Bharjari Bachelors: ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಸುಕೃತ ನಾಗ್ ಔಟ್! ನವಾಜ್ ಗೆ ಜೋಡಿಯಾಗಿದ್ದ ಸುಕೃತ ಹೊರನಡೆದದ್ದು ಯಾಕೆ?

Bharjari Bachelors: ಕನ್ನಡ ಕಿರುತೆರೆಯ 10 ಎಲಿಜಿಬಲ್ ಬ್ಯಾಚುಲರ್​ಗಳ ಕನಸನ್ನ ನನಸು ಮಾಡುತ್ತಾ, ಅವರ ಆಸೆಗಳ ಅಖಾಡದಲ್ಲಿ ಅವರ ಸಾಮರ್ಥ್ಯವನ್ನು ಕರುನಾಡಿನ ಜನತೆಗೆ ತೋರಿಸೀ, ಬ್ಯಾಚುಲರ್ ಆಗಿದ್ದವನು ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಎಂಬುದನ್ನು ಕರುನಾಡಿಗೆ ಸಾರಿ ಹೇಳುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಭರ್ಜರಿಯಾಗಿಯೇ ಶುರುವಾಗಿದೆ. ಇನ್ನು ಕನ್ನಡ ಕಿರುತೆರೆ ವಾಹಿನಿಗಳ ನಡುವೆ ಸಖತ್​ ಪೈಪೋಟಿ ಇದೆ. ಅಲ್ದೇ ಧಾರಾವಾಹಿ ಮಾತ್ರವಲ್ಲದೇ ರಿಯಾಲಿಟಿ ಶೋಗಳಲ್ಲೂ ವಾಹಿನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ಭಿನ್ನವಾದ ಕಾನ್ಸೆಪ್ಟ್​ಗಳಲ್ಲಿ ರಿಯಾಲಿಟಿ ಶೋಗಳು ಬರ್ತಿವೆ. ಹೌದು ಇಷ್ಟು ದಿನಗಳ ಕಾಲ ಜೀ ಕನ್ನಡದಲ್ಲಿ ವೀಕೆಂಡ್​ ವಿತ್​ ರಮೇಶ್​ ಸೀಸನ್​ 5 ಪ್ರಸಾರ ಆಯಿತು ಹೀಗಾಗಿ ವಾರಾಂತ್ಯದ ಮನರಂಜನೆಗೆ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮ ಬರ್ತಿದೆ. ಕರ್ನಾಟಕದ ಟಿವಿ ಲೋಕದಲ್ಲಿನ ಆಯ್ದ ಕೆಲವು ಬ್ಯಾಚುಲರ್​ಗಳನ್ನ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಬದುಕಿನಿಂದ ಮದುವೆಗೆ ಎಲಿಜಿಬಲ್ ಮಾಡಿಸುವ ಪ್ರಯತ್ನವೇ ಈ ಹೊಸ ರಿಯಾಲಿಟಿ ಶೋನ ಮುಖ್ಯ ಕಾನ್ಸೆಪ್ಟ್​. ಆದ್ರೆ ಇದೀಗ ಶೋ ವಿರುದ್ಧ ಟಿಕೆಗಳು ಬರ್ತಿದೆ. ಅನವಶ್ಯಕ ಶೋ ಅಂತ ಜನ ನೆಗೆಟಿವ್ ಆಗಿ ಮಾತಾಡ್ತಿದ್ದಾರೆ. ಈ ಮಧ್ಯೆ ಶೋ ನಿಂದ ಸುಕೃತ ನಾಗ್ ಔಟ್ ಆಗಿರೋದು ಮತ್ತೊಂದು ಸಂದೇಹಕ್ಕೆ ಕಾರಣವಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: ನಿರ್ಮಾಪಕರಿಂದ ದುಡ್ಡು ತೆಗೆದುಕೊಂಡು ಮೋಸ ಮಾಡಿದ್ರ ಕಿಚ್ಚ!?ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್ ಕುಮಾರ್ ಗಂಭೀರ ಆರೋಪ

ಶೋ ವಿರುದ್ಧ ಜನಕ್ರೋಶ!ಶೋ ಬಿಟ್ಟ ಸುಕೃತ

ಪ್ರೊಮೋದ ಮೂಲಕವೇ ಈ ರಿಯಾಲಿಟಿ ಶೋನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇದ್ದಾರೆ ಎಂಬುದನ್ನು ತೋರಿಸಿತ್ತು. ಹೀಗಾಗಿ ಇವರಿಂದ ಭರ್ಜರಿ ಬ್ಯಾಚುಲರ್ಸ್(Bharjari Bachelors) ಎಂಟರ್ಟೈನ್ಮೆಂಟ್ ನೀಡೋದ್ರಲ್ಲಿ ಡೌಟೇ ಇಲ್ಲ ಅನ್ನೋದು ಸಾಬೀತಾಗಿತ್ತು. ಆದರೆ, ಇದೀಗ ಆ ಶೋನಿಂದ ಸುಕೃತಾ ನಾಗ್ ಹೊರ ಬಂದಿದ್ದಾರೆ. ಅಲ್ದೇ ಪ್ರೋಮೋ ಮೂಲಕ ಭರ್ಜರಿ ಬ್ಯಾಚುಲರ್ಸ್ ಶೋ ಶುರುವಾಗಿತ್ತು. ಮೊದ ಮೊದಲಿಗೆ ಬ್ಯಾಚುಲರ್‌ಗಳ ಪ್ರೋಮೋ ಬಿಡಲಾಗಿತ್ತು. ಬಳಿಕ ಚಂದದ ತಾರೆಯರ ಎಂಟ್ರಿ ಸಖತ್ತಾಗಿಯೇ ಇತ್ತು. ಬ್ಯಾಚುಲರ್ಸ್ ಎಂದಾಕ್ಷಣಾ ಹಾಗೆಲ್ಲ ಬರೀ ಹುಡುಗರನ್ನೇ ಇಟ್ಟುಕೊಂಡು ಶೋ ಮಾಡೋದಲ್ಲ. ನಟಿ ಮಣಿಯರನ್ನು ಬಿಟ್ಟು ಬ್ಯಾಚುಲರ್ಸ್ ಗಳನ್ನ ಡಿಸ್ಟರ್ಬ್ ಮಾಡುವುದು ಇರಬೇಕು ಇದರಲ್ಲಿ ಸುಕೃತಾ ನಾಗ್ ಕಾಣಿಸಿಕೊಂಡಿದ್ದರು. ಒಂದೊಳ್ಳೆ ಡ್ಯಾನ್ಸ್ ಪ್ರೋಗ್ರಾಂ ನೀಡಿ ಎಂಟ್ರಿ ಕೊಟ್ಟು ನವಾಜ್‌ ಅನ್ನು ಜೋಡಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ವಾರ ಭರ್ಜರಿ ಬ್ಯಾಚುಲರ್ಸ್ ನೋಡಿದವರಿಗೆ ಸುಕೃತಾ ಎಲ್ಲಿ ಎಂಬ ಪ್ರಶ್ನೆ ಕಾಡಿತ್ತು.ಅವ್ರ ಜಾಗಕ್ಕೆ ಅಮೂಲ್ಯ ಹೊಸ ಎಂಟ್ರಿ ಅಂತ ಅನ್ನಿಸೋಕೆ ಶುರುವಾಯ್ತು. ಹೌದು ಶನಿವಾರ, ಭಾನುವಾರ ಸುಕೃತಾ ನಾಗ್ ಇಲ್ಲದೆ ಭರ್ಜರಿ ಬ್ಯಾಚುಲರ್ಸ್ ಮುಗಿದಿದೆ. ಅದು ತಮ್ಮ ತಮ್ಮ ಜೋಡಿಗಳನ್ನು ಪಾರ್ಲರ್‌ಗೆ ಕರೆದುಕೊಂಡು ಹೋಗಿದ್ದ ಎಪಿಸೋಡ್. ಅಲ್ಲಿ ನವಾಜ್‌ಗೆ ಸುಕೃತ ಬದಲು ಅಮೂಲ್ಯ ಜೊತೆಯಾಗಿದ್ದರು.

