Darshan: ಅಭಿಷೇಕ್ ಮದುವೆಗೆ ದರ್ಶನ್ ಯಾಕೆ ಬರಲಿಲ್ಲ!? ಮದುವೆಯ ಯಾವ ಕಾರ್ಯಕ್ಕೂ ದಚ್ಚು ನೋ ಎಂಟ್ರಿ?!

Darshan: ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ವಿವಾಹ ಕಾರ್ಯಕ್ರಮ ನಡೆದಿದೆ. ಗೌಡರ ಅಂದ್ರೆ ಒಕ್ಕಲಿಗ ಸಂಪ್ರದಾಯಂತೆ ಈ ಜೋಡಿ ಮದುವೆಯಾಗಿದ್ದು, ಕುಟುಂಬಸ್ಥರು, ಆಪ್ತರಷ್ಟೇ ಈ ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನು ಆರತಕ್ಷತೆ, ಬೀಗರ ಊಟ ಕೂಡ ನಡೆಯಲಿದ್ದು, ಈ ಒಂದು ಅರತಕ್ಷತೆ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಸೇರುವ ನಿರೀಕ್ಷೆಯಿದ್ದು, ಮದುವೆಗಿಂತ ಅರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ ಅಂತ ಹೇಳಲಾಗ್ತಿದೆ. ಇನ್ನು ಕಳೆದ ನಾಲ್ಕು ದಿನಗಳಿಂದಲೇ ಅಂಬಿ ಮನೆಯಲ್ಲಿ ವಿವಾಹ ಪೂರ್ವ ಕಾರ್ಯಕ್ರಮಗಳು ಬಹಳ ಅದ್ದೂರಿಯಾಗಿಯೇ ನಡೆದಿದ್ವು. ಅಂದುಕೊಂಡಂತೆ ಮದುವೆ ಪೂರ್ವದ ಕಾರ್ಯಕ್ರಮ ಮದುವೆ ಹಾಗೂ ಮದುವೆ ನಂತರದ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಅಷ್ಟೇ ಅದ್ದೂರಿಯಾಗಿ ನಡೆಯುತ್ತಿದೆ. ಆದರೆ ಮದುವೆಗೆ ಒಂದು ಸಣ್ಣ ಕೊರತೆ ಎಂಬಂತೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವ್ರು ಬಂದಿರಲಿಲ್ಲ. ಕೇವಲ ವಿಜಯಲಕ್ಷ್ಮಿ ಮಾತ್ರ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿ ಅಭಿಷೇಕ್ ಹಾಗೂ ಅವಿವಾ ಜೋಡಿಗೆ ಶುಭಾಶಯಗಳು ಆರೈಸಿದ್ರು. ಹೌದು ಬೆಂಗಳೂರಿನ ಅರಮನೆ ಮೈದಾನದ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ನಡೆದ ನಟ ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ವಿವಾಹ ಮಹೋತ್ಸವಕ್ಕೆ ವಿಜಯಲಕ್ಷ್ಮಿ ಅವ್ರು ಏಕಾಂಗಿಯಾಗಿ ಬಂದದ್ದು ಇದೀಗ ಇದರ ಬಗ್ಗೆ ಗಾಂಧಿನಗರದಲ್ಲಿ ಟಾಕ್ ಶುರುವಾಗಿದೆ. ಹಾಗಾದ್ರೆ ನಟ ದರ್ಶನ್ ಬರಲಿಲ್ವಾ? ಕಾರಣ ಏನು ?ಎಲ್ಲವನ್ನ ಸಂಪೂರ್ಣವಾಗಿ ನೋಡೋಣ ಬನ್ನಿ.

WhatsApp Group Join Now
Telegram Group Join Now

ಹೌದು ಈ ಮೊದಲ ನಿರ್ಧರಿಸಿದ್ದಂತೆ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ವಿವಾಹಕ್ಕೆ ಕೇವಲ ಒಂದು ಸಾವಿರ ಮಂದಿಗಷ್ಟೇ ಆಹ್ವಾನ ನೀಡಲಾಗಿತ್ತು. ಹೀಗಾಗಿ ವಧು-ವರರ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಮದುವೆ ಸಮಾರಂಭಕ್ಕೆ ಆಮಂತ್ರಣ ನೀಡಲಾಗಿತ್ತು. ಹೀಗಾಗಿ ಎರಡೂ ಕುಟುಂಬದ ಸದಸ್ಯರು ಹಾಗೂ ಅಭಿ, ಅವಿವಾ ಸ್ನೇಹಿತರು ಭಾಗವಹಿಸಿದ್ರು.ಅಲ್ಲದೇ ತಮಿಳಿನ ಖ್ಯಾತ ನಟ ರಜನಿಕಾಂತ್ ಮದುವೆಗೆ ಆಗಮಿಸಿದ್ದು ಬಹಳ ವಿಶೇಷವಾಗಿತ್ತು, ಅಲ್ಲದೇ ದಿವಂಗತ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭಹಾರಿಸಿದ್ದಾರೆ. ಅಲ್ಲದೇ ಸ್ಯಾಂಡಲ್ವುಡ್ ನಾ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್, ಕಿಚ್ಚ ಸುದೀಪ್ ಕುಟುಂಬ ಸಮೇತರಾಗಿ ಬಂದು ಅಭಿಗೆ ಚಿನ್ನದ ಸರವನ್ನ ಕೂಡ ಉಡುಗೊರೆಯಾಗಿ ನೀಡಿದ್ರು. ಸುಧಾರಣಿ, ಸುಹಾಸಿನಿ ಹೀಗೆ ದೊಡ್ಡ ದೊಡ್ಡ ತಾರ ಬಳಗದವರು ವಿವಾಹ ಕಾರ್ಯಕ್ರಮಕ್ಕೆ ಬಂದಿದ್ರು, ಆದರೆ ಮದುವೆ ಕಾರ್ಯಕ್ರಮಕ್ಕೆ ವಿಜಯಲಕ್ಷ್ಮಿ ಒಬ್ಬರೇ ಬಂದಿದ್ದು ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಯಾಕ್ ಬಂದಿಲ್ಲ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ಫಿನಾಲೆ ವೇದಿಕೆ ಮೇಲೆ ಎಂಗೇಜ್ಮೆಂಟ್ ಮಾಡಿಕೊಂಡ ಜಗಪ್ಪ ಹಾಗೂ ಸುಶ್ಮಿತಾ

ತಮ್ಮನ ಮದುವೆಗೆ ಅಣ್ಣನೇ ಬರಲಿಲ್ಲ ಯಾಕ್ ಗೊತ್ತಾ?

ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್(Darshan) ಅಂಬಿ ಕುಟುಂಬಕ್ಕೆ ಬಹಳ ಆತ್ಮೀಯರು ಹೀಗಾಗಿ ಅಂಬಿ ಮನೆಯ ಎಲ್ಲ ಸಣ್ಣ ಪುಟ್ಟ ಕಾರ್ಯಕ್ರಮದಲ್ಲಿ ದರ್ಶನ್ ಇರ್ತಾರೆ ಅನ್ನೋದು ಕೆಲವರ ನಂಬಿಕೆ ಆದ್ರೆ ಅಭಿಷೇಕ್ ಮದುವೆ ಸಮಾರಂಭಕ್ಕೆ ದರ್ಶನ್ ಬರ್ಲಿಲ್ವಲ್ಲ ಅನ್ನೋದು ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಬುಲೆಟ್ ಪ್ರಕಾಶ್ ಅವ್ರ ಮಗಳ ಮದುವೆಗೂ ಹೋಗಿರಲಿಲ್ಲ ಆದ್ರೆ ಬುಲೆಟ್ ಪ್ರಕಾಶ್ ಮಗನ ಕಡೆಯಿಂದ ಆಮಂತ್ರಣ ದರ್ಶನ್ ಅವ್ರಿಗೆ ತಲುಪಿರಲಿಲ್ಲ ಅನ್ನೋದು ಮತ್ತೆ ಸುದ್ದಿಯಾಗಿ ತಣ್ಣಗಾಯಿತು. ಆದರೆ ಇದೀಗ ಅಭಿಷೇಕ್ ನನ್ನ ಸ್ವಂತ ತಮ್ಮ ಇದ್ದಂತೆ ಅಂತ ಹೇಳಿಕೊಂಡಿದ್ದ ದರ್ಶನ್ ಮದುವೆ ಬಂದಿರಲಿಲ್ಲ. ಹೌದು ಅಂಬಿ ಮರಣ ಹೊಂದಿದಗಿನಿಂದ ಹಿಡಿದು ಸುಮಲತಾ ಅವ್ರ ರಾಜಕೀಯ ಕ್ಷೇತ್ರದ ಸಾಧನೆಯವರೆಗೂ ದರ್ಶನ್ ಜೊತೆಗೆ ನಿಂತಿದ್ರು. ಆದ್ರೆ ಈಗ ಎಲ್ಲಿ ಹೋದ್ರು ಅನ್ನೋದು ಒಂದಷ್ಟು ಜನರ ಪ್ರಶ್ನೆ. ಇದಕ್ಕೆ ಉತ್ತರ ಕೂಡ ಸಿಕ್ಕಿದೆ. ನಟ ದರ್ಶನ್ ಅವ್ರು ಬಹುನಿರೀಕ್ಷಿತಾ ಕಾಟೇರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಶೂಟಿಂಗ್ ಇದ್ದ ಕಾರಣ ದರ್ಶನ್ ಮದುವೆಗೆ ಬರಲು ಆಗದೆ ಇದುದ್ದರಿಂದ ಪತ್ನಿ ವಿಜಯಲಕ್ಷ್ಮಿ ಅವ್ರು ಏಕಾಂಗಿಯಾಗಿ ಮದುವೆಗೆ ಬಂದಿದ್ದಾರೆ. ಇನ್ನೊಂದು ಮುಖ್ಯವಾದ ವಿಷಯ ಏನಪ್ಪ ಅಂದ್ರೆ ಜೂನ್ 7ರಂದು ಅಂದ್ರೆ ನಾಳೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿಣಿಯಲ್ಲಿ ನಡೆಯುವ ಅಭಿಷೇಕ ಹಾಗು ಅವಿವಾ ಅರತಕ್ಷತೆ ದರ್ಶನ್ ಬರ್ತಾರೆ ಅಂತ ಹೇಳಲಾಗ್ತಿದೆ.

ಇದನ್ನೂ ಓದಿ: ಉಚಿತ ಪ್ರಯಾಣಕ್ಕೂ ಟಿಕೆಟ್ ತಗೊಳ್ಳೆಬೇಕು! ಉಚಿತ ಬಸ್ ಪ್ರಯಾಣದ ಟಿಕೆಟ್ ಹೀಗಿರುತ್ತೆ ನೋಡಿ

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram