Weekend With Ramesh 5: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ ಯಾಕ್ ಬರ್ತಿಲ್ಲ!?ಶೋಗೆ ಬರೋದ್ರ ಬಗ್ಗೆ ಹಂಶಲೇಖ, ರಮೇಶ್ ಅವ್ರಿಗೆ ಹೇಳಿದ್ದೇನು ಗೊತ್ತಾ?

Weekend With Ramesh 5: ಜೀ. ಕನ್ನಡ ವಾಹಿನಿಯ ಅತ್ಯದ್ಭುತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಹಲವಾರು ಸೀಸನ್ ಗಳ ಮೂಲಕ ಸಾಕಷ್ಟು ಸಾಧಕರನ್ನ ಕೆಂಪು ಕುರ್ಚಿಯ ಮೇಲೆ ಕೂರಿಸಿ ಅವ್ರ ಜೀವನದ ಒಂದು ಕಥೆಯನ್ನ ವಿಭಿನ್ನವಾಗಿ ತೋರಿಸುವ ಮೂಲಕ ಸಾಕಷ್ಟು ಮನೆ ಮಾತಾಗಿರುವಂತಹ ರಿಯಾಲಿಟಿ ಶೋ ಅಂದ್ರೆ ತಪ್ಪಾಗಲ್ಲ. ಕಳೆದ 5ಸೀಸನ್ ಗಳನ್ನ ನಟ ಹಾಗೂ ನಿರೂಪಕ ಆಗಿರುವ ರಮೇಶ್ ಅರವಿಂದ್ ಬಹಳ ಅಚ್ಚುಕಟ್ಟಾಗಿ ನಡೆಸುಕೊಂಡು ಬರುತ್ತಿದ್ದಾರೆ. ಜೊತೆಗೆ ಸಾಧಕರ ಸಾಧಕರ ಖುರ್ಚಿಯ ಮೇಲೆ ಕೂರಿಸಿ ಅವ್ರ ಜೀವನದ ಆಗೂ ಹೋಗುಗಳು ಸಿಹಿ ಕಹಿ ಘಟನೆಗಳನ್ನ ರಿವೈನ್ಡ್ ಮಾಡುವ ಪ್ರಯತ್ನವನ್ನ ವೀಕೆಂಡ್ ಟೀಮ್ ಮಾಡಿಕೊಂಡು ಹೋಗ್ತಿದೆ. ಈ ಕಾರ್ಯಕ್ರಮ ಎಷ್ಟೋ ಜನರಿಗೆ ಸ್ಫೂರ್ತಿದಾಯಕವಾಗಿದ್ದು, ಕಾರ್ಯಕ್ರಮವನ್ನ ನೋಡೊದಕ್ಕಾಗಿ ವಾರಗಟ್ಟಲೆ ಕಾಯೋ ವೀಕ್ಷಕರು ಕೂಡ ಇದ್ದಾರೆ. ಅಂತಹ ವೀಕ್ಷಕರು ಕಾರ್ಯಕ್ರಮಕ್ಕೆ ಅವ್ರನ್ನ ಕರೆಯಿಸಬೇಕಿತ್ತು, ಇವ್ರು ಬಂದಿದ್ರೆ ಚೆನ್ನಾಗಿ ಇರ್ತಿತ್ತು, ಇವ್ರ ಬದಲು ಈ ವಾರ ಇವ್ರೇ ಬರಬೇಕಿತ್ತು, ಯಾಕಿಷ್ಟು ಸೀಸನ್ ಆದ್ರೂ ಇನ್ನು ಅವ್ರು ಬಂದಿಲ್ಲ, ಅವ್ರು ಬಂದಿದ್ರು ಈ ಸೀಸನ್ ಸಖತ್ತಾಗಿ ಇರ್ತಿತ್ತು ಅಂತ ಮಾತನಾಡಿಕೊಂಡಿದ್ದು ಇದೆ, ಕೆಲವೊಂದು ಟ್ರೋಲ್ ಪೇಜ್ ಲಿ ಇಂತಹ ವಿಚಾರಗಳು ಟ್ರೋಲ್ ಆಗಿದ್ದು ಇದೆ.

WhatsApp Group Join Now
Telegram Group Join Now

ಇವ್ರು ಬಂದಿದ್ರೆ ಚೆನ್ನಾಗಿರೋದು ಯಾಕ್ ಇವ್ರು ಬರ್ಲಿಲ್ಲ ಅನ್ನೋ ಪ್ರಶ್ನೆಗೆ ಮೊದಲಿಗೆ ನೆನಪಾಗೋದು ನಾದ ಬ್ರಹ್ಮ ಹಂಸಲೇಖ ಅವ್ರು. ಹೌದು ಜೀ ಕನ್ನಡ ವಾಹಿನಿಯಿಂದಲೇ ಅತೀ ಹೆಚ್ಚು ಜನರ ಪ್ರೀತಿ ಹಾಗೂ ಕರ್ನಾಟಕದ ಮನೆ ಮಗನಾಗಿರುವ ನಾದ ಬ್ರಹ್ಮ ಯಾಕೆ ಜೀ ಕನ್ನಡ ವಾಹಿನಿಯ ವೀಕೆಂಡ್ ಕಾರ್ಯಕ್ರಮಕ್ಕೆ ಬರ್ತಿಲ್ಲ ಅನ್ನೋದು ಹಲವರ ಪ್ರಶ್ನೆ ಹಾಗಾದ್ರೆ ವೀಕೆಂಡ್ ಕಾರ್ಯಕ್ರಮಕ್ಕೆ ಮಹಾಗುರು ಬರದಿರಲು ಕಾರಣವೇನು, ಕಾರ್ಯಕ್ರಮದ ಬಗ್ಗೆ ಹಾಗೂ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರೋದ್ರಲ್ಲಿ ಬಗ್ಗೆ ನಾದಬ್ರಹ್ಮ ಹೇಳಿದ್ದೇನು ಎಲ್ಲವನ್ನ ನೋಡೋಣ ಬನ್ನಿ.

ಇದನ್ನೂ ಓದಿ: ಮಗಳ ಹುಟ್ಟುಹಬ್ಬ ಕುಟುಂಬದ ಜೊತೆ ಕಾಲ ಕಳೆದ ಸುದೀಪ್, ಸುದೀಪ್ ಮಗಳಿಗೆ ಈಗ ಎಷ್ಟು ವರ್ಷ? ಬರ್ತ್ಡೇ ಸೆಲೆಬ್ರೇಶನ್ ಹೇಗಿತ್ತು?

ಪ್ರತಿಯೊಂದು ಸೀಸನ್ ನಿಂದಲೂ ಹಂಶಲೇಖ ದೂರ ಉಳಿದಿರೋದ್ಯಾಕೆ

2014ರಲ್ಲಿ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವ್ರ ಅಮೃತ ಹಸ್ತದಿಂದ ಮೊದಲ ವೀಕೆಂಡ್ ಅತಿಥಿಯಾಗಿ ಆರಂಭಗೊಂಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇಲ್ಲಿಯವರೆಗೂ ಸಾಕಷ್ಟು ಸಾಧಕರ ಜೀವನದ ಸಾಧನೆಗೆ ಕೈಗನ್ನಡಿ ಹಿಡಿದಿದೆ. ಮಹಾನ್ ಸಾಧಕರನ್ನ ಕೆಂಪು ಖುರ್ಚಿಯ ಮೇಲೆ ಕೂರಿಸಿ ಅವ್ರ ಸಾಧನೆಗಳನ್ನ ಜನತೆಗೆ ತಿಳಿಸುವ ಪ್ರಯತ್ನದಲ್ಲಿ ವೀಕೆಂಡ್ ಟೀಮ್ ಸಕ್ರಿಯವಾಗಿದೆ. ಹೀಗಿರುವಾಗ 95ಕ್ಕೂ ಅಧಿಕ ಸಾಧಕರನ್ನ ಕರೆಸಿರುವ ಜೀ ಕನ್ನಡ ವಾಹಿನಿಯು ನಾದ ಬ್ರಹ್ಮ ಹಂಸಲೇಖ ಅವ್ರನ್ನ ಕಾರ್ಯಕ್ರಮಕ್ಕೆ ಯಾಕೆ ಕರೆಸಿಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಲಾಗುತ್ತಿವೆ. ಯಾಕಂದ್ರೆ ಈಗಾಗ್ಲೇ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಿದ್ರು ಕೂಡ ಜೀ. ಕನ್ನಡ ವಾಹಿನಿಯಲ್ಲಿಯೇ ಬೇರೆ ಕಾರ್ಯಕ್ರಮಗಳಿಗೆ ಹೋಗುವ ಮಹಾಗುರುಗಳನ್ನ ವೀಕೆಂಡ್ ಕಾರ್ಯಕ್ರಮಕ್ಕೆ ಕರೆಸೋದ್ರಲ್ಲಿ ವೀಕೆಂಡ್ ಟೀಮ್ ಯಾಕೆ ಸುಮ್ಮನ್ನಿದೆ ಅನ್ನೋದೋ ಹಲವು ಜನರ ಪ್ರಶ್ನೆ.

ಹಂಸಲೇಖ ಅವ್ರ ಬಗ್ಗೆ ತಿಳಿದುಕೊಳ್ಳೋಕೆ ಸಾಕಷ್ಟು ಜನರಿಗೆ ಕುತೂಹಲ ಕೆಲವೊಂದು ನಿರೀಕ್ಷೆಗಳಿವೆ ಯಾಕಂದ್ರೆ ಸಾಧಕರ ಖುರ್ಚಿಯ ಮಹತ್ವವೇ ಅಂಥದ್ದು ಪ್ರತಿಯೊಂದನ್ನು ಕೂಡ ಎಳೆ ಎಳೆಯಾಗಿ ವೀಕ್ಷಕರ ಮುಂದೆ ಬಿಚ್ಚಿಡುತ್ತ ಸಾಗುತ್ತೆ. ಇಂತಹ ಕುತೂಹಲದ ಪರದೆ ಹಂಸಲೇಖ ಅವ್ರ ವಿಚಾರಕ್ಕೆ ತೆರೆದುಕೊಳ್ಳಬೇಕು ಅನ್ನೋದು ತುಂಬಾ ಜನರ ಆಸೆ ಮತ್ತು ಅಭಿಪ್ರಾಯವಾಗಿದೆ. ಇದೀಗ ಹಂಸಲೇಖ ಅವ್ರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರೋದರ ಕುರಿತು ಒಂದಷ್ಟು ಮಾಹಿತಿ ಬಹಿರಂಗವಾಗಿದ್ದು, ಯಾಕೆ ಇಷ್ಟು ಸೀಸನ್ ನಲ್ಲಿ ಒಮ್ಮೆಯಾದರು ನಾದಬ್ರಹ್ಮ ಕಾಣಿಸಿಕೊಂಡಿಲ್ಲ, ಮತ್ಯಾವ ವೀಕೆಂಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಅದಕ್ಕೆ ಕಾರಣ ಏನು ಅನ್ನೋದನ್ನ ತಿಳಿಸುವ ಪ್ರಯತ್ನವನ್ನ ಇವತ್ತು ನಾವು ಮಾಡಿದ್ದೇವೆ.

ವೀಕೆಂಡ್ ವಿತ್ ರಮೇಶ್ ಬರುವ ಬಗ್ಗೆ ಹಂಸಲೇಖ ಹೇಳಿದ್ದೇನು?

ಹೌದು ಕಳೆದ ವಾರ ನಿಮ್ಮೆಲ್ಲರಿಗೂ ಗೊತ್ತಿರುವಂತೆ ವೀಕೆಂಡ್ ವಿತ್ ರಮೇಶ್(Weekend With Ramesh 5) ಕಾರ್ಯಕ್ರಮಕ್ಕೆ ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರನ್ನ ಕರೆಸಿ ಸಾಧಕರ ಖುರ್ಚಿಯಲ್ಲಿ ಕೂರಿಸಲಾಗಿತ್ತು. ಈ ಒಂದು ಸಂದರ್ಭದಲ್ಲಿ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವ್ರ ಕುರಿತು ಸಾಕಷ್ಟು ಜನರು ಸಾಕಷ್ಟು ವಿಷಯಗಳನ್ನು ಹಂಚಿಕೊಂಡ್ರು, ಅದೇ ರೀತಿ ನಾದಬ್ರಹ್ಮ ಹಂಸಲೇಖ ಅವ್ರು ಸಹ ಫೋನ್ ಕರೆಯಲ್ಲಿ ಮಾತನಾಡಿದ್ರು. ಆ ಸಂದರ್ಭದಲ್ಲಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರುವ ಕುರಿತಂತೆ ರಮೇಶ ಅರವಿಂದ್ ಅವರು ಪ್ರಶ್ನೆ ಮಾಡಿದಾಗ, ಹಂಸಲೇಖ ಅವ್ರು ಖಂಡಿತವಾಗಿಯೂ ಬರುವುದಾಗಿ ಉತ್ತರಿಸಿದ್ದು, ಇಷ್ಟು ದಿನ ಯಾಕೆ ಬಂದಿರ್ಲಿಲ್ಲ ಅನ್ನೋದ್ರ ಕುರಿತು ಮಾತನಾಡಿದ್ದು, ನಟ ನಿರೂಪಕ ರಮೇಶ್ ಅರವಿಂದ್ ಅವರು ಸಾಕಷ್ಟು ಬಾರಿ ನನ್ನನ್ನ ಕರೆಸುವ ಪ್ರಯತ್ನ ಮಾಡಿದ್ರು, ಆದ್ರೆ ನಾನು ಬರಲು ಆಗಿರಲಿಲ್ಲ, ಇನ್ನು ಮುಂದಿನ ದಿನಗಳಲ್ಲಿ ನಾನು ಖಂಡಿತವಾಗಿಯೂ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರೋದಾಗಿ ನಾದಬ್ರಹ್ಮ ಹಂಸಲೇಖ ತಿಳಿಸಿದ್ದಾರೆ.

ಇನ್ನು ರಮೇಶ್ ಅರವಿಂದ್ ಅವರು ಕೂಡ ಮುಂದಿನ ಎಪಿಸೋಡ್ ಗೆ ನೀವು ಬರಲೇಬೇಕು ಅಂತ ಕೇಳಿಕೊಂಡಿದ್ದು, ಖಂಡಿತವಾಗಿಯೂ ನಾನು ಬಂದೆ ಬರ್ತೀನಿ ಅಂತ ಹೇಳಿ ಹಂಸಲೇಖ ಅವ್ರು ಉತ್ತರಿಸಿದ್ದಾರೆ. ಇದನ್ನ ಕೇಳ್ತಿದ್ದಂತೆ ಎಲ್ಲರೂ ಕೂಡ ಖುಷಿಪಟ್ಟಿದ್ದಾರೆ. ಇನ್ನು ಹಂಸಲೇಖ ಅವ್ರ ಹಾಡುಗಳು ಬಗ್ಗೆ ಹೇಳಲು ಒಂದು ಎಪಿಸೋಡ್ ಸಾಲೋದೆ ಇಲ್ಲ. ಹೀಗಾಗಿ ಹಂಸಲೇಖ ಅವರಿಗೆ ವಿಶೇಷವಾದಂತಹ ಒಂದು ಕಾರ್ಯಕ್ರಮವನ್ನು ಮಾಡಬೇಕು ಆ ಒಂದು ವಿಶೇಷ ಕಾರ್ಯಕ್ರಮದಲ್ಲಿ ಕೇವಲ ಹಂಸಲೇಖ ಅವರೇ ಇರಬೇಕು, ಹಂಸಲೇಖ ಅವರ ವಿಷಯಗಳನ್ನ ಹಂಸಲೇಖ ಅವರೇ ಹಂಚಿಕೊಳ್ಳಬೇಕು ಅಂತ ಜೀ ಕನ್ನಡ ವಾಹಿನಿಯು ವಿಭಿನ್ನವಾದ ಕಾರ್ಯಕ್ರಮವನ್ನು ಮಾಡಲು ಹೊರಟಿದ್ದು, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ 100ನೇ ಎಪಿಸೋಡ್ ಗೆ ನಾದಬ್ರಹ್ಮ ಹಂಸಲೇಖ ಅವರನ್ನ ಕರೆಸಬೇಕು ಅಂತ ವಾಹಿನಿಯು ನಿರ್ಧರಿಸಿದ್ದು, ಅದರಂತೆ 100ನೇ ಎಪಿಸೋಡಿಗೆ ಈಗಾಗಲೇ ಹಲವು ಸಿದ್ಧತೆಗಳನ್ನು ಮಾಡಿಕೊಂಡಿರುವಂತಹ ಜಿ ಕನ್ನಡ ವಾಹಿನಿ, ಜೊತೆಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವೀಕೆಂಡ್ ಟೀಮ್ ಹಲವಾರು ವಿಷಯಗಳನ್ನ ಸಂಗ್ರಹ ಮಾಡಲು ಹೊರಟಿದ್ದು ಮುಂದಿನ 100ನೇ ಎಪಿಸೋಡ್ ಗೆ ನಾದ ಬ್ರಹ್ಮ ಹಂಸಲೇಖ ಬರೋದು 100% ಖಚಿತವಾಗಿದೆ. ಇನ್ನು ನಾದಬ್ರಹ್ಮ ಹಂಸಲೇಖಾ ಅವರು ದೊಡ್ಡ ಸಾಧಕರಾಗಿದ್ದು ಅವರ ಸಾಧನೆಗೆ ಒಂದೆರಡು ಎಪಿಸೋಡ್ಗಳು ಸಾಲೋದಿಲ್ಲ ಹೀಗಾಗಿಯೇ ಅವರಿಗೋಸ್ಕರ ವಿಭಿನ್ನವಾಗಿ ಈ ಒಂದು ಎಪಿಸೋಡ್ ಅನ್ನ ನಿರ್ಮಾಣ ಮಾಡಬೇಕು ಅನ್ನೋದು ವೀಕೆಂಡ್ ಟೀಮ್ ಚಿಂತನೆಯಾಗಿದೆ.ಒಟ್ಟಿನಲ್ಲಿ ವೀಕೆಂಡ್ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖಾ ಅವರು ಬರುವುದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಿಚ್ಚಿ ಗಿಲಿ ಗಿಲಿ ಚಂದ್ರಪ್ರಭಾ.ಮದುವೆ ವಿಚಾರವನ್ನ ಯಾರಿಗೂ ತಿಳಿಸದೇ ಗುಟ್ಟಾಗಿ ಮದುವೆಯಾಗಿದ್ದೇಕೆ?

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram