಾಲಿಟಿ ಶೋಗಳ್ಳಲ್ಲೂ ಜಡ್ಜ್ ಆಗಿ ಭಾಗಿಯಾಗಿದ್ದಾರೆ.. ಇನ್ನು ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿಯೂ ಮಾಳವಿಕಾ ಅಭಿನಯಿಸಿದ್ದಾರೆ. ಅಲ್ಲದೆ ಮೊನ್ನೆ ಮೊನ್ನೆಯಷ್ಟೇ ಬಿಜೆಪಿ ಪಕ್ಷಕ್ಕೆ ಸೇರುವ ಮೂಲಕ ರಾಜಕಾರಣಿಯಾಗಿಯೂ ಮಾಳವಿಕಾ ಬ್ಯುಸಿಯಾಗಿದ್ದಾರೆ.

ಇನ್ನು ಮಾಳವಿಕ ಅವ್ರು ಬಾಲ್ಯ ವಿದ್ಯಾಬ್ಯಾಸವನೆಲ್ಲ ತಮಿಳುನಾಡಿ ನಲ್ಲಿಯೇ ಮುಗಿಸಿದರು ಕೂಡ ನಂತರ ಬೆಂಗಳೂರಿ ನಲ್ಲಿ ಲಾ ಪದವಿ ಯನ್ನು ಪಡೆದರು. ಪದವಿ ಶಿಕ್ಷಣ ವನ್ನು ಪಡೆದ ನಂತರ ಕನ್ನಡ ಚಿತ್ರರಂಗ ದಲ್ಲಿ ಅಭಿನಯಿಸಲು ಹಲವು ಅವಕಾಶ ಗಳು ಮಾಳವಿಕ ಅವ್ರನ್ನ ಹುಡುಕಿಕೊಂಡು ಬರುತ್ತೆ ಅಲ್ದೇ, ಕಿರುತರೆಯ ಮೂಲಕ ಕನ್ನಡ ದಲ್ಲಿ ಹೆಚ್ಚಾಗಿ ಗುರುತಿಸಿಕೊಂಡ ಮಾಳವಿಕ ಅವರು ಜೀ ಕನ್ನಡ ವಾಹಿನಿ ಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಎಂಬ ಕಾರ್ಯಕ್ರಮದ ಮೂಲಕ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ವಿಯಾದ್ರು. ಇದೀಗ
ರಾಜಕೀಯವಾಗಿ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇನ್ನು ಮಾಳವಿಕ ಅವಿನಾಶ್ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅವಿನಾಶ್ ಅವರನ್ನು ವಿವಾಹವಾಗಿರೋದು ಅವ್ರಿಗೆ ಬುದ್ದಿಮಾಂದ್ಯ ಮಗನಿರುವ ವಿಷಯ ಪ್ರತಿಯೊಬ್ಬರಿಗೂ ಗೊತ್ತಿದೆ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ಮಾಳವಿಕ ಅವಿನಾಶ್.

ಮಗನ ನೋವಿನ ಜೊತೆಗೆ ಮಾಳವಿಕ ಅವ್ರನ್ನ ಮೈಗ್ರೆನ್ ಬಹುವಾಗಿ ಕಾಡಿಬಿಟ್ಟಿದೆ. ಈಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸದ್ಯ ಗುಣಮುಖರಾಗಿ ಮನೆಗೆ ಮರಳಿದ್ದಾರೆ.. ಈ ಮದ್ಯೆ ನಮ್ಮ ಕನ್ನಡ ಕಿರುತ್ತಾರೆಯ ಬಹುದೊಡ್ಡ ಜನಪ್ರಿಯ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಲ್ಲಿ ನಟಿ ಮಾಳವಿಕ ಅವಿನಾಶ್ ಭಾಗಿಯಾಗಿದ್ದಾರೆ. ಹೌದು ಆಸ್ಪತ್ರೆಯಲ್ಲಿ ಚೇತರಿಸಿಕೊಂಡು ಸದ್ಯ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಂಡು ಬಹುಮಟ್ಟಿಗೆ ಸುಧಾರಿಸಿರುವ ನಟಿ ಮಾಳವಿಕ ಸದ್ಯ ಈ ಕಾರ್ಯಕ್ರಮ ದ್ಲಲಿ ಭಾಗಿಯಾಗಿರೋದು ಎಲ್ಲರಿಗೂ ಖುಷಿ ತಂದಿದೆ. ಈ ಬಗ್ಗೆ ನಟಿ ಮಾಳವಿಕ ಅವ್ರೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲಿ ಕೆಲವೊಂಡಿಷ್ಟು ಫೋಟೋಗಳನ್ನ ಹಂಚಿಕೊಂಡಿದ್ದು, ತಾವು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗಿಯಾಗೋರೋದಾಗಿ ತಿಳಿಸಿದ್ದಾರೆ. ಹೌದು ತಾವುಟ್ಟಿರುವ ಸೀರೆ ಬಗ್ಗೆ ಹೇಳೋದ್ರ ಜೊತೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅವಿನಾಶ್ ಅವ್ರು ಅತಿಥಿಯಾಗಿ ಹೋಗಿರೋದ್ರ ಬಗ್ಗೆ ಹಾಗೂ ತಾವು ಕೂಡ ಕಾರ್ಯಕ್ರಮದ ಭಾಗವಗಿರೋದ್ರ ಬಗ್ಗೆ ಹೇಳಿ ಕೊಂಡು ಈ ವಾರದ ವೀಕೆಂಡ್ ಕಾರ್ಯಕ್ರಮ ವನ್ನ ಮಿಸ್ ಮಾಡ್ದೆ ನೋಡಿ ಅಂತ ಹೇಳಿದ್ದಾರೆ. ಒಟ್ಟಿನ್ನಲ್ಲಿ ಮಾಳವಿಕ ಅವ್ರು ಚೇತರಿಸಿಕೊಂಡಿರೋದು ಒಂದು ಗುಡ್ ನ್ಯೂಸ್ ಆದ್ರೆ ಅವಿನಾಶ್ ಅವ್ರು ಸಾಧಕರ ಖುರ್ಚಿ ಯಲ್ಲಿ ಕುಳಿತಿರೋದನ್ನ ನೋಡೋದು ಮತ್ತೊಂದು ಗುಡ್ ನ್ಯೂಸ್ ಇದನ್ನ ನೋಡೋದಿಕ್ಕೆ ಮಾಳವಿಕ ಬಂದಿರೋದು ಅಭಿಮಾನಿಗಳಿಗಂತೂ ಹಬ್ಬದ ರಾಸದೌತನವೆ ಸರಿ.

ಇದನ್ನೂ ಓದಿ: ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ರ ವಿನ್ನರ್ ಮತ್ತು ರನ್ನರ್ ಗೆ ಸಿಕ್ಕ ಬಹುಮಾನ ಹಾಗೂ ಹಣ ಎಷ್ಟು ಗೊತ್ತಾ?