ಹೆಂಡತಿ ಕಾಟಕ್ಕೆ ಬೇಸತ್ತ ಪತಿ ಆತ್ಮಹತ್ಯೆ; ಸಾವಿಗೂ ಮುನ್ನ ಪೊಲೀಸರಿಗೆ ಹೇಳಬೇಡಿ ಅಂದುದ್ಯಾಕೆ ಗೊತ್ತಾ?

ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಿಯ ಆಗುತ್ತೆ ಅಂತ ಹಿರಿಯರು ಹೇಳ್ತಾರೆ, ಅಲ್ದೇ ಸತಿ ಪತಿಯರಿಬ್ಬರೂ ಅರಿತು ನಡುದ್ರೆ ಮನೆಯೇ ಸ್ವರ್ಗವಾಗುತ್ತೆ ಅನ್ನೋದು ರೂಢಿ. ಅದ್ರಲ್ಲೂ ಪತಿಯ ಶ್ರೇಯಸ್ಸಿಗೆ, ಪತಿಯ ವಂಶಭಿವೃದ್ಧಿಗೆ ಮಾಡದಿಯಾದವಳು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ತನ್ನ ಕುಟುಂಬದ ಹಿತಕ್ಕಾಗಿ ಪ್ರತಿದಿನ ತನ್ನ ಜೀವ ಸಾವೆಸುತ್ತಾಳೆ. ಪತಿ ಮತ್ತು ಮಕ್ಕಳಿಗಾಗಿ ಬರುವ ಎಲ್ಲ ದುಃಖ ನೋವನ್ನ ನುಂಗಿ ಮೆಟ್ಟಿನಿಂತು ತನ್ನ ಜೀವನವನ್ನೇ ತನ್ನವರಿಗಾಗಿ ಮೂಡಿಪಾಗಿಡುತ್ತಾಳೆ, ಅವಳನ್ನ ನಮ್ಮ ಭಾರತೀಯ ನಾರಿ ಅಂತಾರೆ. ಆದ್ರೆ ಇಲ್ಲೇಬ್ಬಾ ಕಿರಾತಕಿ ಪತ್ನಿಯ ಹಿಂಸೆ ತಾಳಲಾರದೇ ಪತಿ ಮಗಳನ್ನ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೂ ಮುನ್ನ ತನ್ನ ಒಡ ಹುಟ್ಟಿದ ಅಣ್ಣನಿಗೆ ಆಡಿಯೋ ಸಂದೇಶ ರವಾನಿಸಿ ಪ್ರಾಣ ಬಿಟ್ಟಿದ್ದಾನೆ. ಅಲ್ದೇ ಆಡಿಯೋದಲ್ಲಿ ಹೆಂಡತಿಯಿಂದ ತನು ಅನುಭವಿಸಿದ ಕಷ್ಟ ನೋವು ಅವಮಾನ ಎಲ್ಲವನ್ನ ಸಹೋದರನ್ನ ಬಳಿ ಹೇಳಿಕೊಂಡು ಮಗಳನ್ನ ಚೆನ್ನಾಗಿ ನೋಡಿಕೋ ಅಣ್ಣ ಅಂತ ಹೇಳಿ ಪಾಪದ ಪತಿ ಇಹ ಲೋಕ ತ್ಯಜಿಸಿಬಿಟ್ಟಿದ್ದಾನೆ.

WhatsApp Group Join Now
Telegram Group Join Now

ನೀನು ಹಳ್ಳಿ ಗುಗ್ಗು ಅಂತ ಪದೇ ಪದೇ ಕಿಚಾಯಿಸ್ತಿದ್ದ ಹೆಂಡತಿ ಮಾತಿಗೆ ಮನನೊಂದು ‘ನಮ್ಮ ಮೆಟ್ರೋ'(Namma Metro) ಎಂಜಿನಿಯರ್’ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೌದು ಹೆಂಡತಿ ಕಾಟಕ್ಕೆ ಮನನೊಂದು ‘ನಮ್ಮ ಮೆಟ್ರೋ'(Namma Metro) ಎಂಜಿನಿಯರ್’ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆಬಿ ಕ್ರಾಸ್ ಬಳಿಯ ಕುಂದೂರು ಪಾಳ್ಯದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು 38 ವರ್ಷದ ಮಂಜುನಾಥ್ ಅಂತ ಹೇಳಲಾಗಿದೆ.

ದೈನಂದಿನ ಹೊಸ ಮಾಹಿತಿಗಳಿಗಾಗಿ ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗಿ: Click Here To Join WhatsApp

ಮನನೊಂದು ಮೆಟ್ರೋ ಎಂಜಿನಿಯರ್ ಸೂಸೈಡ್

ಇನ್ನು ಮಂಜುನಾಥ್ ಬೆಂಗಳೂರಿನ ಬಿಎಂಆರ್ಸಿಎಲ್(BMRCL) ನಲ್ಲಿ ಇಂಜಿನೀಯರ್(Engineer) ಆಗಿ ಕೆಲಸ ಮಾಡುತ್ತಿದ್ದರು. ಇಂಜಿನಿಯರ್ ಅಂದರೆ ಸಂಬಳಕ್ಕೇನು ಕೊರತೆ ಇಲ್ಲ. ಕೈ ತುಂಬ ಸಂಬಳ ಪಡೆಯುತ್ತಿದ್ದರು. ಆದರೆ ಹೆಂಡತಿ ಪ್ರಿಯಾಂಕಾ ಕಾಟಕ್ಕೆ ಮನನೊಂದು ಪತಿ ಸಾವಿನ ಹಾದಿ ಹಿಡಿದಿದ್ದು ದುರಂತವೇ ಹೌದು. ಮದುವೆ ಆಗಿ 9ವರ್ಷ ಆದ್ರೂ ಕೂಡ ಪತ್ನಿಯ ನಿರಂತರ ಕಾಟ ತಪ್ಪಿರಲಿಲ್ಲ ಪತ್ನಿಯ ನಿತ್ಯದ ಕಾಟಕ್ಕೆ ಮನನೊಂದು ಇದೀಗ ಮಂಜುನಾಥ ಸಾವಿನ ಮನೆ ಸೇರಿಬಿಟ್ಟಿದ್ದಾರೆ. ಪತಿಯನ್ನ ಪದೇ ಪದೇ ಹೀಯಾಳಿಸಿ, ನಿನ್ನನ್ನ ಮದುವೆ ಆಗಬಾರದಿತ್ತು, ನನಗೆ ಅಂತಹ ಗಂಡು ಬಂದಿದ್ರು ಇಂತಹ ಗಂಡು ಬಂದಿದ್ರು, ನೀನು ಹಳ್ಳಿಯವನು, ಪೆದ್ದ, ಹಳ್ಳಿ ಗುಗ್ಗು ಅಂತೆಲ್ಲಾ ಹೀಯಾಳಿಸಿ ಪ್ರತಿದಿನ ಪತಿಗೆ ನರಕಯಾತನೆ ತೋರಿಸುತ್ತಿದ್ದ ಪತ್ನಿಯ ಕಾಟಕ್ಕೆ ಇಂದು ಪತಿ ಉಸಿರು ಚೆಲ್ಲಿದ್ದಾನೆ.

ಹೌದು ಮೃತ ಮಂಜುನಾಥ್ ಹಾಗೂ ಪ್ರಿಯಾಂಕಾ ನಡುವಿನ ಜಗಳ ನಿನ್ನೆ ಇಂದಿನದಲ್ಲ, ಮದುವೆ ಆದಾಗಿನಿಂದಲೂ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪದೇ ಪದೇ ಹೆಂಡತಿ ಗಂಡನನ್ನು ಹೀಯಾಳಿಸುತ್ತಿದ್ದಳಂತೆ. ನೀನು ಹಳ್ಳಿ ಗುಗ್ಗು, ನಿನ್ನನ್ನು ಮದುವೆಯಾಗಲು ನನಗೆ ಇಷ್ಟರಲಿಲ್ಲ ಎಂದು ಪತಿಯನ್ನು ಪತ್ನಿ ಹೀಯಾಳಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದು ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಬಗ್ಗೆ ಮಂಜುನಾಥ್ ಕುಟುಂಬಸ್ಥರು ಪ್ರಿಯಾಂಕಾ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಈ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ವಿರುದ್ಧ ಎಫ್‌ಐಆರ್(F.I.R) ದಾಖಲಾಗಿದೆ.

ಇನ್ನು ಸಾಯೋ ಮುನ್ನ ಮುಂಜುನಾಥ್ ತನ್ನ ಅಣ್ಣನಿಗೆ ಆಡಿಯೋ ಮೆಸೇಜ್ ಮಾಡಿದ್ದಾರೆ. ಅದರಲ್ಲಿ ನನಗೆ ಅವಳ ಜೊತೆ ಜೀವನ ಮಾಡೋಕೆ ಆಗ್ತಾ ಇಲ್ಲ. ಆ ಮನೆಹಾಳಿಯಿಂದ ನಾನು ಸಾಯ್ತಾ ಇದ್ದೀನಿ. ನನ್ನ ಮಗಳನ್ನ ಚೆನ್ನಾಗಿ ನೋಡಿಕೊಳ್ಳೋಕೆ ಹೇಳು. ಯಾರು ಬೇಜಾರ್ ಮಾಡ್ಕೊಬೇಡಿ ಕಣ್ರೋ ಪ್ಲೀಸ್. ನಾವು ಕೂಲಿ ಮಾಡ್ಕೊಂಡ್ ಜೀವನ ಮಾಡುವವರಂತೆ. ಹಳ್ಳಿಗೆ ಬರಲ್ಲ ಅಂದೊಳನ್ನ ಯಾಕಪ್ಪ ನನಗೆ ಮದುವೆ ಮಾಡಿದ್ರು. ಮೈಸೂರಲ್ಲಿ ಯಾರನ್ನೋ ನೋಡಿದ್ಲಂತೆ, ಅವ್ರನ್ನೇ ಆಗ್ಬೆಕಿತ್ತಂತೆ. ಪೊಲೀಸ್ ಗೆ ಹೇಳ್ಬೇಡಿ, ಪೋಸ್ಟ್ ಮಾರ್ಟಮ್ ಮಾಡ್ಬಿಡ್ತಾರೆ ಅಂತ ಅಣ್ಣನಿಗೆ ಆಡಿಯೋ ಮೆಸೇಜ್ ಕಳುಹಿಸಿ ಮಂಜುನಾಥ್ ಸಾವಿನ ಹಾದಿ ಹಿಡಿದಿರೋದು ನಿಜಕ್ಕೂ ದುರಂತ.

ಇದನ್ನೂ ಓದಿ: ಸಾರಿಗೆ ಇಲಾಖೆಯಿಂದ ಬಂಪರ್ ಗುಡ್ ನ್ಯೂಸ್; ಖಾಲಿಯಿರುವ 13ಸಾವಿರ ಉದ್ಯೋಗ ನೇಮಕಾತಿಗೆ ಅಧಿಸೂಚನೆ

ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಹೊರಬಂತು ಮತ್ತೊಂದು ಗುಡ್ ನ್ಯೂಸ್; 75 ಲಕ್ಷ ಮನೆಗಳಿಗೆ ಉಚಿತ ಎಲ್ ಪಿಜಿ ಗ್ಯಾಸ್!

ದೈನಂದಿನದ ಹೊಸ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂಗೆ ಜಾಯಿನ್ ಆಗಿ: Click Here To Join Telegram