ಹೌದು ಈ ರಿಯಾಲಿಟಿ ಶೋನಲ್ಲಿ ಒಂದೊಂದು ವಾರ ಒಂದೊಂದು ಟಾಸ್ಕ್ ಅನ್ನು ನೀಡಲಾಗುತ್ತಿದೆ. ಈ ಟಾಸ್ಕ್‌ನಲ್ಲಿ ಯಾವ ಜೋಡಿ ಗೆಲುವು ಸಾಧಿಸುತ್ತೆ ಅನ್ನೋದನ್ನ ಮುಖ್ಯವಾಗಿಟ್ಟುಕೊಂಡು ಶೋ ನಡೆಸಲಾಗ್ತಿದೆ. ಆದ್ರೆ ಪ್ರಮೋದಲ್ಲಿ ಕಾಣಿಸಿಕೊಂಡ ಸುಕೃತಾ ನಾಗ್ ಎಪಿಸೋಡ್ ನಲ್ಲಿ ಕಾಣಲಿಲ್ಲ ಬಹುಷಃ ಒಂದೇ ವಾರ ಭರ್ಜರಿ ಬ್ಯಾಚುಲರ್ಸ್ ತಂಡದಲ್ಲಿದ್ದ ಸುಕೃತ ಹೆಚ್ಚು ಸಮಯ ಕಾಣಿಸಿಕೊಳ್ಳಲೇ ಇಲ್ಲ. ಇದು ಜೀ ಕನ್ನಡ ನಡೆಸಿಕೊಡುವ ಶೋ ಆಗಿದ್ದರಿಂದ ಸುಕೃತಾ ನಾಗ್ ಗೆ ಸಮಯ ಒದಗಿಸಿಕೊಳ್ಳಲು ಕಷ್ಟವಾಗಿದೆ. ಮಾಹಿತಿಗಳ ಪ್ರಕಾರ, ಜೀ ಕನ್ನಡದ ಭರ್ಜರಿ ಬ್ಯಾಚುಲರ್ ಶೋನಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುಕೃತಾ ನಾಗ್ ಕಲರ್ಸ್ ಕನ್ನಡದಲ್ಲಿ ಅನುಮತಿ ಕೇಳಿದ್ದರಂತೆ. ಡೇಟ್ ಸಮಸ್ಯೆ ಆಗದಂತೆ ಮ್ಯಾನೇಜ್ ಮಾಡಿಕೊಳ್ಳಿ ಎಂದು ಕಲರ್ಸ್ ವಾಹಿನಿ ಕೂಡ ಹೇಳಿತ್ತಂತೆ. ಆದರೆ, ದಿನ ಕಳೆದಂತೆ ಡೇಟ್ಸ್ ಸಮಸ್ಯೆ ಆಗಿ ಸುಕೃತಾ ಭರ್ಜರಿ ಬ್ಯಾಚುಲರ್ಸ್‌ನಿಂದ ಹೊರ ಹೋಗಿದ್ದಾರಂತೆ. ಇನ್ನು ಕಲರ್ಸ್ ಕನ್ನಡದಲ್ಲಿ ಲಕ್ಷಣ ಧಾರಾವಾಹಿಯಲ್ಲಿ ಸುಕೃತಾ ನೆಗೆಟಿವ್ ರೋಲ್ ಪ್ಲೇ ಮಾಡ್ತಿದ್ದಾರೆ. ನಕ್ಷತ್ರಾಗೆ ತೊಂದರೆ ಕೊಡುವ ಕ್ಯಾರೆಕ್ಟರ್. ಸದ್ಯ ಸುಕೃತಾ ಪಾತ್ರ ಕೂಡ ಪ್ರಾಮುಖ್ಯತೆ ವಹಿಸಿದೆ. ಹೀಗಾಗಿ ಲೀಡ್ ರೋಲ್ ಬಿಟ್ಟು ಕೊಡಲಾಗದೆ ಭರ್ಜರಿ ಬ್ಯಾಚುಲರ್ಸ್ ತಂಡವನ್ನೇ ಬಿಟ್ಟು ಬಂದಿದ್ದಾರೆ ಅನ್ನುವಂತಹ ಗುಸು ಗುಸು ಕೇಳಿ ಬರ್ತಿದೆ.

ಇದನ್ನೂ ಓದಿ: ಅಪ್ಪಂದಿರಂತೆ ಮಕ್ಕಳು ಕೂಡ ಬೆಸ್ಟ್ ಪ್ರೆಂಡ್ಸ್! ಅಪ್ಪು-ಕಿಚ್ಚ ಆಗ ಬೆಸ್ಟ್ ಪ್ರೆಂಡ್ಸ್ ಈಗ ಸಾನ್ವಿ-ಧೃತಿ ಕ್ಲೋಸ್ ಪ್ರೆಂಡ್ಸ್

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram